ಉಪ್ಪಿನಂಗಡಿ (www.vknews.com) : ಇಲ್ಲಿನ ಎವರೆಸ್ಟ್ ಸಮೂಹ ಸಂಸ್ಥೆಯ ಮರ್ಹೂಂ ಯು.ಟಿ.ಅಬ್ಬಾಸ್ ಹಾಜಿಯ ಪುತ್ರ ಯು.ಟಿ.ಮುಹಮ್ಮದ್ ಆಸಿಫ್ (44 ವ.) ರವರು ಅಲ್ಪಕಾಲದ ಅನಾರೋಗ್ಯದಿಂದ ಜೂನ್ 17 ಗುರುವಾರದಂದು ನಿಧನರಾದರು.
ಅತ್ಯಂತ ಸೌಮ್ಯ ಸ್ವಭಾವದ, ಪರೋಪಕಾರಿ ಸ್ನೇಹಜೀವಿಯಾಗಿದ್ದ ಆಸಿಫ್ ರವರು ಕಡವಿನಬಾಗಿಲು ಮದ್ರಸ ಸಮಿತಿಯ ಕೋಶಾಧಿಕಾರಿಯಾಗಿ, ಕಡವಿನಬಾಗಿಲು ಅಲ್-ಅಮಿನ್ ಯಂಗ್ ಮೆನ್ಸ್ ನ ಖಜಾಂಜಿಯಾಗಿ, ಇಳಂತಿಲ ಸೌಹಾರ್ಧ ಸಮಿತಿ ಮೊದಲಾದ ಸಂಘಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದರು.
ವಿ.ಕೆ ನ್ಯೂಸ್ ನ ಪತ್ರಿಕಾ ಪ್ರತಿನಿಧಿಯಾದ ಮದೀನಾ ಮುನವ್ವರದಲ್ಲಿರುವ ಅಬ್ದುಲ್ ಅಝೀಝ್ ಸುರಿಬೈಲು ಇವರ ಬಾವ(ಸಹೋದರಿಯ ಪತಿ) ಆಸಿಫ್ ರವರು ಪತ್ನಿ ಶೆರೀಫ, ಪುತ್ರ ನಬೀಲ್, ಪುತ್ರಿ ನಹಿಮಾ ಮತ್ತು ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಹೆಸರಲ್ಲಿ ಮಯ್ಯಿತ್ ನಮಾಝ್ ಮಾಡುವಂತೆ, ಪರಲೋಕ ವಿಜಯಕ್ಕಾಗಿ ಪ್ರಾರ್ಥಿಸುವಂತೆ ಅಬ್ದುಲ್ ಅಝೀಝ್ ಸುರಿಬೈಲ್ ರವರು ವಿನಂತಿಸಿದ್ದಾರೆ.
ಅಝೀಝ್ ಸುರಿಬೈಲ್ ಮದೀನಾ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.