(www.vknews.com) ; ಮಕ್ಕಳಾಟಿಕೆಯ ಹುಚ್ಚಾಟಕ್ಕೆ ಬಲಿಯಾಗಿ ಮಾಡಬಾರದ ಕೆಲಸ ಮಾಡಿ ಇಸ್ಲಾಂ ಧರ್ಮವನ್ನು ಮತ್ತು ಪ್ರವಾದಿಯನ್ನು ಅವಹೇಳಿಸಿ ಕೊರಗ ವೇಷ ಕಟ್ಟಿ ವಿವಾದಕ್ಕೆ ಸಿಲುಕಿದ ನಂತರ ಕೊನೆಗೂ ತಮ್ಮ ವರ್ತನೆ ತಪ್ಪಾಗಿತ್ತೆಂದೂ ಅದು ಹಿಂದು- ಮುಸ್ಲಿಮರ ಭಾವನೆಗೆ ದಕ್ಕೆಯಾಗಿತ್ತೆಂದೂ ಮನಸಾರೆ ಒಪ್ಪಿ ಕೊಂಡು ಪಾಶ್ಚಾತಾಪ ಪಟ್ಟ ಯುವಕರಿಗೆ ಮಾನವೀಯತೆಯ ನೆಲೆಯಲ್ಲಿ ಕ್ಷಮೆ ನೀಡಿ ಪ್ರಕರಣ ಕೈ ಬಿಟ್ಟು ಮುಂದೆ ಯಾರೂ ಇಂತಹ ದುಸ್ಸಾಹಸಕ್ಕೆ ಇಳಿಯದಂತೆ ಎಲ್ಲಾ ಯುವಕರಿಗೆ ಎಚ್ಚರಿಕೆ ನೀಡಿ ಬಿಟ್ಟು ಬಿಡುವುದು ಒಳಿತು.
ಸದ್ರಿ ಯುವಕರ ಬಗ್ಗೆ ಊರಿನಲ್ಲಿ ಉತ್ತಮ ಅಭಿಪ್ರಾಯ ಇದ್ದು ಏನೋ ಅಚಾತುರ್ಯದಿಂದ ಇಂತಹ ಒಂದು ಘಟನೆ ಆಗಿ ಹೋಗಿದೆ.ಇದನ್ನು ಎಲ್ಲಾ ಜಾತಿ ಜನಾಂಗದವರು ಪಕ್ಷ ಭೇದ ಮೆರೆತು ಖಂಡಿಸುವ ಮೂಲಕ ಮುಂದೆ ಎಲ್ಲಾ ಯುವಕರಿಗೂ ಎಚ್ಚರಿಕೆಯ ಸಂದೇಶ ಕೂಡಾ ರವಾನೆಯಾಗಿದೆ.
ಆದರೆ ಇದನ್ನು ಕೆಲವೊಂದು ಸ್ವಾರ್ಥ ಶಕ್ತಿಗಳು ಕೋಮು ದ್ರುವೀಕರಣಕ್ಕೆ ಬಳಸಿ ಆ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದು ಇದಕ್ಕೆ ನಾಗರಿಕ ಸಮಾಜ ಆಸ್ಪದ ನೀಡಬಾರದು.
ಪೋಲೀಸರು ಕೂಡಾ ಈ ಪ್ರಕರಣವನ್ನು ಯಾರ ಒತ್ತಡಕ್ಕೆ ಮಣಿಯದೇ ನ್ಯಾಯಯುತವಾಗಿ ನಿಭಾಯಿಸ ಬೇಕೆಂಬುದೇ ನಾಡಿನ ಶಾಂತಿ ಪ್ರಿಯರ ಕೋರಿಕೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.