ಸಕಲೇಶಪುರ (www.vknews.com) : ಟಿಪ್ಪುಸುಲ್ತಾನ್ ಜಯಂತಿ ಅಂಗವಾಗಿ ಸಕಲೇಶಪುರ ವನ್ನು ಅಮಲು ಮುಕ್ತ ತಾಲ್ಲೂಕಾಗಿ ಘೋಷಿಸುವ ಇದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವ ಸಂಕಲ್ಪವನ್ನು ಕೈಗೊಳ್ಳಲಾಯಿತು.
ಪಟ್ಟಣದ ಕುಶಾಲನಗರ ಬಡಾವಣೆಯಟಿಪ್ಪು ಸುಲ್ತಾನ್ ಸರ್ಕಲ್ , ಎಂ ಎಸ್ ಹಾಲ್ ನಲ್ಲಿ ಟಿಪ್ಪು ಸುಲ್ತಾನ್ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ. ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ಸಮೂಹ ತಾಲೂಕನ್ನು ಅಮಲು ಮುಕ್ತ ಪ್ರದೇಶವಾಗಿ ಮಾಡುವ ಘೋಷಣೆಯ ಪ್ರತಿಜ್ಞೆ ಮಾಡಿದರು.
ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಟಿಪ್ಪು ಸುಲ್ತಾನ್ ಟ್ರಸ್ಟ್ ಅಧ್ಯಕ್ಷರು ಪುರಸಭೆಯ ಮಾಜಿ ಅಧ್ಯಕ್ಷರು ಸೈಯದ್ ಮುಫೀಜ್ ನೆರವೇರಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಯಡೆಹಳ್ಳಿ ಮಂಜುನಾಥ್ ಮಾತನಾಡಿ, ಟಿಪ್ಪು ಸುಲ್ತಾನ್ ರವರಿಗೆ ಗೌರವ ನಮನ ಸಲ್ಲಿಸುವ ಹಾಗೂ ಅವರ ಹಾದಿಯಲ್ಲಿ ಈ ದೇಶವನ್ನು ಸುಂದರವಾಗಿ, ಬಲಿಷ್ಠವಾಗಿ ಆರೋಗ್ಯಕರವಾಗಿ ಕಟ್ಟಲು ಸಮಾಜದಿಂದ ದುಶ್ಚಟಗಳನ್ನು ಹೋಗಲಾಡಿಸಬೇಕಾಗಿದೆ ಎಂದರು.
ಇಂದು ಮಧ್ಯಪಾನವನ್ನು ಆಧಾರವಾಗಿಟ್ಟುಕೊಂಡು ದೇಶ ಆಳಲು ಸರಕಾರಗಳು ಮುಂದಾಗಿದ್ದಾರೆ. ಮದ್ಯಪಾನವನ್ನು ನಿಷೇಧಿಸುವ ಮೂಲಕ ಈ ದೇಶದಲ್ಲಿ ಅಧಿಕಾರ ಚಲಾಯಿಸಿದ ಒಬ್ಬ ರಾಜನಿದ್ದರೆ ಅದು ಟಿಪ್ಪುಸುಲ್ತಾನ್ ಮಾತ್ರ ಎಂದು ಹೇಳಿದರು.ರೈತರ ಪರವಾಗಿ ಮಹಿಳೆಯರ ಪರವಾಗಿ ಕೂಲಿ ಕಾರ್ಮಿಕರ ಪರವಾಗಿ ಟಿಪ್ಪು ಸುಲ್ತಾನ್ ಆಡಳಿತ ಇಂದಿನ ಸರಕಾರಗಳಿಗೆ ಮಾದರಿ ಎಂದು ಹೇಳಿದರು. ಧರ್ಮಗುರುಗಳು, ವಿಚಾರವಂತರು ಇಬ್ರಾಹಿಂ ಕೆ ಎಂ ಮುಸ್ಲಿಯಾರ್ ಮಾತನಾಡಿ, ಟಿಪ್ಪುಸುಲ್ತಾನ್ ಆಡಳಿತ ಸಮಾಜಕ್ಕೆ ಮಾದರಿಯಾಗಿದೆ. ರಾಜಧರ್ಮವನ್ನು ಪಾಲಿಸಿ ಸರ್ವರಿಗೂ ಸಮಪಾಲು ನೀಡುವಂತಹ ಅಧಿಕಾರವನ್ನು ನೀಡಿದ್ದು ಟಿಪ್ಪುಸುಲ್ತಾನ್ ಎಂದು ಹೇಳಿದರು. ರಣರಂಗದಲ್ಲೂ ಸಹ ರಾಜ ಧರ್ಮವನ್ನು ಪಾಲಿಸುವುದನ್ನು ಕೈಬಿಡಲಿಲ್ಲ ಸೈನಿಕರನ್ನು ಬಲಿಕೊಟ್ಟು ಅಧಿಕಾರವನ್ನು ಹಿಡಿಯುವುದು ಅವರಿಗೆ ಇಷ್ಟವಿರಲಿಲ್ಲ ಹಾಗಾಗಿ ರಣರಂಗದಲ್ಲಿ ಒಬ್ಬ ಸಮರ್ಥ ಸೈನಿಕನಾಗಿ ಈ ದೇಶದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಿ ಟಿಪ್ಪು ಸುಲ್ತಾನ್ ಎಂದು ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಸ ಬಾ ಭಸ್ಕರ್, ಪುರಸಭೆಯ ಮಾಜಿ ಉಪಾಧ್ಯಕ್ಷೆ ಸರಿನಾ ರಶೀದ್, ಸದಸ್ಯರಾದ ಅಣ್ಣಪ್ಪ, ವರಮಹಾಲಕ್ಷ್ಮಿ, ಮುಖೇಶ್ ಶೆಟ್ಟಿ, ಸಮೀರ್ ಖಾನ್, ಇಸ್ರಾರ್ ಅಹಮದ್,ವಕೀಲ ಷಣ್ಮುಖ, ಪತ್ರಕರ್ತರ ಮಲ್ನಾಡ್ ಮೆಹಬೂಬ್, ಕಮ್ಯುನಿಸ್ಟ್ ಪಕ್ಷದ ಮುಖಂಡ ಸಂತು,ಉದ್ಯಮಿ ಮೊಹಮ್ಮದ್ ಪೈಝಾನ್, ಕೆ ಎಂ ಹಾರೀಸ್, ಟಿಪ್ಪು ಸುಲ್ತಾನ್ ಸಂಘದಜಾಕೀರ್ ಶಾಮಿಯಾನ, ಮುಜಮ್ಮಿಲ್ ಪಾಶ, ರಹೀಮ್, ಟಿಪ್ಪು ಟ್ರಸ್ಟ್ ಸಹ ಕಾರ್ಯದರ್ಶಿ ಸುಲೇಮಾನ್ ಇತರರು ಇದ್ದರು.ಸಾರ್ವಜನಿಕ ರಿಗೆ ಸಿಹಿ ಹಾಗೂ ಹಾಲು ವಿತರಿಸಲಾಯಿತು.Attachments area
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.