ಚಾಮರಾಜನಗರ (ವಿಶ್ವ ಕನ್ನಡಿಗ ನ್ಯೂಸ್) : ನಗರದ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವಿನ ಹಿನ್ನೆಲೆಯಲ್ಲಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಅವರು, ಕೊನೆ ಗಳಿಗೆಯವರೆಗೆ ಮನೆಯಲ್ಲಿ ಕುಳಿತು, ಬೇರೆ ಬೇರೆ ಔಷಧಿಗಳನ್ನು ಮಾಡಿ ನೋಡಿ ಗುಣವಾಗದೆ ಆ ಮೇಲೆ ಆಸ್ಪತ್ರೆಗೆ ಹೋಗುವ ಪರಿಪಾಠ ಬಿಟ್ಟುಬಿಡಿ, ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದ ಕೂಡಲೇ ಆಸ್ಪತ್ರೆಗೆ ಬಂದು ದಾಖಲಾದರೆ ಈ ರೀತಿ ಹೆಚ್ಚಿನ ಸಾವಿನ ಪ್ರಮಾಣ ತಪ್ಪಿಸಬಹುದು ಎಂದು ಹೇಳಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗೆಯವರೆಗೆ 24 ಸಾವು ಸಂಭವಿಸಿದೆ, ಇದು ಅತ್ಯಂತ ದುಃಖದ ಸಂಗತಿ, ಇಲ್ಲಿ 24 ಮಂದಿ ಕೂಡ ಆಮ್ಲಜನಕದ ಕೊರತೆಯಿಂದ ಮೃತಪಟ್ಟರು ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ವರದಿ ಕೇಳಿದ್ದೇನೆ ಎಂದರು. ಇನ್ನು 12 ಗಂಟೆಯೊಳಗೆ ಡೆತ್ ರಿಪೋರ್ಟ್ ಆಡಿಟ್ ಬರುತ್ತದೆ, ಅದಕ್ಕಾಗಿ ನಾವು ಕಾಯತ್ತಿದ್ದೇವೆ ಎಂದು ಹೇಳಿದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.