ಅಬುಧಾಬಿ (www.vknews.com) ; ಹಿಂದೆ ಕೇವಲ ಮರುಭೂಮಿ ಮಾತ್ರ ಇದ್ದ ಹಲವು ಪುಟ್ಟ ಪುಟ್ಟ ಪ್ರಾಂತ್ಯಗಳು ಸೇರಿ ಇಂದು ಜಗತ್ತೇ ಅಚ್ಚರಿಸಿ ಮೂಡಿಸುವ ಮಾಯಾನಗರಿಯಾಗಿ ಮಾರ್ಪಟ್ಟು ನೂರಾರು ಭಾಷೆ ಧರ್ಮ ದೇಶಗಳ ಜನರಿಗೆ ಕರ್ಮಭೂಮಿಯಾಗಿ ರಾಷ್ಟ್ರಪಿತ ಶೇಕ್ ಜಾಯೆದ್ ಅವರು ಸ್ಥಾಪಿಸಿದ ಸಂಯುಕ್ತ ಅರಬ್ ಸಂಸ್ಥಾನದ 59ನೇ ರಾಷ್ಟ್ರೀಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಕೋಟಿಯಾಂತರ ಜನರಿಗೆ ಅನ್ನ ನೀರು ನೀಡುವ ಈ ಮಣ್ಣಿಗೆ ನನ್ನೊದೊಂದು ಸಲಾಂ.
ಸಂಯುಕ್ತ ಅರಬ್ ಸಂಸ್ಥಾನ ದೇಶವು ಒಂದು ಸಂಪೂರ್ಣ ಮುಸ್ಲಿಂ ರಾಷ್ತ್ರವಾದರೂ ಮಾಯಾನಗರಿ ದುಬೈಯಲ್ಲಿ ಮಂದಿರ ಮಸೀದಿ ಚರ್ಚು ಗುರುದ್ವಾರ ಸೇರಿ ಎಲ್ಲಾ ಧರ್ಮದ ಜನರಿಗೆ ಪ್ರಾರ್ಥನೆ ಮಾಡಲು ವ್ಯವಸ್ಥೆ ಇದೆ. ಪ್ರಪಂಚದಾದ್ಯಂತ ಇರುವ ದೇಶಗಳ ಜನರು ಸೇವಿಸಲು ಯೋಗ್ಯವಾದ ಅವರದ್ದೇ ರಾಷ್ಟ್ರದ ಆಹಾರ ಪದ್ದತಿ ಜೀವನ ಶೈಲಿ ಮತ್ತು ಉಡುಗೆ ತೊಡುಗೆ ತೊಡಲು ಅವಕಾಶ, ತಮ್ಮದೇ ಆಚಾರ ವಿಚಾರ ಸಂಸ್ಕ್ರತಿ ಅಳವಡಿಸಿ ಜೀವನ ನಡೆಸಲು ಅವಕಾಶವಿದೇ.
ಈ ರಾಷ್ಟ್ರದ ಪ್ರಮುಖ ಗುಣ ಎಂದರೆ ಎಲ್ಲಾ ದೇಶದ ಜನರನ್ನು ಬಣ್ಣ, ಭಾಷೆ ಜಾತಿ, ಧರ್ಮ ದೇಶ, ಆಹಾರ ಪದ್ದತಿ, ಉಡುಗೆ ತೊಡುಗೆ, ಸಂಸ್ಕತಿ ಎಂಬ ವತ್ಯಾಸವಿಲ್ಲದೆ ಒಂದೇ ರೀತಿಯಲ್ಲಿ ಕಾಣುದು.
ಅರಬರ ಈ ನಾಡು ಎಷ್ಟೊಂದು ಸುಂದರ ಮತ್ತು ಹಲವು ಧರ್ಮಿಯರ ಸಹೋದರತೆಯ ಪ್ರತೀಕ ,
ಇಲ್ಲಿನ ಕೆಲವು ಗುಣಗಳು ಕೆಳಕಂಡಂತೆ
1- ಯು ಏ ಇ ಯಲ್ಲಿ ಸುಮಾರು 194ಕ್ಕಿಂತಲೂ ಹೆಚ್ಚು ರಾಷ್ಟ್ರಗಳ ಜನರು ಪರಸ್ಪರ ಸಹೋದರತೆಯಿಂದ ಜೀವಿಸುತ್ತಾರೆ , ಕಾರಣ ಇಲ್ಲಿನ ಕಟ್ಟು ನಿಟ್ಟಾದ ನ್ಯಾಯ ವ್ಯವಸ್ಥೆ ಎಲ್ಲರಿಗೂ ಒಂದೇ ಸಮಾನ ನ್ಯಾಯ ನಿಬಂಧನೆಗಳು
2- ಮಸೀದಿ ಚರ್ಚ್ ಸಿಖ್ಖರ ಗುರುದ್ವಾರ ಮತ್ತು ಹಿಂದೂಗಳ ದೇವಸ್ಥಾನ ( ಹಿಂದೂ ದೇವಸ್ಥಾನ 1958 ರಲ್ಲಿ ಶೇಕ್ ರಾಶಿದ್ ಬಿನ್ ಸಹೀದ್ ಅಲ್ ಮಕ್ತುಮ್ ರಾಜಕುಮಾರ ಇವರ ಆಡಳಿತ ಸಮಯದಲ್ಲಿ ನಿರ್ಮಿಸಿ ಕೊಟ್ಟರು – ಬರ್ ದುಬೈ ಕಡಲ ತೀರದಲ್ಲಿ ಮಸೀದಿಗೆ ಹೊಂದಿಕೊಂಡು ಪೂಜೆ ಮಾಡುವ ಕೊಠಡಿಗಳು ಇದೆ )
3- ಇಸ್ಲಾಂ ನಿಷೇದ ಮಾಡಿದ ಹಂದಿ ಮಾಂಸ ಸಹಿತ ಲಭ್ಯ, ಯಾವುದನ್ನು ಬೇಕಾದರೂ ಧರ್ಮದ ಚೌಕಟ್ಟಿನಲ್ಲಿ ಭಕ್ಷಿಸಬಹುದು.
4- ಹೆಣ್ಣು ಮಕ್ಕಳು ರಾತ್ರಿ 2 ಗಂಟೆಗೂ ಯಾರ ಭಯವಿಲ್ಲದೆ ರಸ್ತೆಯಲ್ಲಿ ಓಡಾಡುತ್ತಾರೆ ,
5-ಕಟ್ಟುನಿಟ್ಟಾದ ಟ್ರಾಫಿಕ್ ಮತ್ತು ಇನ್ನಿತರ ಸಾರ್ವಜನಿಕ ನಿಯಮಗಳು
6- ಸ್ವಚ್ಛತೆ, ಅರೋಗ್ಯ ವ್ಯವಸ್ಥೆ, ಟೆಕ್ನಾಲಜಿ, ರಸ್ತೆ ಮುಂತಾದ ಮೂಲಸೌಕರ್ಯ
7- ಇಲ್ಲಿನ ಮೂಲನಿವಾಸಿಗಳಾದ ಅರಬರ ಮೃದು ಸ್ವಭಾವ
8- ಸರ್ಕಾರಿ ಕೆಲಸವರು ಕೈಕೂಲಿ ತೆಗುಯುದನ್ನು ಊಹಿಸಲು ಸಹ ಸಾಧ್ಯವಿಲ್ಲ.
9- ಇಲ್ಲಿ ಆಡಳಿತಾಧಿಕಾರಿಗಳು ಮತ್ತು ಸಾರ್ವಜನಿಕರು ಶಿಕ್ಷಣ, ಅಭಿವೃದ್ಧಿ, ಹೊಸ ಹೊಸ ಆವಿಷ್ಕಾರ, ಹೊಸ ಹೊಸ ವಿಶ್ವ ಧಾಖಲೆಯಲ್ಲಿ ಒಳಪಡುವ ಹತ್ತು ಹಲವು ಪ್ರಾಜೆಕ್ಟುಗಳ ಬಗ್ಗೆ ಚಿಂತಿಸಿ ದೇಶವನ್ನು ವೇಗವಾಗಿ ಅಭಿವೃದ್ಧಿ ಪಥದತ್ತ ಕೊಂಡ್ಯೂತ್ತಾರೆ.
ಲೇಖನ : ರಫೀಕಲಿ ದುಬೈ ಕನ್ನಡಿಗ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.