ಲಕ್ಕೂರು (ವಿಶ್ವ ಕನ್ನಡಿಗ ನ್ಯೂಸ್) ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಲಕ್ಕೂರಿನಲ್ಲಿ ಹಿರಿಯ ಚೇತನಗಳಿಗೆ ಶ್ರದ್ದಾಂಜಲಿ ಹಾಗೂ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿತ್ತು.
ಅಗಲಿದ ಚೇತನರಾದ ಹಿರಿಯ ಸ್ವಾತ್ರಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ ಗೌಡ, ದಲಿತ ಕವಿ, ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಪುರಸನಹಳ್ಳಿ ಶ್ರೀನಿವಾಸ್, ಹಾಗೂ ದಲಿತ ಮುಖಂಡ ಸುಬ್ರಮಣಿ (ಬುಜ್ಜಿ) ರವರಿಗೆ ಭಾವಪೂರ್ಣ ಶ್ರದ್ದಾಂಜಲಿಯ ಗೌರವವನ್ನು ಸಲ್ಲಿಸಿದ ರಾಜ್ಯ ದಲಿತ ಮುಖಂಡರು, ನೇತಾಜಿ ಶಿಕ್ಷಕರ ತರಬೇತಿ ಸಂಸ್ಥೆಯ ಸಂಸ್ಥಾಪಕರು, ಹಾಗೂ ಸಾಹಿತಿಗಳಾದ ವೆಂಕಟಾಪು ಸತ್ಯಾಂ ರವರು ಮಾತನಾಡುತ್ತಾ “ಬಂಡಾಯ ಕವಿ ಡಾ.ಸಿದ್ದಲಿಂಗಯ್ಯ ಅವರ ಕವಿತೆಗಳು ಕ್ರಾಂತಿ ಗೀತೆಗಳು ಎನಿಸಿಕೊಂಡವು ಆಡುಭಾಷೆಯಲ್ಲಿ ಗಟ್ಟಿತನದ ಸಾಹಿತ್ಯವನ್ನು ಕಟ್ಟಿಕೊಟ್ಟವರು. ಹೋರಾಟಗಾರರಿಗೆ ಶಕ್ತಿಯನ್ನು ತುಂಬಿದವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಹಾಗೂ ೮೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾಡೋಜ, ಪಂಪ, ನುಡಿಸಿರಿ, ನೃಪತುಂಗ, ಡಾ. ಅಂಬೇಡ್ಕರ್ ಮತ್ತು ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಮಹಾನ್ ವ್ಯಕ್ತಿ ಖ್ಯಾತ ಬಂಡಾಯ ಕವಿ ಸಿದ್ದಲಿಂಗಯ್ಯನವರು ಶ್ರೀಯುತರನ್ನು ಕಳೆದುಕೊಂಡು ಸಾಹಿತ್ಯ ಬಳಗ ಬಡವಾಗಿದೆ ಹಾಗೇಯೆ ನಮ್ಮನ್ನು ಅಗಲಿದ ಎಲ್ಲಾರಿಗೂ ಗೌರವ ನಮನ ಸಲ್ಲಿಸಿ ಅವರ ಹಾದಿಯಲ್ಲಿ ನಾವು ಸಾಗೋಣಾ” ಎಂದರು.
ಹಾಗೇ ಮಾಲೂರಿನ ಪುರಸಭಾ ಅಧ್ಯಕ್ಷರಾದ ಎನ್.ವಿ.ಮುರಳೀಧರ್ ರವರು ಮಾತನಾಡಿ “ಅಗಲಿದ ಚೇತನರಿಗೆ ಗೌರವ ಅರ್ಪಣೆಯ ಉತ್ತಮ ಕಾರ್ಯ ಎಲ್ಲಾ ಯುವಕರಿಗೂ ಸ್ಪೂರ್ತಿ ತುಂಬುವ ಮೂಲಕ ಎಲ್ಲಾರೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ದನಿ ಇಲ್ಲದ ಜನರ ಬಾಳಿಗೆ ಧ್ವನಿಯಾಗಬೇಕು” ಎಂದರು.
ಅಗಲಿದ ಮಹಾನ್ ಚೇತನರಿಗೆ ಭಾವಪೂರ್ಣ ಶ್ರದ್ದಾಂಜಲಿಯ ಕಾರ್ಯಕ್ಕೆ ಕ್ರಾಂತಿ ಗೀತೆಗಳ ಮೂಲಕ ಲಕ್ಕೂರಿನ ವೆಂಕಟೇಶ್, ಸಂತೋಷ್, ಮುರಳಿ ರವರು ಗೌರವ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಸಂಚಾಲಕರಾದ ಎ.ಕೆ.ವೆಂಕಟೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಸಾಹಿತಿಗಳಾದ ಲಕ್ಕೂರು ಆನಂದ್, ಗಂಗಪ್ಪ ಮಾತನಾಡಿದರು.
ಕರೋನಾ ಮಹಾಮಾರಿಯ ಸಂಕಷ್ಟದಲ್ಲಿ ಮಾನವೀಯ ಸೇವೆ ಸಲ್ಲಿಸಿದ ಮಾಲೂರಿನ ಸೈಯದ್ ರವರಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅಚ್ಚಪ್ಪ ಹಾಗೂ ಕುಟುಂಬ ವರ್ಗದವರಿಂದ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಮುಖಂಡರಾದ ಲಕ್ಕೂರು ಎಲ್.ವಿ.ರಾಜೇಶ. ಎಲ್.ವಿ.ಕೃಷ್ನಪ್ಪ, ವೆಂಕಟೇಶ್, ಗಂಗಪ್ಪ, ಶಿವಶಂಕರ್, ಸೋಮು, ಎಲ್.ವಿ.ರವಿ, ಗೋವಿಂದ, ಮುನಿರಾಜ್, ಪ್ರವೀಣ್, ಶ್ರೀನಿವಾಸ್, ಅಶೋಕ್, ಕಾಳೇಶ್, ಸುಹಾಸ್, ಲೋಕೇಶ್, ಶಿವು, ಹೇಮಂತ್,ನವೀನ್ ಹಾಗೂ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.