ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ವತಿಯಿಂದ 2021-2022 ನೇ ಕೋಲಾರ ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಸಮಾರಂಭವನ್ನು ಮಾಲೂರಿನ ಬಾಪೂಜಿ ಬಿ.ಇಡಿ ಕಾಲೇಜಿನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಶಿಶು ತಜ್ಞರು, ಮಕ್ಕಳ ವೈದ್ಯಾಧಿಕಾರಿಗಳು, ಸಮಾಜಮುಖಿ ಚಿಂತನೆ ಉಳ್ಳವರಾದ ಡಾ.ಕಿರಣ್ ಸೋಮಣ್ಣ ರವರಿಗೆ ನೀಡಲಾಗುವುದು ಎಂದು ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷರಾದ ಲಕ್ಕೂರು ಎಂ.ನಾಗರಾಜ್ ತಿಳಿಸಿದರು.
ನಾಳೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಲೂರು ಶಾಸಕ ಕೆ.ವೈ.ನಂಜೇಗೌಡ ರವರು ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಜೆ.ಜಿ.ನಾಗರಾಜ್, ಪ್ರಶಸ್ತಿ ಪ್ರದಾನ ಮಾಡುವವರು ವೇಣುಗೋಪಾಲ್ ವಹ್ನಿ ಸಾಹಿತಿಗಳು, ಮಾಲೂರು, ಮುಖ್ಯ ಅತಿಥಿಗಳಾಗಿ ಸಾಹಿತ್ಯ ಪರಿಚಾರಕರು, ಆಡಳಿತಾಧಿಕಾರಿಗಳಾದ ವೇಣು ವಿದ್ಯಾಸಂಸ್ಥೆಯ ಎನ್.ಬಿ.ಗೋಪಾಲ್ಗೌಡ, ವಕೀಲರಾದ ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ಭಾನುತೇಜಾ ರವರು ಭಾಗವಹಿಸಲಿದ್ದಾರೆ. ಹಾಗೇ ವಿಶ್ವಮಾನವ ಕುವೆಂಪು ಫೌಂಡೇಶನ್ ಹಾಗೂ ಡಾ.ಕಿರಣ್ ಸೋಮಣ್ಣ ಅಭಿಮಾನಿ ಬಳಗ ಭಾಗವಹಿಸುವರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.