(www.vknews.com) : 2007/ 08 ರಲ್ಲಿ ಸಕಲೇಶಪುರ ಕೌಡಳ್ಳಿ ಎಂಬ ಗ್ರಾಮದಲ್ಲಿ ಮುಸ್ಲಿಮರ ಒಕ್ಕಲೆಬ್ಬಿಸುವ ಕೆಲಸ ರಭಸದಿಂದ ನಡೆದಿತ್ತು.
ಸಕಲೇಶಪುರ ತಾಲ್ಲೂಕು ಕೌಡಳ್ಳಿ ಎಂಬ ಗ್ರಾಮದಲ್ಲಿ ಮುಸಲ್ಮಾನರ ನಾಲ್ಕೈದು ಮನೆಗಳು ಮಾತ್ರ ಇತ್ತು ಆ ನಾಲ್ಕೈದು ಮನೆಗಳು ಗುಲಾಂ ಹುಸೇನ್ ಎಂಬ ಒಂದೇ ಮನೆತನಕ್ಕೆ ಸೇರಿದ್ದಾಗಿತ್ತು.
ಈ ಗುಲಾಮ ಹುಸೇನ್ ಮನೆತನವು ಸ್ವತಂತ್ರ ಭಾರತಕ್ಕಿಂತಲೂ ಅದೆಷ್ಟು ವರ್ಷಗಳ ಮುಂಚಿನ ಇತಿಹಾಸವನ್ನು ಹೊಂದಿರುವುದಾಗಿದೆ ಮಾತ್ರವಲ್ಲ ಇಲ್ಲಿರುವ ಹಜರತ್ ಸೈಯದ್ ಅಬೂಬಕ್ಕರ್ ಶಾವಲಿ ಉಲ್ಲಾ ಹಿ ರವರ ದರ್ಗಾವು ಟಿಪ್ಪುಸುಲ್ತಾನ್ ಕಾಲದಿಂದಲೂ ನೆಲೆಸಿರುವುದಾಗಿ ಯೂ ಅವರ ಪೀಳಿಗೆ ಯಾಗಿ ಬಂದವರಾಗಿದ್ದಾರೆ ಗುಲಾಮ್ ಹುಸೇನ್ ಹಾಗೂ ಅಮೀನಮ್ಮ ದಂಪತಿಗಳು. ಇವರ ಪೀಳಿಗೆಯಲ್ಲಿ ನೆಲೆಸಿರುವವರು ಗುಲಾಂ ಹುಸೇನ್ ಕುಟುಂಬಸ್ಥರು ಹೀಗೆ ಹಲವು ವರ್ಷಾನುಗಟ್ಟಲೆ ಹಿಂದಿನಿಂದಲೂ ಅಲ್ಪಸಂಖ್ಯಾತರಾಗಿ ನೆಲೆಸಿದ್ದ ಅಬೂಬಕರ್ ಷಾ ವಲಿಯುಲ್ಲಾಹಿ ಅವರ ಗುಲಾಮ್ ಹುಸೇನ್ ಕುಟುಂಬಸ್ಥರಿಗೆ ಬಹುಸಂಖ್ಯಾತರಾಗಿದ್ದ ಹಿಂದೂ ಗಳಿಂದ ಯಾವುದೇ ದಬ್ಬಾಳಿಕೆಗಳಾಗಲಿ ಹಲ್ಲೆ ಗಳಾಗಲಿ ಬೆದರಿಕೆ ಗಳಾಗಲಿ ಇರಲಿಲ್ಲ. ಬದಲಿಗೆ ಪರಸ್ಪರ ಸೌಹಾರ್ದದಿಂದ ಸಹಬಾಳ್ವೆಯಿಂದ ಶಾಂತಿ ನೆಮ್ಮದಿ ಸಂತೋಷದಿಂದ ಬಾಳಿ ಬದುಕಿದ್ದರು.
ಇದಕ್ಕೆಲ್ಲ ಪ್ರಮುಖ ಕಾರಣವೆಂದರೆ ಊರಿನ ಸಹೃದಯಿ ಗಳಾದ ಹಿಂದೂಗಳಾಗಿದ್ದರು ಮತ್ತು ಅಬುಬಕರ್ ಷ ವಲಿ ಅವರ ಗುಲಾಮ ಹುಸೇನ್ ಕುಟುಂಬಸ್ಥರ ಸ್ವಭಾವವು ಒಡನಾಟವು ಕೂಡ ಆಗಿತ್ತು.
ಆದರೆ ನಾನು ಇಷ್ಟೆಲ್ಲ ಇಲ್ಲಿ ಹೇಳಲು ಕಾರಣವೇನೆಂದರೆ ಮುಂದಿನ ದಿನಗಳಲ್ಲಿ ಅಂದರೆ 2008 ರಲ್ಲಿ ಸೌಹಾರ್ದವೂ ಬದಲಾವಣೆ ಕಂಡಿತ್ತು ಅದಕ್ಕೆ ಕಾರಣವೆಂದರೆ ಊರಿಗೆ ನೂತನವಾಗಿ ಒಕ್ಕರಿಸಿದ ಕೆಲವರಾಗಿದ್ದರು ಕೋಮು ಭಾವನೆಯನ್ನು ತುಂಬಿಕೊಂಡಿದ್ದ ಅವರ ವಿಕೃತ ಮನಸ್ಸು ಮತ್ತು ಕೋಮು ಪ್ರಚೋದನೆ ನೀಡಿ ಚಿಕ್ಕಪುಟ್ಟ ವಿಷಯವನ್ನು ದೊಡ್ಡದಾಗಿ ಮಾಡಿ ವಿಷಬೀಜವನ್ನು ಬಿತ್ತಿ ಉರಿಯುವ ಬೆಂಕಿಗೆ ತುಪ್ಪ ಸುರಿದು ಪರಸ್ಪರ ಕಚ್ಚಾಡಿ ಸಲು ಶ್ರಮಿಸುತ್ತಿದ್ದ ಸಂಘಪರಿವಾರದವರು ಚಿಕ್ಕ ಪುಟ್ಟ ವಿಷಯಕ್ಕೆ ಊರಿನ ಒಳಗೆ ಬಂದು ಬೆದರಿಕೆ ಹಾಕುತ್ತಿದ್ದ ಗುಂಡಾಗಳು ಆಗಿದ್ದರು.
ಇದರಿಂದ 2008 ರಲ್ಲಿ ಅದೆಷ್ಟು ತಲೆಮಾರಿನಿಂದ ಜೀವಿಸಿಕೊಂಡು ಬಂದಿದ್ದ ಅಬೂಬಕ್ಕರ್ ಷ ಅವರ ಕುಟುಂಬದ ಗುಲಾಮ ಹುಸೇನ್ ಮೊಮ್ಮಗನಾದ ಶಂಸುದ್ದಿನ್ ಎಂಬ ವೃತ್ತಿಯಲ್ಲಿ ಗುರುಗಳಾಗಿದ್ದ ಇವರು ತನ್ನ ತಾತನ ಜಾಗದಿಂದ ತನಗೆ ದೊರಕಿದ ಸ್ವಲ್ಪ ಜಾಗಕ್ಕೆ ಬೇಲಿ ಹಾಕುವ ಕೆಲಸಮಾಡುತ್ತಿದ್ದಾಗ ಸಂಬಂಧವೇ ಇಲ್ಲದ ವಿಷಯವಾಗಿ ಸುಮ್ಮಸುಮ್ಮನೆ ಕ್ಯಾತೆ ತೆಗೆದು ಅಣ್ಣೇಗೌಡ ಅಲಿಯಾಸ್ ಮುತ್ತೇ ಗೌಡ ಎಂಬುವವನು ಶಂಸುದ್ದೀನ್ ರವರನ್ನು ತುಂಬಾ ಕೆಟ್ಟ ಶಬ್ದಗಳಿಂದ ನಿಂದಿಸಿ ಉಗ್ರಗಾಮಿ ಎಂದು ಗಡ್ಡವನ್ನು ಎಳೆದು ಧಳಿಸಲು ಮುಂದಾಗುತ್ತಾನೆ. ವೃತ್ತಿಯಲ್ಲಿ ಗುರುಗಳಾಗಿದ್ದವರು ಅವರು ಯಾರ ತಂಟೆಗೂ ತಕರಾರಿಗೆ ಹೋಗದವರು ಭಯಭೀತರಾಗುತ್ತಾರೆ.
ನಂತರ ಇದೇ ವಿಷಯವಾಗಿ ಮೇಲಿನ ವ್ಯಕ್ತಿಯು ಜಗಳವನ್ನು ಮುಂದುವರಿಸಿದಾಗ ಸಣ್ಣಪುಟ್ಟ ಜಗಳಗಳು ಪ್ರಾರಂಭವಾಗುತ್ತದೆ ಆಗ ಮಧ್ಯಪ್ರವೇಶಿಸಿದ ಸಂಘಪರಿವಾರವು ಬೆದರಿಕೆ ಹಾಕುವುದು ಗುಂಡಾಗಿರಿ ಮಾಡುವುದನ್ನು ಪ್ರಾರಂಭಿಸುತ್ತದೆ.
ರಾತ್ರಿ ವೇಳೆ ನಿಮ್ಮ ಮನೇಗೆ ಭಯೋತ್ಪಾದಕರು ಬರುತ್ತಾರೆ ಎಂದು ಅರೋಪಿಸುತ್ತಾರೆ. ಇದರಿಂದ ಭಯಗೊಂಡ ಸಂಶುದ್ದೀನ್ ರವರು ಬೇಸತ್ತು ಊರನ್ನೇ ತೊರೆದು ಹೋಗುತ್ತಾರೆ.
ಅಲ್ಲಿಗೆ ಸುಮ್ಮನಾಗದ ಸಂಘಪರಿವಾರವು ಮುತ್ತೆ ಗೌಡನ ಜೊತೆ ಸೇರಿ ಇನ್ನು ಊರಿನ ಕೆಲವು ಗೋಮುಖ ವ್ಯಾಘ್ರ ರನ್ನು ಸೇರಿಸಿಕೊಂಡು ಊರಿನಲ್ಲಿರುವ ಎಲ್ಲಾ ಮುಸ್ಲಿಮರ ಮನೆಯನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಪ್ರಾರಂಭಿಸುತ್ತದೆ
ಆ ದಿನಗಳಲ್ಲಿ ಊರಿನಲ್ಲಿದ್ದ ಇಸ್ಮಾಯಿಲ್ ಮುಸ್ತಫ ಇಬ್ರಾಹಿಂ ಮನೆಯ ಹಿರಿಯರು ಗಳಾದ ಇವರುಗಳನ್ನು ಒಂದು ವಠಾರಕ್ಕೆ ಎಳೆದೊಯ್ದು ಮಾನಸಿಕ ಹಿಂಸೆಯನ್ನು ನೀಡಿ ಒಕ್ಕಲೆಬ್ಬಿಸುವ ವಿಷಯವಾಗಿ ಬಲವಂತವಾಗಿ ಒಂದು ಪತ್ರಕ್ಕೆ ನಾವುಗಳು ಸ್ವಯಂ ಪ್ರೇರಿತವಾಗಿ ಊರು ಬಿಟ್ಟು ಹೋಗುತ್ತಿರುವುದಾಗಿ ಚಾಪ ಕಾಗದಕ್ಕೆ ಸಹಿಯನ್ನು ಪಡೆದುಕೊಳ್ಳುತ್ತದೆ ಆದರೂ ಕುಗ್ಗದ ಇವರುಗಳು ಮೂವರೇ ಇದ್ದರು ಆತ್ಮಸ್ಥೈರ್ಯದಿಂದ ಅವರ ವಿರುದ್ಧ ಹೋರಾಟವನ್ನು ನಡೆಸುತ್ತಾರೆ ಹಲವು ವಿಧದ ನೋವುಗಳನ್ನು ಕಷ್ಟವನ್ನು ಸಹಿಸುತ್ತಾರೆ ಆದರೂ ಊರನ್ನು ಬಿಟ್ಟು ಹೋಗಲಾರೆವು ಬೇಕಾದರೆ ಪ್ರಾಣ ಬಿಡುವೆವು ಎಂದು ಪಟ್ಟುಹಿಡಿದು ಧೈರ್ಯದಿಂದ ಹೋರಾಡುತ್ತಾರೆ.
ಇದನ್ನೆಲ್ಲ ಇಷ್ಟಪಡದ ಸಹಿಸದ ಕೆಲವು ಸಹೃದಯಿ ಆದ ಹಿಂದೂಗಳು ಇದನ್ನೆಲ್ಲ ತಡೆಯಲು ಮುಂದಾಗುತ್ತಾರೆ ಆದರೆ ಅವರ ಬಲದ ಮುಂದೆ ಕುಗ್ಗಿ ಬಲವಂತವಾಗಿ ಒಕ್ಕಲೆಬ್ಬಿಸುವ ಕೆಲಸಕ್ಕೆ ಸಹಿಯನ್ನು ಹಾಕುತ್ತಾರೆ.
ವಿಷಯ ಗಂಭೀರ ವನ್ನು ಪಡೆದು ಹೊರಗೆ ತಿಳಿಯುತ್ತದೆ ಆಗ ಸಕಲೇಶಪುರದ ಜಾಮಿಯಾ ಮಸೀದಿ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಸಹಾಯಕ್ಕೆ ಬಂದು ಹೋರಾಟ ನಡೆಸಿತ್ತು.
ಆದರೆ ನಿರಂತರವಾಗಿ ಪ್ರಬಲವಾಗಿ ಹೆಜ್ಜೆಹೆಜ್ಜೆಗೂ ಹೋರಾಟ ನಡೆಸಿದವರು ಎಂದರೆ ಎಸ್ ಎನ್ ಮಲ್ಲಪ್ಪ, ತಿಮ್ಮ ಕೌಡಳ್ಳಿ, ಮಲ್ನಾಡ್ ಮೆಹಬೂಬ್, ಕಾಡಪ್ಪ, ಜೈಭೀಮ್ ಮಂಜು, ಇನ್ನೂ ಹಲವು ಮುಖಂಡರು ಗಳಾಗಿದ್ದಾರೆ ಅದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಎಸ್ ಎನ್ ಮಲ್ಲಪ್ಪ ಹಾಗೂ ಮಲ್ನಾಡ್ ಮೆಹಬೂಬ್ ಆಗಿದ್ದರು.
ಇನ್ನು ಊರಿನವರೇ ಆದ ಕೆಲವು ಸಹೃದಯಿ ಹಿಂದೂ ಸಹೋದರರು ಸೇರಿದ್ದರು ಇವರೆಲ್ಲರ ಕಠಿಣ ಪರಿಶ್ರಮದಿಂದ ಗೋಮುಖ ವ್ಯಾಘ್ರ ರಿಗೆ ಮುಖಬಂಗ ವಾಗಿ ಊರಿನ ಅಲ್ಪಸಂಖ್ಯಾತ ಮುಸ್ಲಿಮರಿಗೆ ನ್ಯಾಯ ದೊರಕಿ ಶಾಂತಿ ಮತ್ತೆ ನೆಲೆಸಿ ನೆಮ್ಮದಿಯಿಂದ ಬಾಳುವಂತೆ ಆಯಿತು. ಮಲ್ನಾಡ್ ಮೆಹಬೂಬ್ ರವರು ಪೋಲಿಸ್ ವಿಲಾಖೆ ಜೋತೆ, ವಿವಿಧ ಸಂಘಟನೆಗಳ ಜೋತೆ. ಜಾಮಿಯ ಮಸೀದಿ ಹಾಗೂ ಮುಸ್ಲಿಂ ಮುಖಂಡರನ್ನು ಸೇರಿಸಿ ಒಂದು ಶಕ್ತಿ ಯಾಗಿ ಕೆಲಸಮಾಡಿದರು. ಬೆಂಗಳೂರಿನಿಂದ ಪ್ರಗತಿ ಪರರ ಒಂದು ತಂಡ ಬಂದಿತ್ತು.
ಮೇಲಿನ ಘಟನೆಯು ನಡೆದ ಕೆಲವು ದಿನಗಳ ನಂತರದಿಂದ ಊರಿನಲ್ಲಿ ಮತ್ತಷ್ಟು ಸ್ನೇಹ ಸಂಯಮ ದೊಂದಿಗೆ ಸೌಹಾರ್ದ ದೊಂದಿಗೆ ಮೆರೆಯುತ್ತಿರುವ ಕೌಡಳ್ಳಿ ಹಿಂದೂ ಬಾಂಧವರು ದರ್ಗಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ಉರುಸ್ ಸಮಾರಂಭವನ್ನು ಗುಲಾಮ ಹುಸೇನ್ ಕುಟುಂಬಸ್ಥರ ಜೊತೆಗೂಡಿ ಊರಿನ ನಾಯಕರುಗಳಾದ ಭಾಸ್ಕರ್ ಗೌಡ್ರು, ಲೋಹಿತ್ ಕೌಡಳ್ಳಿ, ಟ್ವಿಂಕಲ್ ಭಾಸ್ಕರ್, ಪುಟ್ಟಣ್ಣ, ರಾಜಣ್ಣ, ಪಾಪಣ್ಣ, ದೇವರಾಜ್ ಗೌಡ್ರು, ತಿಮ್ಮ, ಕಾಳ, ಮಂಜು, ಪುಟ್ಟರಾಜು, ಇನ್ನೂ ಹಲವರು. ಹಾಗೂ ಊರಿನವರು ಸೇರಿ ಬಹಳ ವಿಜೃಂಭಣೆಯಿಂದ ನಡೆಸುತ್ತಾರೆ.
ಮಾತ್ರವಲ್ಲ ಊರಿನಲ್ಲಿ ನಡೆಯುವ ಗಣಪತಿ ಹಬ್ಬಕ್ಕೆ ಖಾರ್ತಿ ಮತ್ತಿತರ ಸಮಾರಂಭದಲ್ಲಿ ಮುಸ್ಲಿಂ ಕುಟುಂಬದವರಿಗೆ ಪ್ರಮುಖಪಾತ್ರ ಸ್ಥಾನಮಾನ ನೀಡಲಾಗುತ್ತದೆ.
ಹೀಗೆ ಈ ಊರಿನಲ್ಲಿ ಸೌಹಾರ್ದದಿಂದ ನಡೆಯುತ್ತಿರುವುದನ್ನು ಸಹಿಸದ ಕೋಮುವಾದದ ಭೂತಗಳು ಇದನ್ನು ಕೆಡಿಸಲು ಶ್ರಮ ನಡೆಸುತ್ತಿದೆ ಅದು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಎರಡರಲ್ಲು ಸಹ ಅಡಗಿದೆ. ಇಂತಹ ಶಕ್ತಿಗಳಿಗೆ ಅವಕಾಶ ನೀಡದೆ ಅವರನ್ನು ಸೋಲಿಸಿ ಮಟ್ಟಹಾಕಬೇಕು ಎನ್ನುವುದೇ ನನ್ನಂತಹ ಊರಿನ ಅದೆಷ್ಟು ಜನರ ಆಸೆ ಆಗಿದೆ ಅವರೆಲ್ಲರ ಅಭಿಪ್ರಾಯವನ್ನು ಜೊತೆಗೂಡಿಸಿ ನಾನು ಇಲ್ಲಿ ಬರೆದಿದ್ದೇನೆ ಅಷ್ಟೇ.
ಇದನ್ನು ಬರೆಯಲು ಇನ್ನು ಪ್ರಮುಖ ಎರಡು ಕಾರಣಗಳಿವೆ ಅದೇನೆಂದರೆ 2007/ 8ನೇ ಘಟನೆಯನ್ನು ಮತ್ತೆ 2020ನೇ ಕೆಲವು ತಿಂಗಳ ಹಿಂದೆ ಮರುಕಳಿಸಲು ನೋಡಿದ ಅದೇ ವ್ಯಕ್ತಿ ಮತ್ತೆ ಇಲ್ಲಸಲ್ಲದ ವಿಷಯವಾಗಿ ಕ್ಯಾತೆ ತೆಗೆದು ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದಾಗ ಮಧ್ಯಪ್ರವೇಶಿಸಿ ಶಾಂತಿಯನ್ನು ಕಾಪಾಡಿದ್ದು ಲೋಹಿತ್ ಕೌಡಳ್ಳಿ, ಹಾಗೂ ಮಲ್ನಾಡ್ ಮೆಹಬೂಬ್ ಆಗಿದ್ದಾರೆ ಇಂತಹ ಸಮಾಜಸೇವಕರು ಸಮಾಜದಲ್ಲಿ ಮತ್ತಷ್ಟು ಹುಟ್ಟಿ ಕೊಳ್ಳಲಿ .
ಇನ್ನು ಎರಡನೇದ್ದು ಮೊನ್ನೆ ಸುಂಡೇಕೆರೆ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಸಮಾಧಾನದಿಂದ ಹೋರಾಡಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಎಲ್ಲಾ ನಾಯಕರುಗಳಿಗೆ ಪ್ರತ್ಯೇಕವಾಗಿ ಯುವಕರಿಗೆ ಹಾಗೂ ಕಾರ್ಯನಿರ್ವಹಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಧನ್ಯವಾದಗಳನ್ನು ಸಲ್ಲಿಸಲು ಆಗಿದೆ.
ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.
Mansoor Ahmed Kawdally
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.