ವಿಕೆ ನ್ಯೂಸ್:- ಪುತ್ತೂರಿನ ಬೊಳವಾರಿನ ಆಂಜನೇಯ ಯಕ್ಷಗಾನ ಕಲಾ ಸಂಘದ ಸದಸ್ಯರ ಅಂತರ್ಜಾಲ ಗೂಗಲ್ ಮೀಟ್ ನಲ್ಲಿ ಯಕ್ಷಗಾನ ತಾಳಮದ್ದಳೆ ದಿನಾಂಕ 29-05-2021 ಶನಿವಾರದಂದು ಮಧ್ಯಾಹ್ನ 2ಗಂಟೆಗೆ ಗಣಪತಿ ಪೂಜೆಯೊಂದಿಗೆ ಶುರುವಾಯಿತು. ಮರೀಲುಯಲ್ಲಿ ಭಾಗವತರು ಮತ್ತು ಚಂಡೆಯವರು, ಮುಂಜೂರು ಪಂಜದಲ್ಲಿ ಮದ್ದಲೆಯವರು, ಕಲ್ಲಾರೆಯಿಂದ ಶ್ರೀಕೃಷ್ಣ, ಕೆನ್ನಿಂಜೆ ಮರೀಲುನಲ್ಲಿ ದ್ರೌಪತಿ, ಪರ್ಲಡ್ಕ ಶಿವಪೇಟೆಯಲ್ಲಿ ವಿದುರ, ಕೃಷ್ಣನಗರಿಯ ಬಲ್ಯದಿಂದ ಕೌರವ, ನೆಹರುನಗರದಿಂದ ಭಾನುಮತಿಯ ಪಾತ್ರದಲ್ಲಿ ಹೀಗೆ ಅಗತ್ಯಕ್ಕಿಂತಲೂ ಹೆಚ್ಚು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗೂಗುಲ್ ಮೀಟ್ ಮೂಲಕ ಅಂತರ್ಜಾಲ ಯಕ್ಷಗಾನ ತಾಳಮದ್ದಲೆ “ಕೃಷ್ಣ ಸಂಧಾನ” ಎಂಬ ಪ್ರಸಂಗವನ್ನು ನಡೆಸಿಕೊಟ್ಟರು. ಶನಿವಾರ ಮಧ್ಯಾಹ್ನ 2ಗಂಟೆಗೆ ಭಾಗವತರು ಚಂಡೆಗುಳಿ ಉದಯ ನರಸಿಂಹ ಶಾಸ್ತ್ರಿಯವರು “ಗಜಮುಖದವಗೇ ಗಣಪಗೆ” ಎಂದು ಪ್ರಾರಂಭವಾದ ತಾಳಮದ್ದಲೆ ನಂತರ ಗಾಳಿಮನೆ ಡಾ. ವಿನಾಯಕ ಭಟ್ ರವರ ಶ್ರೀಕೃಷ್ಣ ಅರ್ಥಗಾರಿಕೆಯಲ್ಲಿ ಪ್ರಾರಂಭವಾಗಿ “ದಾನವಾಂತಕ ಕೇಳನ್ನೆಂಬ ಬಗೆಗೆ| ಮಾನಿನಿಯನಿಲಜಾರಡುವ ನುಡಿಗೆ||” ಎನ್ನುವ ದ್ರೌಪತಿಯ ಅಳಲನ್ನು ತನ್ನ ಅಣ್ಣ ನಾದ ಶ್ರೀಕೃಷ್ಣನಿಗೆ ಹೇಳಿ, ಸಂಧಿಯನ್ನು ಮುರಿದು ಯುದ್ಧವನ್ನು ನಿಶ್ಚೈಸಿ ಬಾ ಅಣ್ಣ, ನನ್ನ ಮುಡಿಯನ್ನು ನೋಡು ಭೂಮಿಯವರೆಗೆ ಬೀಳಲ್ ಪಟ್ಟಿದೆ ನನ್ನ ಪತಿದೇವರ ಪ್ರತಿಜ್ಞೆ ಇರೆಡುದು ಇಲ್ಲ. ಚಂದ್ರ ವಂಶ ಪ್ರತಿಜ್ಞಾ ಭಂಗ ಮಾಡಿದ ಅಪಕೀರ್ತಿಗೆ ನನ್ನ ಐವರು ಪತಿಯರು ಅಪವಾದಕ್ಕೆ ಗುರಿಯಾಗುವರು ಎಂದು ಅಣ್ಣನಾದ ಕೃಷ್ಣನಲ್ಲಿ ದ್ರೌಪತಿಯ ತನ್ನ ದುಃಖವನ್ನು ಹೇಳುವ ದ್ರೌಪತಿಯ ಪಾತ್ರವನ್ನು ದೇವರಗುಂಡಿ ರಾಮಚಂದ್ರ ಭಟ್ಟರು ಅರ್ಥಗರ್ಭಿತ ಅರ್ಥವನ್ನು ಹೇಳಿದರು. “ದನುಜಾರಿ ದ್ರೌಪತಿಯ ಸಂತವಿಸಲಾನ್ನಗಂ| ಮಣಿಮಯವರರೂಥಮಂ ದಾರುಕ ತರಲು|” ಎಂದು ಶ್ರೀಕೃಷ್ಣನು ತನ್ನ ತಂಗಿಗೆ ಸಾಂತ್ವನದ ಮಾತನ್ನು ಹೇಳಿ ಸಂಧಾನಕ್ಕೆ ಹಸ್ತಿನಾವತಿಗೆ ಹೋಗುವಾಗ ಸಾತ್ಯಕಿ ಮೊದಲಾದ ಭಟರು ಅಸ್ತ್ರ ಶಸ್ತ್ರಗಳನ್ನೂ ತನ್ನ ರಥಕ್ಕೆ ಹಾಕಿದಾಗ ಕೇಳಿದ ಕೃಷ್ಣ ಏಕೆ ಆಯುಧವನ್ನು ಹಾಕುತ್ತೀರಿ? ಎಂದಾಗ ದುಷ್ಟನಲ್ಲಿಗೆ ಹೋಗುವಾಗ ಎಲ್ಲಾ ಉರುತರದ ಆಯುಧಗಳು ಬೇಕು ಎಂದು ಸಾತ್ಯಕಿ ಮೊದಲಾದ ಭಟರು ಹೇಳಿದಾಗ ಅವರಲ್ಲಿ ಬೀಳ್ಕೊಂಡು ದಾರುಕನೊಂದಿಗೆ ಹಸ್ತಿನಾಪುರಕ್ಕೆ ಬರುವಾಗ ಕಣ್ವ, ಪರಶುರಾಮ, ಅಗಸ್ಯ ಮುಂತಾದ ಮುನಿವರರು ಶ್ರೀಕೃಷ್ಣನ ದರುಶನ ಪಡೆದು ಕೌರವನು ಸಂಧಿಗೆ ಒಪ್ಪದಿದ್ದರೆ ನಾವಾದರೂ ಮನಪರಿವರ್ತನೆ ಮಾಡಬಹುದು ಎಂದು ಕೃಷ್ಣನ ಹಿಂಬಾಲಿಸಿ ಹಸ್ತಿನಾವತಿಗೆ ಬರುತ್ತಾರೆ.
ಇತ್ತ ಶ್ರೀಕೃಷ್ಣನು ಹಸ್ತಿನಾವತಿಗೆ ಬಂದು, ತನ್ನ ಭಕ್ತನಾದ ಹಾಗು ದಾಸಿಯ ಮಗನೆಂದ ಮತ್ತು ಹಸ್ತಿನಾವತಿಯ ಮಂತ್ರಿಯಾದ ವಿದುರನ ಮನೆಗೆ ಹೋಗುತ್ತಾನೆ. ಅಲ್ಲಿ ” ನೋಡಿದಂ ಕಣ್ ದಣಿಯೇ ಚಿನ್ಮಯನ ಮೂರ್ತಿಯ| ಮಾಡಿದಂ ನಿಯತ ಸಂಸ್ತುತಿಗಳಂ ಪಿರಿದು।” ಎಂದು ವಿದುರ ತನ್ನ ಮನದಲ್ಲಿ ನಿತ್ಯ ಭಜಿಸುವ ಆ ನನ್ನ ಮನದ ದೇವನು ಈ ವಿದುರನ ಅರಮನೆಗೆ ಬಂದನೆಂದು ಖುಷಿಯಾಗಿ, ತನ್ನನ್ನೇ ತಾನು ಮರೆತು ವಿದುರ ಬಾಗಿಲಲ್ಲೇ ಶ್ರೀಕೃಷ್ಣನನ್ನು ಮಾತಾಡಿಸಿದಾಗ ಶ್ರೀಕೃಷ್ಣ ಹೇಳಿದ ಎಂತ ವಿದುರ ಮನೆಯ ಬಾಗಿಲಲ್ಲೇ ಆತಿಥ್ಯ ಮಾಡುತ್ತಿದ್ದೀಯಾ? ನನ್ನನ್ನು ಒಳಗೆ ಕರೆದು ಅನ್ನ- ಪಾನೀಯ ಕೊಡುವುದಿಲ್ಲವೇ ಎಂದಾಗ ಭಕ್ತಿಯ ಪರಕೃಷ್ಠೆಯಲ್ಲಿ ಮೈ ಮರೆತ ವಿದುರನನ್ನು ಎಚ್ಚರಿಸಿ, ವಿದುರನು ತನ್ನ ಗುಡಿಸಲಿನ ಅರಮನೆಗೆ ಕರೆದು ಒಂದು ಕುಡಿತಿಗೆ ಹಾಲನ್ನು ಕೊಡುತ್ತಾನೆ. ಆ ಹಾಲನ್ನು ಕುಡಿಯುವಾಗ ಒಂದು ಬಿಂಧು ಭೂಮಿಗೆ ಚೆಲ್ಲಿದಾಗ ವಿದುರ ಮನೆಯಿಂದ ಇಡೀ ಹಸ್ತಿನಾವತಿ ರಾಜ್ಯವನ್ನು ಹಾಲಿನ ಹೊಳೆಯಾಗಿ ಹರಿದು ಇಡೀ ಹಸ್ತಿನಾವತಿಯೇ ಹಾಲಿನ ಮಾಯವಾಗಿರುತ್ತದೆ. ಹೀಗೆ ಹಸ್ತಿನಾವತಿಯಿಂದ ರಾಜ ದುರ್ಯೋಧನ ನಾಳೆ ಕೃಷ್ಣನನ್ನು ಬರಹೇಳಿ ಎಂದು ದೂತನೋರ್ವ ಬಂದು ವಿಧುರನಲ್ಲಿ ಹೇಳುತ್ತಾನೆ. ಅನಂತರ ವಿಧುರನೊಂದಿಗೆ ಶ್ರೀಕೃಷ್ಣನು ಸಂಧಾನಕ್ಕೆಂದು ಬರುವಾಗ ಹಸ್ತಿನೆಯ ರಾಜಸಭೆಯನ್ನು ವಿಶ್ಲೇಷಿಸುತ್ತಾ ಶ್ರೀಕೃಷ್ಣ “ನೋಡಿದೆಯಾ ವಿದುರ ಕೌರವ ಮಾಡಿದೋಲಗವ।ಓಡಿಹೋಗಲಿ ಕೃಷ್ಣನೆನುತ||” ವಿದುರ ನೋಡಿದೆಯಾ ಈ ಕುರುಭೂಪನ ಓಲಗ ಶ್ರೀಕೃಷ್ಣ ಸಂಧಾನಕ್ಕೆ ಬಂದರು ಓಡಿ ಹೋಗಲಿ ಎರಡು ಚಿತ್ರ ಪಠವನ್ನು ಅರಮನೆಯ ದ್ವಾರದ ಎರಡು ಬದಿಯಲ್ಲಿ ಇಟ್ಟಿದ್ದಾನೆ. ಒಂದು ಗೋಪಿಕೆಯರ ಸೀರೆ ಅಪಹರಿಸಿದ ನೀತಿಯ ಪೋಟೋ ಅಂದರೆ ಯಾರಾದರು ದುರ್ಜನರು ಇರುವಾಗ ಹೆಂಗಸರು ಬರಿ ಮೈಯಲ್ಲಿ ಸ್ನಾನ ಮಾಡಬಾರದು ಎಂದು ನೀತಿಯನ್ನು ಸಾರುತ್ತದೆ. ಇನ್ನೊಂದು ದುಷ್ಟ ದುಶ್ಯಾಸನ ದ್ರೌಪತಿಯ ಸೀರೆ ಎಳೆಯುವ ಪೋಟೊ ದುಷ್ಟರೂ ಏನೇ ಮಾಡಿದರು ಕಾಯುವವ ಬೇರೆ ಇದ್ದಾನೆ ಎಂದು ಸಾರುವ ಪೋಟೊ ಹಾಕಿದ್ದಾನೆ. ಹಾಗೆಯೇ ಗುರು ದ್ರೋಣ, ಪಿತಾಮಹ ಭೀಷ್ಮ, ಕೃಪಾಚಾರ್ಯರು ಒಂದೆಡೆ, ಇತನ ಎಡ-ಬಲ ಕರ್ಣ,ದುಶ್ಯಾಸನ, ಶಕುನಿ, ಜಯದೃತ ಕುಳಿತ್ತಿದ್ದಾರೆ. ಹಾಗೆ ನೋಡು ವಿದುರ ಶ್ರೀಕೃಷ್ಣನಿಗೆ ನಾರಿಯರು ಎಂದರೆ ಪ್ರೀತಿ ಅದಕ್ಕೆ ಗಾಯನ, ನರ್ತನ ವಾದ್ಯಗಳು ಒಂದೆಡೆ ಅಮರಾವತಿಯ ದೇವೇಂದ್ರನ ಓಲಗಕ್ಕಿಂತ ಮಿಗಿಲೆನಿಪುದು ಎಂದು ರಾಜಬೀದಿಯಲ್ಲಿ ವಿದುರನಲ್ಲಿ ಮಾತಾಡುತ್ತ ಶ್ರೀಕೃಷ್ಣನು ರಾಜ ಸಭೆಗೆ ಬರುತ್ತಾನೆ.
“ಅರಸ ಕೇಳಾ ದಿನದ ಕುರುಭೂ|ವರನ ಒಡ್ಡೋಲಗದ ಘನಸಿರಿ| ಮೆರೆವ ಸಭೆಗೇನೆಂಬೆ ಸುರಪನ ಸಭೆಯ ನಿಂದಿಸಿತು||” ಹೀಗೆ ಕೌರವನು ಹಸ್ತಿನಾಪುರವನ್ನು ಶೃಂಗರಿಸಿ ಘನ ಮದೋನ್ಮತ್ತದಲ್ಲಿ ಓಲಗದಲ್ಲಿ ಕುಳ್ಳಿರುತ್ತಾನೆ. ಎಡ ಬಲದಲ್ಲಿ ಮಿತ್ರ ಕರ್ಣ, ತಮ್ಮ ದುಶ್ಶಾಸನ, ಅಳಿಯ ಜಯದೃತ, ಮಾವ ಶಕುನಿ ಮುಂತಾದ ಆಪ್ತರು ಹತ್ತಿರದಲ್ಲಿ ಕೂರಿಸಿಕೊಂಡು ಅಹಂಕಾರದಿಂದ ಶ್ರೀಕೃಷ್ಣನನ್ನು ನಿಂದಿಸುತ್ತಾ ಸಿಂಹಾರೂಢನಾಗಿರುತ್ತಾನೆ. ಆ ಸಮಯದಲ್ಲಿ ರಾಜಮಾರ್ಗದಲ್ಲಿ ಬರುವ ಶ್ರೀಕೃಷ್ಣನನ್ನು ಕಂಡು “ನೋಡಿರೈ ಕುಲಹೀನನೂಲು ಮಾ|ತಾಡಿ ಬಹ ಗೋವಳನ ಠೀವಿಯ|| ನಾಡೊಳರ್ಧವನೋಯ್ವೆನೆಂಬ ಸ|ಗಾಢ ದಿಂದ||” ಎಂದು ಕರ್ಣ ದುಶ್ಯಾಸನ ಕರೆದು ಆ ಶ್ರೀಕೃಷ್ಣ ಬರುವುದನ್ನು ನೋಡಿ ಕುಲಹೀನ ವಿದುರ ಇವನಿಗೆ ಆಪ್ತನೂ ಎಂದು ಹೇಳಿದಾಗ ಶ್ರೀಕೃಷ್ಣನು ವಿದುರನಲ್ಲಿ ಬಂದವರನ್ನು ಇವನು ಕುಳಿತುಕೊಳ್ಳಿ ಎಂದು ಹೇಳುವ ಸೌಜನ್ಯನು ಇಲ್ಲ ಅದಕ್ಕೆ ನನ್ನ ಕಾಲಬೆರಳು ನೋಡಿ ಕೌರವನ ನೋಡು ಎಂದು “ಘನಮದೋನ್ಮತ್ತದಿಂದ ಕುಳಿತಿಹ। ಬಣಗುರಾಯನ ಗರ್ವವಿಳಿಸುವೆ| ನೆನುತಲೊತ್ತಿದ ಸಿರಿ ಚರಣದುಂಗುಟದೋಳವನಿಯನು।।” ಎಂದು ಶ್ರೀಕೃಷ್ಣನು ತನ್ನ ಎಡಕಾಲ ಉಂಗುಷ್ಟ ಬೆರಳನ್ನು ಭೂವಿಗೆ ಒತ್ತಿದಾಗ ಕುರುಭೂಪ ಕೌರವ ಸಿಂಹಾಸನ ಸಹಿತ ಶ್ರೀಕೃಷ್ಣ ಚರಣಗಳಿಗೆ ಬೀಳುತ್ತಾನೆ. ಅದಕ್ಕೆ ಶ್ರೀಕೃಷ್ಣನು ನೋವಾಯಿತು ದುರ್ಯೋಧನ ನನ್ನ ಕಾಲು ನೋವಾಯಿತು ಈ ರೀತಿಯಾಗಿ ನೀನು ಈ ರೀತಿಯಾಗಿ ಸಿಂಹಾಸನ ಕೂಡ ನನಗೆ ವಂದಿಸುತ್ತೀಯಾ ಎಂದು ಶ್ರೀಕೃಷ್ಣನು ಪಚಾರಿಸುತ್ತಾನೆ.
ಶ್ರೀಕೃಷ್ಣನು ” ಅರಸ ಮುನಿದಿಹೆಯೇಕೆ ನನ್ನಲಿ| ಕರುಣವಿಲ್ಲವೇ ನಿನಗೆ ಸತಿಯರ|| ತೆರದಿ ಮಂಡೆಯ ತಗ್ಗಿಸಿದೆ ಕ|ಣ್ಣೆದು ನೋಡೈ ।।” ಎಂದು ಶ್ರೀಕೃಷ್ಣನು ಕೌರವನಲ್ಲಿ ಏಕೆ ನೀನು ಹೆಂಗಸರ ಹಾಗೆ ಮುಖ ತನ್ನ ಉತ್ತರೀಯದಲ್ಲಿ ಮುಚ್ಚುತ್ತಿದ್ದೆ, ನಾಚಿಕೆಯೇ ನಿನಗೆ ಈ ಕೃಷ್ಣನಲ್ಲಿ ಮಾತಾಡಲು ಎಂದಾಗ ಸಿಟ್ಟಿನಿಂದ ಕೌರವನು ನೀನು ರಾಯಬಾರಿಯಾಗಿ ಬಂದು ಆ ಕುಲಹೀನ ವಿದುರನ ಮನೆಯಲ್ಲಿ ಉಳಿದು ಇಂದು ಬರಲಿಕ್ಕೆ ನಿನಗೆ ನಾಚಿಕೆಯಾಗಬೇಕು. ತನ್ನ ತಮ್ಮ ದುಶ್ಯಾಸನ ಮನೆಯನ್ನೇ ನಿನಗೆ ಬಿಟ್ಟುಕೊಟ್ಟು ಉಳಿಲಿಕ್ಕೆ ವ್ಯವಸ್ಥೆ ಮಾಡಿದ್ದೆ, ಆದರೆ ಆ ಮನೆಯಿಲ್ಲದ ಕುಲಹೀನನ ಮನೆಯೇ ನಿನಗೆ ಬೇಕಾಯಿತು. ಹೇಳು ಬಂದ ವಿಷಯ ಎಂದಾಗ ಸಿಟ್ಟಾದ ವಿದುರ ನಾನು ಕುಲಹೀನನೇ ನಿನ್ನ ಕುಲ ಯಾವುದು ಕೇವಲ ಪಿಂಡ ಒಡೆದು ಕೌ, ಕೌ ಎಂದು ಹೊರಗೆ ಬಂದಾಗ ನೀನು ಕೌರವ ಹಾಗು ನಿನ್ನ ತಮ್ಮಂದಿರು ಪಿಂಡ ಒಡೆದು 1೦೦ ಜನ ಹೊರಗೆ ಬಂದದ್ದು ನಿನದು ಕುಲ ಇಲ್ಲದವ ಎಂದು ಸಿಟ್ಟಾಗಿ ನುಡಿದನು ನಂತರ ವಿದುರ “ಏನುತಾಳ ಚಾಪವ ಮುರಿಯುತ್ತ ।ಇನ್ನು| ತನಗಸ್ತ್ರ ಸಂನ್ಯಾಸವೆನ್ನುತ||” ನಿನ್ನ ಉಳಿವಿಗಾಗಿ ಒಂದು ಉರುತರದ ಧನಸ್ಸನ್ನು ಇಟ್ಟುಕೊಂಡಿದೆ. ಅಂದು ಭೀಮ ನಿನ್ನ ತೊಡೆ ಮುರೀತೇನೆ ಎಂದು ಘಂಠಾಘೋಷ ಶಪಥ ಮಾಡಿದಾಗ ನನ್ನ ಪ್ರಭುವನ್ನು ಉಳಿಸಬೇಕೆಂದು ಇಟ್ಟುಕೊಂಡಿದ್ದೆ ಈಗ ಆ ಬಿಲ್ಲು ಚಾಪವನ್ನು ತುಂಡು ಮಾಡುತ್ತೇನೆ ಎಂದು ಸಿಟ್ಟಿನಿಂದ ಗುಡುಗಿ ವಿದುರ ಹೇಳುತ್ತಾನೆ. ಕೌರವ ಅದಕ್ಕೆ ಯಾರು ಹೆದರಬೇಡಿ ಅಂತು ಆ ಚಾಪದಿಂದ ಈತ ಇಟ್ಟುಕೊಂಡು ಯುದ್ಧದಲ್ಲಿ ಸೋತರೇ ಯಾ ಗೆದ್ದರೆ ನಾನೇ ಕೌರವನ ಉಳಿಸಿದ್ದು ಎಂದು ಹೇಳುವನು. ಅದಕ್ಕಾಗಿ ಈ ಪಾಪಿಯ ಧನಸ್ಸು ಬೇಡ ಹೋಗಲಿ ಅವನು ಎಂದು ಕೌರವ ಹೇಳಿದನು. ಹೀಗೆ ವಿದುರನಾಗಿ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯರು ಕೌರವನಾಗಿ ಗುಡ್ಡಪ್ಪ ಬಲ್ಯರು ಶ್ರೀಕೃಷ್ಣನಾಗಿ ಡಾ. ವಿನಾಯಕ ಭಟ್ ಗಾಳಿಮನೆಯವರು ಉತ್ತಮವಾದ ಸಂಭಾಷಣೆಯನ್ನು ಮಾಡಿದರು.
“ಅದರಾ ಪಾಂಡುಸುತರು।ಜೂಜಿನಲ್ಲಿ।ಮೇದಿನಿಯನುರೆ ಸೋತರು| ಅಡಿಯಲ್ಲಿ ನಿನಗೆ ಪೇಳ್ದ।ಭಾಷೆ ಸರಿ| ಯಾದುದೀವರೆಗೆ ಸಿದ್ದ||” ಎಂದು ಶ್ರೀಕೃಷ್ಣನು ಹಿಂದೆ ಪಾಂಡು ಸುತರು ನಿನ್ನ ಹಾಗು ಮಾವ ಶಕುನಿಯ ಕಳವಿನ ಜೂಜಿನಲ್ಲಿ ಈ ಮೇದಿನಿಯನ್ನು ಸೋತರು, ಅವರು ನೀನು ಹೇಳಿದ ಹಾಗೆ ಒಪ್ಪಂದದಂತೆ ವನವಾಸ, ಅಜ್ಞಾತವಾಸವನ್ನು ಮುಗಿಸಿ ಬಂದಿದ್ದಾರೆ. ಅವರಿಗೆ ಪುನಃ ನೀನು ಅವರಿಗೆ ಸಲ್ಲಬೇಕಾದ ಅರ್ಧರಾಜ್ಯವನ್ನು ಕೊಟ್ಟು ಅಣ್ಣ ತಮ್ಮಂದಿರು ನೀವು ಚಂದದಿಂದ ರಾಜ್ಯವನ್ನಾಳಿರಿ ಸುಮ್ಮನೆ ನಿಮ್ಮ ರಾಜ್ಯದ ಮೇಲೆ ಯುದ್ಧ ಸಾರಿದರೇ ಅಸಂಖ್ಯಾತ ಜನರು ಸಾವು-ನೋವುಗಳು ಸಂಭವಿಸುತ್ತದೆ. ಅದಕ್ಕೆ ಜಗಳವಿಲ್ಲದೆ ಸಂಧಾನದ ಮೂಲಕ ನೀನು ಇದುವರೆಗೆ ಮಾಡಿದ ಎಲ್ಲಾ ತಪ್ಪುಗಳನ್ನು ಮನ್ನಿಸಿ ಬಿಡುತ್ತಾರೆ. ಅವರು ಮಾಡಿದ ಪ್ರತಿಜ್ಞೆಯು ಸಹ ಹಾಗೆ ಉಳಿದರು ತೊಂದರೆ ಇಲ್ಲ ನಿನ್ನ ತಮ್ಮಂದಿರಿಗೂ ನಿನಗೂ ಏನು ಮಾಡುದಿಲ್ಲ. ಬಂದುಗಳಾದ ನಮ್ಮಲ್ಲಿ ದ್ವೇಷ ಬೇಡ ಶಾಂತಿಯಿಂದ ಈ ಹಸ್ತಿನಾವತಿಯನ್ನು ಚಂದ್ರವಂಶದ ಗೌರವವನ್ನು ಉಳಿಸೋಣ ಚಂದ್ರವಂಶದ ಕೀರ್ತಿಯನ್ನು ಎತ್ತರಕ್ಕೆ ಏರಿಸೋಣ ಎಂದು ಎಂದು ಹಿರಿಯನಾದ ಯುಧಿಷ್ಠಿರ ಹೇಳಿದನು. ಎಂದು ಶ್ರೀಕೃಷ್ಣನು ಹೇಳುತ್ತಾನೆ. ಅದಕ್ಕೆ ಕೌರವ ನಸುನಗುತ್ತಾ “ಅಹಹ ಕೇಳಿದೆಯಾ ಕರ್ಣ।ಜೂಜಿನಲಿ।ಮಹಿಯ ಸೋತವರಿಗೆನ್ನ| ಸಹವಾಸವೇನು ಕಡೆಗೆ| ನಮ್ಮೊಳಳು| ಕಿಹರಯ್ಯ ಸಂಧಾನಕೆ।। ಎಂದು ಶ್ರೀಕೃಷ್ಣನ ಸಂಧಾನದ ಮಾತಿಗೆ ಕೌರವ ಕರ್ಣ ಕೇಳಿದೆಯಾ ಅವತ್ತು ಪಾಂಡವರು ಜೂಜಿನಲ್ಲಿ ಸೋತವರು, ಇವತ್ತು ಅವರು ಈ ಅರ್ಧರಾಜ್ಯವನ್ನು ನನ್ನಲ್ಲಿ ಬಂದು ಬೇಡುತ್ತಾರೆ. ಸಂಧಾನವಂತೆ ನಾನು ಸನಕಂದರಲಿ ಹೇಳಿದ್ದು, ಸಂಜಯನಲ್ಲಿ ಸಹ ಹೇಳಿದ್ದು ಈಗ ನಿನ್ನಲ್ಲಿ ಹೇಳಿದು ಒಂದೇ ಪಾಂಡವರು ಕ್ಷತ್ರಿಯರಲ್ಲವೇ ಅದರ ನ್ಯಾಯದ ಹಾಗೆ ಯುದ್ದದಿಂದಲೇ ರಾಜ್ಯವನ್ನು ಪಡೆಯಲಿ ಎಂದು ಮದಗರ್ವದಿಂದ ಶ್ರೀಕೃಷ್ಣನಿಗೆ ಪಚರಿಸಿ ಕೌರವ ಹೇಳಿದನು. ಅದಕ್ಕೆ ಪಾಂಡವರಿಗೆ ಅರ್ಧ ರಾಜ್ಯ ಬಿಟ್ಟು “ಪೊಡವಿಗೋಸುಗ ಬಳಗ ಸಹಿತಲಿ। ನಡೆಯಬೇಡ ಕೃತಾಂತನಲ್ಲಿಗೆ। ಕೊಡು ಕುಶಸ್ಥಳ ವರವೃಕಸ್ಥಳ ವಾರಣಾವತಿಯ|” ಎಂದು ಶ್ರೀಕೃಷ್ಣನು ಶಾಂತ ಚಿತ್ತದಲ್ಲಿ ಹೇಳುತ್ತಾನೆ ಕೌರವ ಈ ರಾಜ್ಯದ ಆಸೆಗಾಗಿ ನೀನು ನಿನ್ನ ಬಳಗದ ಸಹಿತ ಸಾಯಬೇಡ. ಪಾಂಡವರಿಗೆ ಅರ್ಧರಾಜ್ಯ ಕೊಡದಿದ್ದರೂ ಪರವಾಗಿಲ್ಲ ಕೇವಲ ಪಂಚ ಪಾಂಡವರಿಗೆ ಪಂಚ ಗ್ರಾಮವನ್ನಾದರೂ ಕೊಟ್ಟು ಮುಂದೆ ಆಗುವ ರಕ್ತದ ಹೊಳೆಯನ್ನು ಮಹಾಯುದ್ಧದ ಕಲೆಯನ್ನು ತಪ್ಪಿಸು, ಎಂದು ಹೇಳುತ್ತಾನೆ. ಅದಕ್ಕೆ ಕೌರವ ಯಾವ ಗ್ರಾಮವು ಕೊಡುವುದಿಲ್ಲ ಕಾರಣ ಆ ಗ್ರಾಮದಲ್ಲಿ ಹಲವಾರು ಬ್ರಾಹ್ಮಣರಿಗೆ ಬೇಕಾದ ಕುಶ,ಸಮಿದೆ, ಮುಂತಾದ ಅಮೂಲ್ಯ ವಸ್ತುಗಳಿಗೆ ಹಾಗು ಪಾಂಡವರಿಗೆ ಐದು ಗ್ರಾಮ ಬಿಟ್ಟು ಒಂದು ಸಣ್ಣ ಸೂಜಿಯ ಮೊನೆಯ ಜಾಗವನ್ನು ಕೊಡುವುದಿಲ್ಲ. ಬೇಕಿದ್ದರೆ ಕ್ಷತ್ರೀಯರ ಪಂಥದಂತೆ ಯುದ್ದದಿಂದಲೇ ರಾಜ್ಯವನ್ನು ಪಡೆಯಲಿ. ಮತ್ತೆ ನೀನು ಪಾಂಡವರನ್ನು ಕಾಯುತ್ತೇನೆ. ಎಂದು ಹೇಳಿತ್ತಿಯಲ್ವ ಕರ್ಣ ದುಶ್ಶಾಸನನೇ ಹಿಡಿಯಿರಿ ಈ ಚೋರ, ಕಳ್ಳ ಗೊಲ್ಲನನ್ನು ಹಗ್ಗದಿಂದ ಕಟ್ಟಿ ಸೆರೆಯಲ್ಲಿ ಹಾಕಿ ಎಂದು ಕೌರವ ಆಜ್ಞೆಮಾಡಿದನು. ಹೀಗೆ ಕೌರವ ಹಾಗು ಶ್ರೀಕೃಷ್ಣನ ಸಂವಾದವು ಪ್ರೇಕ್ಷಕರಿಗೆ ಕೇಳುವರಿಗೆ ಉತ್ತಮವಾಗಿತ್ತು.
ಸಭೆಯಲ್ಲಿ ಶ್ರೀಕೃಷ್ಣನು ವಿಶ್ವ ರೂಪವನ್ನು ತೋರಿದನು ಭೀಷ್ಮ-ದ್ರೋಣ,ಕೃಪಾಚಾರ್ಯ ದೃತರಾಷ್ಟ್ರ, ಗಾಂಧಾರಿ, ಭಾನುಮತಿ ಶ್ರೀಕೃಷ್ಣನ ವಿಶ್ವರೂಪವನ್ನು ನೋಡಿ ಕೈಮುಗಿದರು ಆ ಸಮಯದಲ್ಲಿ ಕುರು ವಂಶದ ರಾಣಿಯಾದ ಭಾನುಮತಿಯು ಶ್ರೀಕೃಷ್ಣ ದಿವ್ಯರೂಪವನ್ನು ಕಂಡು “ಭಾನುಮತಿ ಮುಂತಾದ ನಾರಿಯರು ನುತಿಸುತಿರ|ಲಾನಂದಮಯನು ಕರುಣದಲಿ|| ತಾನವರ ಸಂತಯಿಸುತಿರೆ ಬಳಿಕ ಕೇಳಿದಳು| ಭಾನುಮತಿ ಮುತ್ತೈದೆ ತನವ||” ಶ್ರೀಕೃಷ್ಣನ ವಿರಾಟ ರೂಪವನ್ನು ಕಂಡು ಭಾನುಮತಿ ಗಾಂಧಾರಿ ಮುಂತಾದ ನಾರಿಯರು ಸ್ತುತಿಸುತ್ತಿರುವಾಗ ಶ್ರೀಕೃಷ್ಣನು ಭಾನುಮತಿಯನ್ನು ಸಂತೈಸಿದಾಗ ಭಾನುಮತಿಯು ದೇವನಿಗೆ ನಮಿಸಿ ನನ್ನ ನನ್ನ ಗಂಡನ ಮನಪರಿವರ್ತನೆ ಮಾಡಿ ನನ್ನ ಮುತೈದೆ ತನವನ್ನು ಉಳಿಸು ಶ್ರೀನಾಥ, ಹಿಂದೆ ನರಕಾಸುರನ ಸೆರೆಯಲ್ಲಿದ್ದ 16ಸಾವಿರ ಹೆಂಗಳೆಯರ ಮಾನ ಉಳಿಸಿದೆ, ತಂಗಿ ದ್ರೌಪತಿಯ ಮಾನ ಉಳಿಸಿದೆ, ತಂಗಿ ಸುಭದ್ರೆಗೆ ಕೇಳಿದ್ದು ಕೊಟ್ಟೆ ಹಾಗೆ ಈ ನಿನ್ನ ತಂಗಿ ಭಾನುಮತಿಗೆ ಮುತ್ತೈದೆತನವನ್ನು ಉಳಿಸಿಕೊಡು ಎಂದು ಬೇಡುತ್ತಾಳೆ. ಅದಕ್ಕೆ ಮುರಹರನೂ ನಗುತ್ತ ನಾನು ದುರ್ಯೋಧನನಲ್ಲಿ ಬೇಡುತ್ತಿದೆ. ಅವನ ಮನವೊಲಿಸುವ ಕಾರ್ಯ ನೀನು ಮಾಡುವುದು ಉತ್ತಮ. ಕೆಲವರು ಗಂಡನ ಮಾತನ್ನು ಕೇಳುತ್ತಾರೆ ನೀನು ಒಂದು ಪ್ರಯತ್ನ ಮಾಡು ಎಂದು ಹೇಳುತ್ತಾನೆ. ಅದಕ್ಕೆ ಶ್ರೀಕೃಷ್ಣನ ಆಜ್ಞೆಯಂತೆ ಭಾನುಮತಿ ಪತಿಯಲ್ಲಿ ಹೋಗಿ ಹೇಳುತ್ತಾಳೆ “ಪುರುಷರತ್ನವೇ ಲಾಲಿಸು| ನಾನೆಂಬ ಮಾತ| ಕರುಣದಿಂದಲಿ ನಡೆಸು| । ವರಪಾಂಡುಸುತರೊಳಿನ್ನು। ಸಂಗರ ಬೇಡ| ಸೆರಗೊಡ್ಡಿ ಬೇಡುವೆನು||” ತನ್ನ ಪತಿದೇವನಾದ ಕೌರವನಿಗೆ ವಂದಿಸಿ ರಾಜಸಭೆಯಲ್ಲಿ ಭಾನುಮತಿಯು ಓ ನನ್ನ ಪುರುಷರತ್ನವೇ ನನಗೆ ಮಾತ್ರವಲ್ಲದೇ ಇಡೀ ಕುರುಕುಲಕ್ಕೆ ನೀನು ಪುರುಷರತ್ನ ಪ್ರಾಯವಾಗಿದ್ದೀರಿ ಸ್ವಾಮಿ, ನಿಮಗೆ ಏಕೆ ನಮ್ಮ ಬಂಧುಗಳಾದ ಪಾಂಡವರಲ್ಲಿ ದ್ವೇಷ, ಅವರಿಗೆ ಸಲ್ಲಬೇಕಾದ ರಾಜ್ಯವನ್ನು ಕೊಟ್ಟು, ಶಾಂತಿಯಿಂದ ನಾವು ಎಲ್ಲರೂ ಒಂದಾಗಿ ರಾಜ್ಯ ಆಳಿ ಸುಖದಿಂದ ಇರೋಣ. ದೇವಾ ಇದು ಅಜ್ಜ ಭೀಷ್ಮ ಪಿತಾಮಹ, ಬಿಲ್ವಿದ್ಯಾ ಗುರು ದ್ರೋಣ, ಅಕ್ಷರಾಭ್ಯಾಸದ ಗುರು ಕೃಪಾಚಾರ್ಯ, ಮಾವ ವಿದುರ, ಮಾವ ದೃತರಾಷ್ಟ, ಅತ್ತೆ ಗಾಂಧಾರಿ ಎಲ್ಲರ ನಿರ್ಣಯ ಇದೆ ಅವರೆಲ್ಲ ಒಮ್ಮತವು ಇದೆ ಸ್ವಾಮಿ, ಹೆಣ್ಣಿಗೆ ಭೂಷಣವಾದ ಮಾಂಗಲ್ಯ, ಓಲೆ, ಮುತ್ತೈದೆ ಭಾಗ್ಯವನ್ನು ಉಳಿಸಿಕೊಡಿ ಸ್ವಾಮಿ, ಸಂಗರ ಬೇಡ ಸಂಧಾನಕ್ಕೆ ಒಪ್ಪಿ ನಮ್ಮನ್ನು ಉದ್ಧರಿಸಿ ಸ್ವಾಮಿ ಎಂದು ನಾನು ಭಾನುಮತಿ ಸೆರಗೊಡ್ಡಿ ಬೇಡುತ್ತೇನೆ. ಅದಕ್ಕೆ ಕೌರವ “ಕ್ಲೇಶಗೊಳುತಿಂತೇನಲು ಕೇಳ್ದವ| ನಿಶಾನುಸಿರಿದನೆಲೆಗೆ ನೀನಿ| ನ್ನೇಸು ನುಡಿದರು ಪಾಂಡವರನೊಡಗೊಂಬನಲ್ಲೆಂದ||” ಪಾಣಕಾಂತೆ ಭಾನುಮತಿ ಹುಟ್ಟು ಸಾವು ವಿಧಿ ಲಿಖಿತ ಮೀರಲು ನಾವು ಯಾರು ಅಲ್ಲ. ಎಲ್ಲದಕ್ಕೂ ಆ ವಿಧಿಯ ಬರೆದಂತೆ ಆಡಿಸುವನು ಅವನು ನೀನು ಕ್ಲೇಶಗೊಳ್ಳಬೇಡ ಪಾಂಡವರ ವಿಚಾರದಲ್ಲಿ ನನ್ನ ನಿಲುವು ಬೇರಾಗುದಕ್ಕೆ ಸಾಧ್ಯವಿಲ್ಲ. ಎಲ್ಲರ ಸಾವನ್ನು ನಿರ್ಧರಿಸುವ ಆ ದೇವನು ನಿನ್ನ ಮಾಂಗಲ್ಯ ಭಾಗ್ಯ ಅವನೇ ಕಾಪಾಡಿಯಾನು ಹೋಗು ನೀನು ಹೆದರಬೇಡ ಹೋಗು ಅಂತಃಪುರದ ಕಡೆಗೆ ಎಂದು ಕೌರವನು ಗುಡ್ಡಪ್ಪ ಬಲ್ಯ ಹಾಗು ಕೌರವನಿಗೆ ನೀತಿಯ ಮಾತನ್ನು ಹೇಳಿದ ಭಾನುಮತಿಯ ಪಾತ್ರವನ್ನು ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್ ರು ಸೊಗಸಾಗಿ ಸಂವಾದ ಮಾಡಿದರು.
“ಎಲವೊ ಪಾತಕಿ ಬರಿದೆ ಸಾಯದಿ| ರೋಲಿದು ಪಾಂಡವರುಗಳ ಕೂಡಿಕೊ| ಕೊಳಿಸಲಾರೆನು ಸರ್ವಥಾ ಕೊಳು।ಗುಲದಿ ನಿನ್ನ|” ಹೀಗೆ ಶ್ರೀಕೃಷ್ಣನು ದುರ್ಯೋಧನನಲ್ಲಿ ಭಾನುಮತಿ ಬಂದು ಅಂತಹ ನೀತಿಯ ಮಾತನ್ನು ಹೇಳಿದರು ಕೇಳಲಿಲ್ಲ ನೀನು ಪಾತಕಿಯೇ ಸರಿ ನಿನ್ನ ಬಳಗದವರನ್ನು ಕೂಡಿ ಬರಿದೆ ಸಂಗ್ರಾಮದಲ್ಲಿ ಸಾ ದುಷ್ಟ ಕೂಟದೊಂದಿಗೆ ಸಾಯಬೇಡವೋ ಎಂದು ಹೇಳಿದರೆ ನನ್ನನ್ನೇ ಕಟ್ಟುತ್ತೀಯಾ ಈ ಲೋಕದಲ್ಲಿ ನನ್ನ ಕಟ್ಟುವ ಹಗ್ಗವಾಗಲಿ, ವ್ಯಕ್ತಿಯಾಗಲಿ ಇದ್ದರೋ ಎಂಬ ಪ್ರಶ್ನೆಗೆ ಹಿಂದೆ ಗೋಕುಲದಲ್ಲಿ ತಾಯಿ ಯಶೋಧೆಗೆ ಬೆಣ್ಣೆ ಕದಿತೆನೆ ಎಂದು ಹಗ್ಗದಿಂದ ಕಟ್ಟಲು ಬಂದಾಗ ದಾಮೋದರನಾಗಿ ಕಂಡದ್ದು ನಿನಗೆ ತಿಳಿಯಲಿಲ್ಲವೇ ಅದರಿಂದ ನಿನ್ನಂತಹ ಅರಸರು ಯಾರಿದ್ದಾರೆ ಈ ಭೂತಳದಲ್ಲಿ ಅರಸರು ಅಂತಹ ರಾಜ್ಯ, ಬೂರಿಭಾಗ್ಯವನ್ನು ಹೊಂದಿದ ನೀನು ಪಾತಕಿಯಾಗಿ ಸಾಯಬೇಡ ಎಂದು ಹೇಳಿದರೆ ಕೇಳುವವನಲ್ಲ ನೀನು. ಅದಕ್ಕೆ ಪ್ರತ್ಯುತ್ತರವಾಗಿ ಎಲೆ ಮುರಾಂತಕನೆ “ಎಲೆ ಮುರಾಂತಕ ಲಾಲಿಸೈ ಬೆಂ| ಬಳಕೆ ಭೂಪರ ನೆರಹಿ ಕುರುಮಂ।ದಳಾಕೆ ಸನ್ನಾಹಮಾಗಿ ನಮರಕೆ ಬರಲಿ ಪಾಂಡವರು|| ಕಲಹದಲ್ಲಿ ನಿನ್ನಡಿಯೊಳೆನ್ನಯ| ತಲೆಯನಾದೆ ಸಮರ್ಪಿಸುವೆನಿದ| ಕಾಲುಕೆ ದಿಟವೆಂದುನುತ ವೀಳ್ಯವನಿತ್ತನಚ್ಚುತಗೆ||” ಶ್ರೀಕೃಷ್ಣ ನೀನು ಹೇಳಿದ ಈ ಮಾತು ನನಗೆ ಪ್ರಸ್ತುತ ಕೆಲವರು, ನಿನ್ನ ಭಜಿಸಿ, ಕೆಲವರು ನಿನ್ನ ಭಕ್ತಿಯಲಿ, ಕೆಲವರು ನಿನ್ನ ದ್ವೇಷಿಸಿ, ಮೋಕ್ಷವನ್ನು ಪಡೆದುಕೊಂಡಿದ್ದಾರೆ. ಆದರೆ ನಾನು ಪಾಂಡವರ ತರಹ ಪೂಜಿಸಿ ಮೋಕ್ಷ ಸೂರೆಗೊಳ್ಳುವನು ಅಲ್ಲ. ಅದಕ್ಕೆ ನಿನ್ನ ದ್ವೇಷಿಸಿ ಹಿರಣ್ಯಾಕ್ಷ, ರಾವಣ,ಕುಂಭಕರ್ಣ, ಹಿರಣ್ಯಕಷಬು, ಮುಂತಾದವರಂತೆ ದ್ವೇಷಿಸಿ ನನ್ನ ಪಂಚಭೂತಗಳಿಂದ ಆವೃತವಾದ ಈ ಪಂಚ ವೀಳ್ಯದೆಲೆಯನ್ನು ಹಾಗು ಆತ್ಮ ಸ್ವರೂಪವಾದ ಅಡಿಕೆಯನ್ನು ಸೇರಿಸಿ ಆತ್ಮವೆಂಬ ರಣವೀಳ್ಯ ಅಥವಾ ಧುರವೀಳ್ಯವನ್ನು ಕೊಡುತ್ತೇನೆ. ಪಾಂಡವರನ್ನು ಒಂದುಗೂಡಿ ನನ್ನ ಹರಣ ಮಾಡು ಭೂಭಾರ ಹರಣ ಮಾಡು ದೇವಾ ಎಂದು ಅಚ್ಯುತನಿಗೆ ರಣವೀಳ್ಯವನ್ನು ಕೌರವ ಕೊಡುತ್ತಾನೆ. ಹೀಗೆ ಬಲ್ಯ ಮತ್ತು ಗಾಳಿಮನೆಯವರ ಸಂಭಾಷಣೆಯನ್ನು ವಿವರಣೆ ಸಹಿತ ವಿಶ್ಲೇಷಿಸಿ ಮಾಡಿದರು. ನಂತರ “ಕರದೊಳು ಪರಶುಪ ಪಾಶಾಂಕುಶ ದರಾಗೆ ಹರುಷದಿ ಭಕ್ತರ ಪೊರೆವವಗೆ” ಎಂದು ಚಂಡೆಗುಳಿ ಉದಯ ನರಸಿಂಹ ಶಾಸ್ತ್ರಿಗಳು ಮಂಗಲಪದವನ್ನು ಹಾದಿ ಶ್ರೀಕೃಷ್ಣ ಸಂಧಾನ ಎಂಬ ತಾಳಮದ್ದಲೆಗೆ ಮಂಗಳಹಾಡಿದರು. ಮದಲ್ಲೆಯಾಗಿ ಸಾಥ್ ನೀಡಿದವರು ಡಾ| ಶ್ರೀಪ್ರಕಾಶ್ ಬಂಗಾರರಡ್ಕ ಹಾಗು ಚಂಡೆಯ ಪ್ರೊ. ದಂಬೆ ಈಶ್ವರ ಶಾಸ್ತ್ರಿಯವರು ಸಾಥ್ ನೀಡಿದರು. ನಮ್ಮ ಗೂಗಲ್ ಮೀಟ್ ಲಿಂಕಿನ ಮೂಲಕ ಬೆಂಗಳೂರು, ಬಾಂಬೆ, ದುಬೈ, ಕಾರ್ಕಳ, ಉಡುಪಿ, ಕಾಸರಗೋಡು, ಉತ್ತರಕನ್ನಡದಿಂದ ಸರಾಸರಿ ನೂರಕ್ಕೂ ಪ್ರೇಕ್ಷಕರು ತಾಳಮದ್ದಲೆಯನ್ನು ಸವಿದರು. ಪೋಟವನ್ನು ತನ್ನ ಸ್ಕ್ರೀನ್ ಮೂಲಕ ತೆಗೆದು ಬೆಂಗಳೂರಿನಿಂದ ಕಿರುತೆರೆ ದಾರವಾಹಿ ನಟಿ ಲೇಖಕರು ಆಗಿರುವ ಡಾ. ಶೈಲಜ ಶರ್ಮಾ ರವರು ಸೆರೆಹಿಡಿದು ಕಳಿಸಿದ್ದಾರೆ. ಮುಂದಿನ ವಾರ ದಿನಾಂಕ 05-೦6-2021 ಶನಿವಾರ ಮಧ್ಯಾಹ್ನ 2 ಗಂಟೆಗೆ ಈ ಸಂಘದ ಮಹಿಳಾ ಕಲಾವಿದರನ್ನು ಕೂಡಿಕೊಂಡು “ಶರ-ಶೇತು-ಬಂಧನ” ತಾಳಮದ್ದಲೆಯನ್ನು ಹೀಗೆ ಅಂತರ್ಜಾಲಾ ಆನ್ ಲೈನ್ ಗೂಗಲ್ ಮೀಟ್ ವಿಡಿಯೋ ಲಿಂಕ್ http://meet.google.com/tps-efyp.voy ಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ನೋಡಬಹುದಾಗಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀಯುತ ಭಾಸ್ಕರ ಬಾರ್ಯ ಹೇಳಿದರು.
✍️ ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.