ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ನಮಗೆ ಆನ್ ಲೈನ್ ಶಿಕ್ಷಣ ಬೇಡ,ಶಾಲೆ ತೆರೆದು ಶಿಕ್ಷಣ ಕೊಡಿ ಎಂದು ಭಿನ್ನವಿಸಿಕೊಂಡ ವಿದ್ಯಾರ್ಥಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬನ್ನೂರು ಸ್ಪೂರ್ತಿ ಯುವ ಸಂಸ್ಥೆಯ ಸಹಕಾರದೊಂದಿಗೆ ಮಕ್ಕಳ ಮಾಸೋತ್ಸವ ಪ್ರಯುಕ್ತ ಮಕ್ಕಳ ಸಂವಾದ ಕಾರ್ಯಕ್ರಮವು ಬನ್ನೂರು ಸ್ಪೂರ್ತಿ ಮೈದಾನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ವತ್ಸಲಾ ನಾಯಕ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಣ ಸಂಪನ್ಮೂಲ ಕೇಂದ್ರದ ಪುತ್ತೂರು ತಾಲೂಕು ಕಾರ್ಯದರ್ಶಿ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಇವರು ಮಕ್ಕಳಿಗೆ ಶೈಕ್ಷಣಿಕ ಜಾಗ್ರತಿ ಬಗ್ಗೆ ಮಾಹಿತಿ ನೀಡಿದರು.ಸ್ಪೂರ್ತಿ ಯುವ ಸಂಸ್ಥೆಯ ದಿನೇಶ್ ಸಾಲ್ಯಾನ್, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷರಾದ ನವೀನ್ ರೈ ಬನ್ನೂರು ಇವರುಗಳು ಸಂದರ್ಭೋಚಿತವಾಗಿ ಮಾತನಾಡಿದರು.
ಭಾಗವಹಿಸಿದ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣ ಬೇಡ,ಶಾಲೆ ತೆರೆದು ನಮಗೆ ಶಿಕ್ಷಣ ಕೊಡಿ ಎಂದು ಭಿನ್ನವಿಸಿಕೊಂಡರು ಸ್ಪೂರ್ತಿ ಯುವ ಸಂಸ್ಥೆಯ ಸದಸ್ಯರಾದ ಪ್ರಕಾಶ್, ಸನ್ನಿಧಿನಗರ ಸ್ತ್ರೀಶಕ್ತಿ ಗುಂಪಿನ ಅಧ್ಯಕ್ಷರಾದ ಪರಮೇಶ್ವರಿ, ಬನ್ನೂರು ಅಂಗನವಾಡಿ ಕಾರ್ಯಕರ್ತರಾದ ರೋಹಿಣಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸ್ತ್ರೀ ಶಕ್ತಿ ಸಂಸ್ಥೆಯ ಸುನೀತಾ ,ಜೆನೆಟಾ, ಬೇಲು ರೂಪ ಅಲ್ಲದೆ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯರೂ ಕಾರ್ಯಕ್ರಮ ಸಂಯೋಜಕರೂ ಆದ ನ್ಯಾಯವಾದಿ ರಾಜೇಶ್ವರಿ ಸ್ವಾಗತಿಸಿ ಚೆಲುವಮ್ಮನ ಕಟ್ಟೆ ಅಂಗನವಾಡಿ ಕಾರ್ಯಕರ್ತೆ ಜಯಂತಿ ಸಿ.ಪಾಟಾಳಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.