ಮಂಜೇಶ್ವರ(ವಿಶ್ವಕನ್ನಡಿಗ ನ್ಯೂಸ್): ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತಲ್ಲಿ ಸಮಾಜ ಘಾತುಕರ ಕೃತ್ಯಗಳು ಹಾಗೂ ನಿರಂತರವಾದ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣಗಳಿಂದ ಉರಿಯದೇ ಇರುವ ಬೀದಿ ದೀಪಗಳ ಬದಲಿಗೆ ಹೊಸ ಬೀದಿ ದೀಪಗಳನ್ನು ಸ್ಥಾಪಿಸಬೇಕೆಂದೂ ಸಿಸಿಟಿವಿ ಹೊಸದಾಗಿ ಸ್ಥಾಪಿಸಬೇಕೆಂದೂ ಎಸ್.ಡಿ.ಪಿ.ಐ ಮನವಿ ಸಲ್ಲಿಸಿತು.
ಮಂಜೇಶ್ವರ ಪಂಚಾಯತಿನ ನಾಲ್ಕು ವಾರ್ಡುಗಳಲ್ಲಿರುವ ಜನ ಸಾಮನ್ಯರು ಅವಲಂಬಿಸುವ ಮುಖ್ಯ ಪೇಟೆಯಾದ ಹೊಸಂಗಡಿ ವೃತ್ತದ ಬಳಿ ಹಲವು ದಾರಿ ದೀಪಗಳು ಹಾಳಾಗಿ ಉರಿಯದೆ ದಿವಸಗಳು ಕಳೆದಿವೆ. ಸಿಸಿಟಿವಿಯ ಕೊರತೆಯ ಪ್ರಯೋಜನ ಪಡೆದ ಕಳ್ಳರು ಕಳೆದ ಕೆಲವೇ ದಿವಸಗಳ ಹಿಂದೆ ಒಂದು ಚಿನ್ನದಂಗಡಿಯಿಂದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.
ಹೊಸಂಗಡಿಯ ಆಸು ಪಾಸಿನ ಪ್ರದೇಶದ ಜನರು ಅತೀ ಹೆಚ್ಚಾಗಿ ಈ ಪೇಟೆಯನ್ನೇ ಅವಲಂಬಿಸಿರುವುದರಿಂದ ಈ ಕೊರತೆಗಳಿಗೆ ಪರಿಹಾರವನ್ನು ಅತೀ ಶೀಘ್ರದಲ್ಲಿ ನೆರವೇರಿಸಿಕೊಡಬೇಕೆಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಚೇರ್ಮಾನ್ ಹಮೀದ್ ಹೊಸಂಗಡಿ, ಎಸ್.ಡಿ.ಪಿ.ಐ ಪಂಚಾಯತ್ ಅಧ್ಯಕ್ಷ ಸಲಾಂ ಮಂಜೇಶ್ವರ, ಉಪಾಧ್ಯಕ್ಷ ಯಾಕೂಬ್ ಹೊಸಂಗಡಿ , ಸಮೀರ್ ಚೆಕ್ ಪೋಸ್ಟ್ ಮುಂತಾದವರೊಂದಿಗೆ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಿನಾ ಮೊಂತೆರೋಗೆ ಮನವಿ ಸಲ್ಲಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.