ಮಂಗಳೂರು(www.vknews.in): ಮದುವೆಯ ʼತಾಳʼ ಎಂಬ ಅನಿಸ್ಲಾಮಿಕ ಕಾರ್ಯಕ್ರಮಕ್ಕೆ ಕೊರಗಜ್ಜನ ರೂಪದಲ್ಲಿ ವೇಷ ಧರಿಸಿ ಬಂದ ಮದುಮಗನ ಕೃತ್ಯವನ್ನು ಎಸ್ಕೆಎಸ್ಎಸ್ಎಫ್ ದ.ಕ.ಜಿಲ್ಲಾ ಸಮಿತಿ ತೀವೃವಾಗಿ ಖಂಡಿಸಿದೆ. ಮದುವೆ ಎಂಬುದು ಒಂದು ಶುಭ ಸಮಾರಂಭ. ಒಂದು ಪುಣ್ಯ ಕರ್ಮ. ಇಂತಹ ಒಂದು ಕರ್ಮವನ್ನು ಗೆಳೆಯರ ಸಂತೋಷಕ್ಕಾಗಿ ಅನಿಸ್ಲಾಮಿಕ ರೀತಿಯಲ್ಲಿ ಆಚರಿಸುತ್ತಿರುವುದು ನಾಚಿಕೆಗೇಡಿನ ವಿಷಯ. ಇದು ಮುಸ್ಲಿಂ ಸಮುದಾಯವನ್ನು ಅಧಃಪತನಕ್ಕೆ ಕೊಂಡೊಯ್ಯುವ ಪ್ರಯತ್ನ. ಇಂತಹ ಪ್ರಯತ್ನಗಳನ್ನು ಸಮಾಜ ಬಹಿಷ್ಕರಿಸಬೇಕು ಎಂದು ಎಸ್ಕೆಎಸ್ಎಸ್ಎಫ್ ದ.ಕ. ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಹೇಳಿದ್ದಾರೆ.
ಇಂತಹ ಕೃತ್ಯಗಳು ನಾಡಿನ ಸೌಹಾರ್ದತೆಯನ್ನು ಹಾಳುಗೆಡವುದು ಮಾತ್ರವಲ್ಲದೇ, ಇಸ್ಲಾಮಿನ ಸಂಪ್ರದಾಯಕ್ಕೆ ಕಳಂಕ ತರುವಂತಿದೆ. ಸಮುದಾಯದ ಎಲ್ಲಾ ಪಂಡಿತರು ಇದರ ವಿರುದ್ಧ ಧ್ವನಿ ಎತ್ತುವಂತೆ ಕಾರ್ಯಕ್ರಮ ರೂಪಿಸುವುದಾಗಿ ಎಸ್ಕೆಎಸ್ಎಸ್ಎಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಳಿಸಿದರು.
ಗೆಳೆಯರನ್ನು ಆಯ್ಕೆ ಮಾಡುವಾಗ ಉತ್ತಮ ಗೆಳೆಯರನ್ನೇ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಇಂತಹ ಅವಮಾನಗಳನ್ನು ಸಹಿಸಬೇಕಾಗುತ್ತದೆ ಎಂದು ತಂಙಳ್ ಯುವ ಜನತೆಗೆ ಕಿವಿ ಮಾತು ಹೇಳಿದ್ದಾರೆ. ಗೆಳೆಯರ ಸಂತೋಷಕ್ಕಾಗಿ ಕುಟುಂಬವನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿ, ನಾಡಿನ ಶಾಂತಿಯನ್ನೂ ಕದಡುವಂತೆ ಮಾಡುವ ಇಂತಹ ಕೃತ್ಯಗಳಿಂದ ಯುವ ಜನತೆ ಸಾಧಿಸುವುದಾದರೂ ಏನನ್ನು ಎಂದು ತಂಙಳ್ ಪ್ರಶ್ನಿಸಿದರು. ಮಕ್ಕಳ ಪಾಲನೆಯಲ್ಲಿ ಹೆತ್ತವರ ಪ್ರಾಮುಖ್ಯತೆ ಅರ್ಥವಾಗುವುದೇ ಇಂತಹ ಸಂದರ್ಭಗಳಲ್ಲಿ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.