(www.vknews.com) ; ಪ್ರವಾದಿ ಮುಸ್ತಫಾ (ಸ.ಅ) ಹೇಳಿದರು: ಒಂದು ಕಾಲವು ಬರಲಿದೆ. ಆ ಕಾಲ ಕೆಡುಕಿನ ಕಾಲವಾಗಲಿದೆ.ಆ ಕಾಲದಲ್ಲಿ ಕಳೆದ ಹೋದ ದಿನಗಳಿಗಿಂತ ಹೆಚ್ಚು ಅಪಘಾತಗಳೂ, ಕಳೆದ ಹೋದ ದಿನಗಳ ರೋಗಗಳಿಗಿಂತ ಮಾರಕ ರೋಗಗಗಳೂ ಮನುಷ್ಯನನ್ನು ಕಾಡಲಿದೆ ಅತೀ ಭೀಖರವಾದ ಭೂಕಂಪಗಳು ಸುನಾಮಿಗಳು ಮಾತ್ರವಲ್ಲದೇ ನಿಮ್ಮ ಪೂರ್ವಜರು ಕಾಣದ ಹಾಗೂ ಕೇಳದ ಅತೀ ಭೀಕರವಾದ ಅಧ್ಬುತ ಗಳು ನಿಮಗೆ ಕಾಣಲಿದೆ. (ಹದೀಸ್)
ಪ್ರತಿಯೊರ್ವನಿಗೂ ಆತನ ಜೀವನದಲ್ಲಿ ಅನುಭವಿಸದೇ ಇದ್ದ ನೋವುಗಳು, ಕಷ್ಟಗಳು,ಶಿಕ್ಷೆಗಳು ಹೀಗೆ ಹಲವಾರು ಸಂಕಷ್ಟಗಳನ್ನು ಅಲ್ಲಾಹನು ನೀಡುವನು. ಈ ಸಮಯದಲ್ಲಾಗಿದೆ ನೀನು ಅಲ್ಲಾಹನನ್ನು ಅತೀಹೆಚ್ಚು ಭಯಪಡಬೇಕಾದುದು.
ಮರಣ ಯಾವಾಗ ಮನುಷ್ಯನಿಗೆ ಸಂಭವಿಸಬಹುದು ಎಂದ ಹೇಳಲಾಗದು. ಇಂದು ಕೆಡುಕಾಗುವ ಸಂದರ್ಭದಲ್ಲಿ ಮನುಷ್ಯನು ಕಾಲವನ್ನು ಆಕ್ಷೇಪಿಸುವನು.ಅಲ್ಲಾಹು ನೀಡುವ ಶಿಕ್ಷೆಯ ಮುಂದೆ ಮನುಷ್ಯನು ಕಾಲವನ್ನು ಸಮಯವನ್ನು ಆಕ್ಷೇಪಿಸುವನು. “ಎಂತಹ ಕಾಲವಾಗಿದೆ ಇದು” ಕಾಲಕ್ಕೆ ಯಾರೂ ಕೂಡ ಆಕ್ಷೇಪಿಸಬಾರದು ಅಲ್ಲಾಹುವಾಗಿದ್ದಾನೆ ಆ ಕಾಲವನ್ನು ನಿಯಂತ್ರಿಸುವವನು. ಮನುಷ್ಯನು ಮಾಡಿರುವಂತಹ ನೀಚ ಕಾರ್ಯಗಳಿಗೆ ಅಲ್ಲಾಹನು ಆ ಕಾಲದಲ್ಲಿ ಕೆಲವೊಂದು ಶಿಕ್ಷೆಗಳನ್ನು ನೀಡುವನು. ಹಲವು ನಾನು ಕಂಡವರೇ ಕಳೆದ ಎರಡು ವರುಷಗಳಿಂದ ಕೊರೊಣ ಎಂಬ ಮಹಾ ಮಾರಿಯಿಂದ ಜಗತ್ತೇ ತತ್ತರಿಸಿವೆ. ಅದೆಷ್ಟೊ ವ್ಯಕ್ತಿಗಳು ಮರಣ ಮೃದುಂಗವನ್ನೂ ಸ್ವೀಕರಿಸಿದ್ದಾರೆ. ಈಗ ಒಮಿಕ್ರಾನ್ ಎಂಬ ಮಹಾ ಮಾರಿಯೂ ನಮ್ಮನ್ನು ಬೆನ್ನಟ್ಟುತ್ತಿದೆ.
2022 ಜನವರಿ ಪ್ರಾರಂಭವಾಗುವಾಗ ನಮ್ಮ ಮುಂದಿನ ದಿನಗಳಲ್ಲಿ ಮರಣಕ್ಕೆ ಸಮೀಪವಾಗಿರುವ ದಿನಗಳಾಗಿದೆ ಎಂಬ ಜ್ಞಾನ ಪ್ರತಿಯೊಬ್ಬನಿಗೂ ಇರಬೇಕು. ಹೊಸ ವರುಷ ಬಂದ ಹಾಗೆ ಮನುಷ್ಯ ಹೊಸ ಆಯುಷ್ಯದ ಹೊಸ ಘಟ್ಟಕ್ಕೆ ಪಾದಾರ್ಪಣೆ ಮಾಡುತ್ತಾನೆ.. ಈ ಆಯುಷ್ಯದ ನಡುವೆ ಅಲ್ಲಾಹು ನೀಡಿದಂತಹ ಅನುಗ್ರಹಕ್ಕೆ ನಾವು ಕೃತಜ್ಞರಾಗಬೇಕು. ಮಾಡಿದಂತಹಾ ಪಾಪ ಕರ್ಮಗಳನ್ನು ಅಲ್ಲಾಹನ ಮುಂದೆ ಹೇಳಿ ಪಸ್ಚಾತಾಪ ಪಟ್ಟು ಮಾಡಿದ ತಪ್ಪನ್ನು ಖೇದಕರಿಸಬೇಕಾಗಿದೆ.
ನಾಳೆ ಒಳ್ಳೆಯನಾಗುವೆ ಅಥವ ಮುಂದಿನ ಶುಕ್ರವಾದ ಒಳ್ಳೆಯವನಾಗುವೆ, ಅಥವ ಮುಂದಿನ ರಮಳಾನ್ ತಿಂಗಳಲ್ಲಿ ಒಳ್ಳೆಯವನಾಗುವೆ ಎಂಬ ಚಿಂತೆಯನ್ನು ಎಲ್ಲಾರು ಬಿಡಿ. ನಾಳೆ ಎಂಬುವವನು ಮನೆಹಾಳ ಎಂಬ ಗಾದೆ ಕೇಳಿರಬಹುದು. ನಾಳೆ ನಾವು ಇರುತ್ತೇವೆ ಎಂಬ ದೃಡ ನಿರ್ಧಾರ ಯಾರ ಬಳಿಯೂ ಇಲ್ಲ.
ಕಳೆದ ವರ್ಷ ಅಲ್ಲಾಹು ನಮಗೆ ನೀಡಿದಂತಹ ಅನುಗ್ರಹಗಳು, ಸಮಯಗಳು, ಆಯುಷ್ಯಗಳು ಆ ಆಯುಷ್ಯ ಗಳಲ್ಲಿ ಮಾಡಿದಂತಹ ಪಾಪಗಳಿಗೆ ಖೇದಿಸಬೇಕಾಗಿದೆ. ಇದೆಲ್ಲಾ ಇರುವವನಾಗಿದ್ದಾನೆ ಉತ್ತಮ ಮನುಷ್ಯ. ಕಳೆದ ಒಂದು ವರ್ಷ ನಮ್ಮಿಂದ ಅತಿ ಬೇಗ ಬೀಳ್ಕೊಡುತ್ತಾ ಕಳೆದ ಮಾಸ ನಮ್ಮಿಂದ ಹೇಗೆ ದೂರವಾಯಿತೋ ಅದೇ ಪ್ರಕಾರ ಒಂದು ವರ್ಷ ನಮ್ಮಿಂದ ದೂರವಾಯಿತು. ಪುಣ್ಯ ರಸೂಲ್ (ಸ.ಅ) ಹೇಳಿದರು:- ಕಾಲಗಳು ಹತ್ತಿರ ಹತ್ತಿರವಾಗದೆ ಅಂತ್ಯ ದಿನ ಸಂಭವಿಸಲಾರದು.
ವರ್ಷಗಳು ಮಾಸಗಳಲ್ಲಿ ಮಾಸಗಳು ದಿವಸಗಳಲ್ಲಿ ದಿವಸಗಳು ಗಂಟೆಗಳಲ್ಲಿ ಗಂಟೆಗಳು ನಿಮಿಷಗಳಲ್ಲಿ ನಿಮಿಷಗಳು ಸೆಕುಂಡುಗಳಲ್ಲಿಗೂ ಸೆಕುಂಡುಗಳು ಸಹಸ್ರಾರು ಸೆಕುಂಡುಗಳಲ್ಲಿ ಒರುವ ದಿನಗಳಲ್ಲಾಗಿದೆ ಅಂತ್ಯ ದಿನ ಸಂಭವಿಸಿವುದು. ಸಮಯಗಳು ಮನುಷ್ಯನಿಗೆ ಹಿಡಿತದಲ್ಲಿ ಸಿಗುವುದಿಲ್ಲ ಯಾವ ಕಾರ್ಯವನ್ನೂ ಕೈಗೊಳ್ಳಲು ಮನುಷ್ಯನಿಗೆ ಸಮಯ ಸಾಕಾಗುವುದಿಲ್ಲ ಮನುಷ್ಯನು ಲೌಖಿಖ ಜೀವನದಲ್ಲಿ ಅಲೆದಾಡುತ್ತಾ ಇರುವನು ಇದೆಲ್ಲಾ ಕಿಯಾಮತ್ ದಿನದ ಲಕ್ಷಣವಾಗಿದೆ.NEW YEAR ಒಬ್ಬ ಮುಸ್ಲಿಮ್ ಆಚರಿಸುವ ರೀತಿ ಹೇಗೆಂದು ನಾವು ಕಲಿಯಬೇಕಾಗಿದೆ. ಇಂದು ವಿಶ್ವಾದ್ಯಂತ NEW YEAR ಆಘೊಷಗಳನ್ನ ಮದ್ಯಪಾನದಿಂದಲೂ, ಲಹರಿ ಹಾಗೂ ಮಾದಕ ವಸ್ತುವಿನಿಂದಲೂ, ವ್ಯಭಿಚಾರದಿಂದಲೂ ಆಗಿದೆ ಇಂದಿನ New Year. ಆದರೆ ಒಬ್ಬ ಮುಸ್ಲಿಮನ NEW YEAR DECEMBER 31 ರಂದು ಅಲ್ಲ ಮುಹರ್ರಂ 1 ರಿಂದವಾಗಿದೆ.
ಅದೇ ರೀತಿ ತನ್ನ ಮಕ್ಕಳ ಹುಟ್ಟಿದ ದಿನವನ್ನು BIRTHDAY ಯಾಗಿ ಪರಿವರ್ತನೆ ಮಾಡಿದ್ದಾರೆ. ಇದೆಲ್ಲಾ ಇಸ್ಲಾಮಿನ ಆಚರವಲ್ಲ. ಅದರ ಎದುರು ಯಾರಾದರೂ ಭಾಷಣ ಮಾಡಿದರೆ ಅವರೆದುರು ಪ್ರತಿಕ್ರಿಯೆ ನೀಡುವಂತಹ ಸಂದೇಶಗಳನ್ನು ರಾವಾಣೆ ಮಾಡುತ್ತಾರೆ. ಪಾಶ್ಚಾತ್ಯರ ಸಂಸ್ಕೃತಿಗಳನ್ನು ಈ ಮುಸ್ಲಿಂ ಉಮ್ಮತಿನಲ್ಲಿ ನೆಲೆನಿಂತಿದೆ. ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ಒಬ್ಬ ವರನನ್ನು ಶವ ಮಂಚದಲ್ಲಿ ಹೊತ್ತು ತಂದ ವೀಡಿಯೋ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಇಂತಹ ನೀಚ ವೃತ್ತಿ ಮುಸ್ಲಿಂ ಉಮ್ಮತಿಗೆ ಲಜ್ಜೆಯನ್ನುಂಟುಮಾಡಿದೆ. ಇಂದು ಮುಸ್ಲಿಂ ನಾಮಧಾರಿಗಳು ಇನ್ಸ್ಟಾಗ್ರಾಮ್ ಫೇಸ್ಬುಕ್ ಯೂಟ್ಯೂಬ್ ಮುಂತಾದ ಸೊಶಿಯಲ್ ಮಿಡಿಯಾಗಳಲ್ಲಿ ಸ್ವತಃ ಅರ್ಧ ನಗ್ನವನ್ನು ಪ್ರದರ್ಶಿಸಿ ಲೈಕ್ ಹಾಗೂ ಕಮೆಂಟಿಗಾಗಿ ಅಂಗಲಾಚುವ ನಾಮಾಧಾರಿ ಮುಸ್ಲಿಮರೂ ಚಿಂತಿಸಬೇಕಾಗಿದೆ. ಅದೇ ರೀತಿ ಅಂತಹ ನೀಚ ಕೃತ್ಯಕ್ಕೆ ಸಹಾಯಕರಾಗಿ ಕಾರ್ಯ ನಿರ್ವಹಿಸುವ ಪೊಷಕರೂ ಮಕ್ಕಳ ಕಡೆ ಗಮನ ಕೊಡಬೇಕಾಗಿದೆ. ಅಂತ್ಯದಿನದ ಸಂಧರ್ಭದಲ್ಲಿ ಕೊಲೆಗಳು ಅಧಿಕವಾಗಿರುತ್ತೆ ಎಂದು ಪ್ರವಾದಿ ವರ್ಯಯ ಮಾತಿದೆ. ಇಂದು ಸ್ವತಃ ತಂದೆ ಮಕ್ಕಳನ್ನು ಮಕ್ಕಳು ತಂದೆ ತಾಯಿಯರನ್ನು ಸಹೋದರ ಸಹೋದರಿಯನ್ನು ಪತಿ ಪತ್ನಿಯನ್ನು ಹೀಗೆ ಹಲವಾರು ಕೊಲೆ ಪ್ರಕರಣಗಳು ನಮಗೆ ಸರ್ವೇಸಾಮಾನ್ಯ ಇದರ ಗೌರವ ನಾವು ಅರಿತಿರಬೇಕಾಗಿದೆ. ಇವೆಲ್ಲವೂ ಇಮಾಂ ಮಹದಿ (ರ) ಆಗಮನದ ಮುನ್ಸೂಚನೆಯಾಗಿದೆ. ಇನ್ನಾದರು ಅಲ್ಲಾಹನು ನೀಡಿದ ಔದಾರ್ಯವನ್ನು ಸ್ಮರಿಸಿ ಇಲಾಹನೆಡೆಗೆ ನಾವು ಮರಳಬೇಕಾಗಿದೆ.
ಅಲ್ಲಾಹನು ನಮಗೆ ಈಮಾನ್ ನೀಡಲಿ ಆಮೀನ್.
✍🏻 ಮುಹಮ್ಮದ್ ಶಫೀಕ್ ಅಲ್-ಫಾಳಿಲ್ ಕೌಸರಿ ಕುಕ್ಕಾಜೆ(ಖತೀಬರು ಬದರ್ ಟೌನ್ ಜುಮಾ ಮಸ್ಜಿದ್ ವೆಳ್ಳಾರಿಕುಂಡ್ ಕಾಞಂಗಾಡ್)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.