ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ಆರ್.ಜಿ ಪೆಟ್ರೋಲ್ ಬಂಕ್ ಬಳಿ ಇರುವ ಜಿ.ಇ.ರಾಮೇಗೌಡ ಚಾರಿಟೆಬಲ್ ಟ್ರಸ್ಟ್ (ರಿ.) ನ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ಹಾಗೂ ಜಲಗಾರರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯವನ್ನು ಮಾಡಲಾಯಿತು.
ದಿನಸಿ ಕಿಟ್ ವಿತರಣೆ ಕಾರ್ಯ ಮಾಡಿದ ಮಾಲೂರಿನ ಸಮಾಜ ಸೇವಕರು, ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾಗಿರುವ ಜಿ.ಇ.ರಾಮೇಗೌಡ ರವರು ಮಾತನಾಡಿ “ಕರೋನಾ ಸಂಕಷ್ಟದ ಸಮಯದಲ್ಲಿ ನಾವು ತಾಲ್ಲೂಕಿನಾದ್ಯಾಂತ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು, ಅಂಗವಿಕಲರು, ಬಡವರು ಈ ರೀತಿಯಲ್ಲಿ ಅನೇಕರಿಗೆ ಸಹಾಯಹಸ್ತವಾಗಿ ಆಹಾರದ ದಿನಸಿ ಕಿಟ್ ವಿತರಿಸಿ ಕಷ್ಟದಲ್ಲಿರುವವರಿಗೆ ಆಸರೆಯಾಗುವ ಕಾರ್ಯವನ್ನು ನಾವು ಮಾಡಿದ್ದೀವಿ, ಆ ನಿಟ್ಟಿನಲ್ಲಿ ಇಂದು ತಾಲ್ಲೂಕಿನ ದೊಡ್ಡಶಿವಾರ ಗ್ರಾಮ ಪಂಚಾಯಿತಿ ಕಚೇರಿಯ ನೌಕರರಿಗೆ ಹಾಗೂ ಜಲಗಾರರಿಗೆ ದಿನಸಿ ಕಿಟ್ ನೀಡಿದ್ದೀವಿ ಇದು ನಮ್ಮ ಕರ್ತವ್ಯ” ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಮಸ್ವಾಮಿರೆಡ್ಡಿ ರವರು ಮಾತನಾಡಿ “ಬಡವರ, ಹಸಿದವರ ಸೇವೆಗಾಗಿ ಇಂದು ಕಷ್ಟಕಾಲದಲ್ಲಿ ಮಾಲೂರಿನ ಸಮಾಜ ಸೇವಕರಾದ ಜಿ.ಇ.ರಾಮೇಗೌಡ ರವರ ಆಹಾರದ ಕಿಟ್ ವಿತರಣೆ ಬಹಳ ಉಪಯುಕ್ತವಾದದ್ದು, ತಾಲ್ಲೂಕಿನ ಜನರ ಸೇವೆಗಾಗಿ ಅವರು ಇಂದು ಎಲ್ಲಾ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ” ಎಂದರು.
ಈ ಕಾರ್ಯಕ್ರಮದಲ್ಲಿ ಜಿ.ಇ.ರಾಮೇಗೌಡ ರವರ ಪತ್ನಿ ಶ್ರೀಮತಿ ರಶ್ಮಿ, ಮಾಲೂರು ತಾಲ್ಲೂಕು ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿಗಳಾದ ದೊಮ್ಮಲೂರು ದೇವರಾಜ್, ಮಾಲೂರು ವರದರಾಜ್, ದೊಡ್ಡಶಿವಾರ ಗ್ರಾಮ ಪಂಚಾಯಿತಿ ನೌಕರರು, ಜಲಗಾರರು, ಹಾಗೂ ಜೆ.ಡಿ.ಎಸ್ ಕಾರ್ಯಕರ್ತರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.