(www.vknews.com) ಕೊಡ್ಲಿಪೇಟೆ: ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ SKSSF ಕೊಡ್ಲಿಪೇಟೆ ಶಾಖೆಯ ವತಿಯಿಂದ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕುರ್ಚಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ, SKSSF ಕೊಡ್ಲಿಪೇಟೆ ಶಾಖೆಯ ಅಧ್ಯಕ್ಷರಾದ ಇಬ್ರಾಹಿಂ ಮಲ್ಲಳ್ಳಿ,ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಜಿ.ಎ, ಕಾರ್ಯಕರ್ತರಾದ ಖಲಂದರ್ ಶಾಫಿ, ಅಬ್ದುಲ್ ರವೂಫ್ ಉಪಸ್ಥಿತರಿದ್ದರು.
ಹಿರಿಯರು ಹಾಗೂ ಸ್ಥಳೀಯ ಮುಖಂಡರು ಆದ ಜಿ.ಆರ್ ಸುಬ್ರಹ್ಮಣ್ಯ ಹಾಗೂ ಡಾ|| ಪವಿತ್ರ SKSSF ಕೊಡ್ಲಿಪೇಟೆ ಶಾಖೆಯ ನಡೆಯನ್ನು ಅಭಿನಂದಿಸಿದರು. ಆರೋಗ್ಯ ಕೇಂದ್ರದ ಇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.