ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಶ್ರೀ ಮಾರುತಿ ಮರಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಮಾಲೂರಿನ ಆರ್.ಎಫ್ ರಸ್ತೆಯ ಮಾರುತಿ ವೃತ್ತದಲ್ಲಿ ಕೋವಿಡ್ 19 ಎರಡನೇ ಅಲೆ ಅಭಾವದಲ್ಲಿ ಜಾನೋಪಕಾರ ಮಾಡಿದ ನದೀಮ್ ಹಾಗೂ ಅವರ ತಂಡವನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಮರಗೆಲಸಗಾರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಮಾ.ವೆ.ಪ್ರಕಾಶ್ “ತನ್ನ ಜೀವದ ಹಂಗನ್ನು ತೊರೆದು ಇತರರ ಜೀವಕ್ಕೆ ಸಂಜಿವೀನಿಯಾಗುವ ಮೂಲಕ ಕರೋನಾ ಮಹಾಮಾರಿಯ ಸಂದರ್ಭದಲ್ಲಿ ಕರೋನಾ ಸೋಂಕಿತರ ಅಂತಿಮ ಸಂಸ್ಕಾರದಂತಹ ಸೇವೆ ಮಾಡುವ ಮೂಲಕ ಇಂದು ನದೀಮ್ ಮತ್ತು ತಂಡ ಸಾರ್ಥಕ ಸೇವೆ ಮಾಡುವ ಮೂಲಕ ಜನಮನ್ನಣೆ ಗಳಿಸಿದೆ ಇಂತಹ ಮಹಾನ್ ಚೇತನರಿಗೆ ಗೌರವ ಸಲ್ಲಿಸುವ ಕಾರ್ಯ ನಮ್ಮದು” ಎಂದರು.
ಸನ್ಮಾನ ಸ್ವೀಕರಿಸಿದ ಜನಸೇವಕ ಮಾಲೂರಿನ ಸೈಯದ್ ನದೀಮ್ ರವರು ಮಾತನಾಡಿ “ಮಾನವನಿಗೆ ಹುಟ್ಟು ಉಚಿತ, ಸಾವು ಖಚಿತ, ಈ ಮಾರ್ಗದಲ್ಲಿ ನಮ್ಮ ಸೇವೆ. ಅದು ಕರೋನಾ ಸಂಕಷ್ಟದಲ್ಲಿ ನಾವು ಮಾನವೀಯತೆಯನ್ನು ಮರೆಯಬಾರದು ಎಂಬ ನಿಟ್ಟಿನಲ್ಲಿ ಎಲ್ಲಾ ಧರ್ಮಗಳ ನೀತಿ ಭೋದನೆಯ ಅಂಶ ಪರಣಿಸಿ ಸೇವೆ ಮಾಡುವ ಕಾಯಕಕ್ಕೆ ಕೈ ಹಾಕಿ ನೂರಾರು ಕರೋನಾ ಸೋಂಕಿತರ ಶವ ಸಂಸ್ಕಾರವನ್ನು ಮಾಡುವ ಮೂಲಕ ತಾಲ್ಲೂಕಿನ ಸೇವೆ ಮಾಡಿದ್ದನ್ನು ಪರಿಗಣಿಸಿ ಇಂದು ನಮ್ಮನ್ನು ಪ್ರೀತಿಯಿಂದ ಸನ್ಮಾನಿಸಿರುವುದು ಅಭಿನಂದನೀಯ” ಎಂದರು.
ಈ ಸಂದರ್ಭದಲ್ಲಿ ಮಾರುತಿ ಮರಗೆಲಸಗಾರರ ಸಂಘದ ಪದಾಧಿಕಾರಿಗಳಾದ ಮಾ. ವೆ. ಪ್ರಕಾಶ್, ಜಿ. ಕೆ. ಸದಾಶಿವಾಚಾರಿ, ಎಂ. ರವಿಚಂದ್ರಶೆಟ್ಟಿ, ಕೊಪ್ಪ ಚಂದ್ರು, ಎಂ.ಎನ್. ರಮೇಶ್, ಶಿವರಾಜಚಾರಿ, ನಾರಾಯಣಸ್ವಾಮಿ, ರಾಮಣ್ಣ, ಫಯಾಜ್ ಖಾನ್, ಅಜಿಜ್, ವೆಂಕಟೇಶ್, ಚಂದ್ರು, ಚೇತನ್, ಸಿದ್ದಿಕ್, ಕೃಷ್ಣಪ್ಪ, ವೆಂಕಟಸ್ವಾಮಿ, ಮಾದೇಶ್, ಕುಮಾರ್, ಎಸ್.ವಿ.ಎಸ್ ಪರಮೇಶ್,ಸ್ಯಾಮರಾಜು. ಹಾಗೂ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.