ವಿಶ್ವ ಮಾನವ ಕುವೆಂಪು ಫೌಂಡೇಶನ್ ಹಾವೇರಿ ಜಿಲ್ಲಾದ್ಯಕ್ಷರಾಗಿ ಶ್ರೀ ನಾಗಪ್ಪ ಅಂಗಡಿ
ಹಾವೇರಿ : ರಕ್ತದಾನ, ನೇತ್ರದಾನ ಹಾಗೂ ಸಮಾಜ ಸೇವೆ ಎಂಬ ಮೂರು ಮಹಾಮಂತ್ರಗಳ ಹಾದಿಯಲ್ಲಿ ಸಾಗುತ್ತಿರುವ, ರಾಷ್ಟ್ರಕವಿ ಕುವೆಂಪುರವರ ಹೆಸರಿನಲ್ಲಿ ಉತ್ತಮ ಕಾರ್ಯ ಮಾಡುತ್ತಿರುವ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ವಿ.ಕೆ.ಎಫ್ ಗೆ ಹಾವೇರಿ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ ನಾಗಪ್ಪ ಅಂಗಡಿ ರವರನ್ನು ಆಯ್ಕೆ ಮಾಡಲಾಗಿದೆ.
ಹಾವೇರಿ ಜಿಲ್ಲೆ, ಸವಣರೂ ತಾಲ್ಲೂಕಿನ ತೂಂಡೂರ ಗ್ರಾಮದ ನಾಗಪ್ಪ ಅಂಗಡಿ ರವರ ಉತ್ತಮ ಕಾರ್ಯದಕ್ಷತೆ, ನಾಯಕತ್ವ, ವಿದ್ಯಾರ್ಥಿ ದಿಸೆಯಲ್ಲಿನ ಹೋರಾಟಗಳನ್ನು ಪರಿಗಣಿಸಿ ಜೀವ ಉಳಿಸುವ ಮಹತ್ತರ ಕಾರ್ಯವಾದ ರಕ್ತದಾನ ಸೇವೆಯ ಹಾಗೂ ಸಂಘಟನೆಯ ಬಲಾಡ್ಯತೆಗೆ ಇವರನ್ನು ಈ ಕೂಡಲೇ ಜಾರಿ ಬರುವಂತೆ ಜಿಲ್ಲಾ ಅಧ್ಯಕ್ಷರಾಗಿ ಆದೇಶಿಸಲಾಗಿದೆ ಎಂದು ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ವಿ.ಕೆ.ಎಫ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ತಿಳಿಸಿದರು.
ಯಾರಿಗೆ ಯಾವ ಸಂದರ್ಭದಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದರೆ 24×7 ಉಚಿತ ರಕ್ತದ ಸಹಾಯವನ್ನು ಸಹ ವಿ.ಕೆ.ಎಫ್ ಮಾಡುತ್ತದೆ ಎಂದು ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ತಿಳಿಸಿದರು.
ರಕ್ತದ ಅವಶ್ಯಕತೆ ಇರುವವರು ಕರೆಮಾಡಿ: 9900538954/ 8277094649/ 8970450331
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.