ಮ್ಯಾನ್ಮಾರ್ (ವಿಶ್ವ ಕನ್ನಡಿಗ ನ್ಯೂಸ್): ಫೆಬ್ರವರಿಯಲ್ಲಿ ಆಡಳಿತದಲ್ಲಿ ಮಿಲಿಟರಿ ಮಧ್ಯಪ್ರವೇಶದ ಬಳಿಕ ನಡೆಯುತ್ತಿರುವ ಪ್ರತಿಭಟನೆಯನ್ನು ಮಿಲಿಟರಿಯು ರಕ್ತಸಿಕ್ತಗೊಳಿಸಿದ್ದು ,ಈ ಹಿಂಸಾಚಾರಕ್ಕೆ ಮ್ಯಾನ್ಮಾರ್ ನಲ್ಲಿ 618 ಮಂದಿ ಬಲಿಯಾಗಿದ್ದಾರೆ ಎಂದು ಅಸೋಷಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್ (ಎಎಪಿಪಿ) ತಿಳಿಸಿದೆ.
ಶನಿವಾರ ನಡೆದ ಪ್ರತಿಭಟನೆಯಲ್ಲಿ 82 ಮಂದಿ ಬಲಿಯಾಗಿದ್ದಾರೆ. ಮ್ಯಾನ್ಮಾರ್ ನಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿ ನೆಲೆಗೊಳ್ಳಬೇಕೆಂದು ನಾವು ಬಯಸುತ್ತಿದ್ದೇವೆ,ಹಿಂಸಾಚಾರ ಕೂಡಲೇ ಕೊನೆಗೊಂಡು,ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿ ,ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಬೇಕೆಂದು ಒತ್ತಾಯಿಸುವುದಾಗಿ ಅಮೆರಿಕಾ-ಯುಕೆ-ಕೆನಡಾ-ಆಸ್ಟ್ರೇಲಿಯಾ-ನ್ಯೂಝಿಲ್ಯಾನ್ಡ್-ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ ಲ್ಯಾನ್ಡ್ ರಾಜತಾಂತ್ರಿಕರು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.