(www.vknews.com) : ಯೌವನದ ಹುರುಪಿನಲ್ಲಿ ಆಟೋಟ ಜಾಸ್ತಿಯಾದಾಗ ಹಿರಿಯರು ಇವನಿಗೊಂದು ಮದುವೆ ಮಾಡೋಣ, ಜವಾಬ್ದಾರಿ ಬರುತ್ತದೆ ಎಂಬ ಅಭಿಪ್ರಾಯವನ್ನು ಮಂಡಿಸುತ್ತಾರೆ. ಏಕೆಂದರೆ ಮದುವೆಯಾದ ಬಳಿಕ ಬರುವ ಜವಾಬ್ದಾರಿ ವ್ಯಕ್ತಿಯ ನಡವಳಿಕೆಯನ್ನೇ ಬದಲಿಸಿಬಿಡುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳಲು, ಸಮೃದ್ಧಿ ಮತ್ತು ಜೀವನದಲ್ಲಿ ಸುಖ ಹೆಚ್ಚಲು ನೆರವಾಗುತ್ತದೆ. ಬೇಡದ ಕೆಲಸಗಳಿಗೆ ಕೈ ಹಾಕುವುದು ನಿಲ್ಲುತ್ತದೆ. ವರ್ಷಗಳು ಕಳೆಯುತ್ತಿದ್ದಂತೆಯೇ ದಂಪತಿಗಳ ನಡುವಣ ಬಾಂಧವ್ಯ ಇನ್ನಷ್ಟು ಬೆಸೆಯುತ್ತಾ ಒಬ್ಬರನ್ನೊಬ್ಬರು ಬಿಟ್ಟಿರಲಾದ ಹಂತಕ್ಕೆ ಬಂದು ತಲುಪುತ್ತದೆ.ಮದುವೆಯ ಅರ್ಥವೇ ಎಂದೂ ಮುರಿಯಲಾಗದ ಬಂಧವೆಂದು. ಎಂದಿಗೂ ಹೊರಬಾರಲು ಇಷ್ಟವಾಗದ ಆನಂದದ ಕಡಲಾಗಿರಬೇಕು. ಇಬ್ಬರು ವ್ಯಕ್ತಿಗಳು ಒಂದೇ ಜೀವನಕ್ಕೆ ಕಾಲಿಡುವಾಗ, ಸುಖ-ದುಃಖಗಳನ್ನು ಹಂಚಿಕೊಳ್ಳುವ ನಿರ್ಧಾರ ಮಾಡಿದಾಗ, ನಿನ್ನ-ನನ್ನ ಜೀವನ ಇನ್ನು ಬೇರೆ ಬೇರೆ ಅಲ್ಲ ಎಂದು ನಿರ್ಧರಿಸಿ ಒಂದಾಗುವುದು, ಕೇವಲ ಒಂದು ಖುಷಿಯ ಸಮಾರಂಭ ಅಷ್ಟೆ ಅಲ್ಲ. ಇಬ್ಬರು ವ್ಯಕ್ತಿಗಳು ಸ್ವ ಇಚ್ಛೆಯಿಂದ ಮಹತ್ತಿನ ಕಡೆಗೆ ನಡೆಸುವ ಪಯಣ ಅದು.ಸಾವಿರಾರು ಕನಸುಗಳನ್ನು ಕಟ್ಟಿ, ಆಮಂತ್ರಣ ಪತ್ರಿಕೆ ಮುದ್ರಣಗೊಂಡ ನಂತರ ಮದುವೆಯ ದಿನವನ್ನು ಕಾಯುತ್ತ ನನ್ನ ಪತ್ನಿ ಜೊತೆ ಅಥವಾ ನನ್ನ ಪತಿ ಜೊತೆ ಹೇಗೆಲ್ಲ ಜೀವನ ನಡೆಸಬೇಕೆಂಬುದು ಕನಸು ಕಾಣುತ್ತಿರುತ್ತಾರೆ. ನನ್ನ ಒಂಟಿ ಜೀವನದ ನೋವುಗಳೆಲ್ಲ ಮದುವೆಯ ನಂತರ ಮರೆಮಾಚಬಹುದು ಎಂಬ ನಂಬಿಕೆಯೂ ಕೂಡ ಇರುತ್ತವೆ. ಕೊನೆಗೂ ಆ ದಿನ ಬಂದೆ ಬಿಡುತ್ತವೆ. ನಾಳೆ ನನ್ನ ಮದುವೆಯ ಖುಷಿ ಒಂದು ಕಡೆಯಾದರೆ ನನ್ನೊಟ್ಟಿಗೆ ಬೆಳೆದ ಕುಟುಂಬವನ್ನು ಬಿಟ್ಟು ಹೋಗುವ ನೋವು ಇನ್ನೊಂದು ಕಡೆಯಾಗಿರುತ್ತವೆ. ಸುಖ-ದುಃಖವನ್ನು ಒಟ್ಟಿಗೆ ಹಿಡಿದು ಹೊಸ ಜೀವನಕ್ಕೆ ಕಾಲಿಟ್ಟು ದಂಪತಿಗಳು ಖುಷಿಯ ಸಾಗರದಲ್ಲಿ ತೇಲಾಡುತ್ತಿರುತ್ತಾರೆ.
ವೈವಾಹಿಕ ಜೀವನ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯಂತ ಅಮೂಲ್ಯವಾದದ್ದು. ನಾವು ಸುಮಾರು ಹಿಂದಿನ ಕಾಲದ ಮದುವೆ ಮತ್ತು ಇತ್ತೀಚಿನ ಮದುವೆಗಳನ್ನು ನೋಡುವಾಗ ಎಷ್ಟೊಂದು ಬದಲಾವಣೆಗಳನ್ನು ಕಾಣಬಹುದು. ಜೀವನದಲ್ಲಿ ದುಃಖ ಪಡುವ ದಿನ ಮರಣ ದಿನವಾದರೆ, ಖುಷಿಪಡುವ ದಿನ ಮದುವೆಯ ದಿನವಾಗಿರುತ್ತವೆ. ಮದುವೆ ಎಂಬುದು ಸಡಗರ ಸಂಭ್ರಮಪಡುವ ದಿನ. ಕುಟುಂಬ ಸ್ನೇಹಿತರೆಲ್ಲ ಒಟ್ಟಿಗೆ ಸೇರುವ ಮಹತ್ತರವಾದ ದಿನ. ಮದುಮಗಳಿಗೆ ಅಥವಾ ಮದುಮಗನಿಗೆ ಸ್ನೇಹಿತರು ಉಪದ್ರವ ಕೊಡುವುದು, ತಮಾಷೆಯಾಗಿ ಮಾಡುವುದು ಸಹಜ. ಆದರೆ ಸ್ನೇಹಿತರ ತಮಾಷೆಗಳು ಮುಂದುವರಿದು ದಂಪತಿಗಳ ನಡುವೆ ವಿಚ್ಛೇಧನೆ ಪಡೆಯುವ ತನಕ ತಲುಪುತ್ತಿರುವುದು ತುಂಬಾ ಖೇಧಕರ. ಅದೆಷ್ಟೋ ತಮಾಷೆಗಳು ಅತಿಯಾಗಿ ಅದೆಷ್ಟೋ ದಂಪತಿಗಳು ವಿಚ್ಛೇಧನೆಪಡೆದಿರುವ ಅನೇಕ ಘಟನೆಗಳನ್ನು ನಾವು ಕಂಡಿರಬಹುದು. ಪ್ರತಿಯೊಂದು ವಿಷಯದಲ್ಲೂ ಕೂಡ ಅಷ್ಟೇ ಅತಿಯಾದರೆ ಅಮೃತವೂ ವಿಷವಾಗಿಬಿಡುತ್ತವೆ. ಇತ್ತಿಚೇಗೆ ಒಂದು ಘಟನೆಯನ್ನು ಕಂಡು ಪ್ರತಿಯೊಬ್ಬರು ಕೂಡ ಖಂಡಿಸುತ್ತಿದ್ದಾರೆ ನಾನು ಕೂಡ. ಏಕೆಂದರೆ ದಾಂಪತ್ಯ ಜೀವನಕ್ಕೆ ಸಾಕಷ್ಟು ಗೌರವವಿದೆ. ಎರಡು ಜೀವಗಳು ಸಾಕಷ್ಟು ಕನಸುಗಳನ್ನು ಕಂಡು ಒಂದಾಗಿರಬೇಕಾದವರನ್ನು ಇಂತಹ ಕೆಟ್ಟ ನಡುವಳಿಕೆಯಿಂದ ಮದುವೆಯ ಅರ್ಥವನ್ನೆ ಕಸದತೊಟ್ಟಿಗೆ ಎಸೆದಂತಾಗಿದೆ. ಒಂದು ದಿನದ ಆಮಂತ್ರಣಕ್ಕೆ ಕುಟುಂಬ, ಸ್ನೇಹಿತರೆಲ್ಲ ಸೇರಬಹುದು ಆದರೆ ಜೀವನ ಪೂರ್ತಿ ಕಷ್ಟ-ಸುಖದಲ್ಲಿ ಬಾಳಿ ಬದುಕುವುದು ಗಂಡ-ಹೆಂಡತಿ ಮಾತ್ರ. ಒಂದು ದಿನದ ತಮಾಷೆಗೆ ಜೀವನ ಪೂರ್ತಿ ಕಣ್ಣೀರಿಗೆ ಎಳೆದು ಹಾಕಿದ ಸ್ನೇಹಿತರಿಗೆ ಉತ್ತರಿಸಲಿ ಸಾಧ್ಯವೇ..?
ಕೇವಲ ತಮಾಷೆಯ ವಿಷಯವಲ್ಲ ಒಂದು ಹೆಣ್ಣಿನ ಜೀವನದ ವಿಷಯ ಎಂಬುವುದು ಮರೆಯಬಾರದು. ನಮಗೆ ಯಾವುದು ಸೂಕ್ತವಲ್ಲವೋ ಅದರ ಕಡೆ ಹೋಗುವುದು ಮೊದಲು ನಿಲ್ಲಿಸಬೇಕು. ತಪ್ಪು ನಡೆಯುವುದು ಸಹಜ ಅದನ್ನೆ ಮುಂದುವರಿಸುತ್ತಾ ಹೋದರೆ ಜೀವನಕ್ಕೆ ಅರ್ಥವಿರಲ್ಲ. ಯಾರನ್ನು ಎಷ್ಟು ಎಲ್ಲಿಡಬೇಕು ಅಲ್ಲಿಯೇ ಇರಬೇಕು. ನಾನು ಮದುವೆಯಾಗಿರುವುದು ನನ್ನವಳನ್ನು ಜೀವನ ಪೂರ್ತಿ ಖುಷಿಪಡಿಸಲು ಕಷ್ಟ ಸುಖಕ್ಕೆ ಭಾಗಿಯಾಗಲು ಎಂಬ ದೃಢ ಕಲ್ಪನೆ ಇರಬೇಕು. ಹೆಂಡತಿ ಎಂಬವಳು ಪ್ರದರ್ಶನದ ವಸ್ತುವಲ್ಲ ಆಕೆ ಕೇವಲ ನಿನ್ನವಳು ಮಾತ್ರ ನಿನ್ನನ್ನು ನಂಬಿ ಎಲ್ಲರನ್ನು ಬಿಟ್ಟು ಬಂದವಳು.
ಅಂತಹ ನಂಬಿಕೆಗೆ ದ್ರೋಹ ಮಾಡಲು ಹೇಗೆ ಸಾಧ್ಯ.? ಇನ್ನಾದರೂ ಎಚ್ಚರವಹಿಸಿ. ನಮ್ಮ ತಮಾಷೆಗೆ ಇನ್ಯಾವುದೊ ಕುಟುಂಬವನ್ನು ಬಲಿಪಡಿಸದಿರಿ.. ಹಾಗೇಯೇ ಎಲ್ಲರೂ ಮದುವೆ ಆಗುತ್ತಾರೆ ನಮ್ಮ ಮಕ್ಕಳಿಗೆ ಒಂದು ಮಾಡುವ ಅಂತ ಸಿಕ್ಕ ಸಿಕ್ಕವರನ್ನೆಲ್ಲ ಮಾಡಿ ಮಕ್ಕಳ ಭವಿಷ್ಯವನ್ನು ಕತ್ತಲಾಗಿಸಬೇಡಿ. ಎಲ್ಲರೂ ಒಳ್ಳೆಯವರಲ್ಲ ಹಾಗೇಯೆ ಕೆಟ್ಟವರು ಕೂಡ ಅಲ್ಲ. ನಮ್ಮನ್ನು ನಾವು ನಿಯಂತ್ರಿಸಿದರೆ ಎಲ್ಲವೂ ನಮ್ಮಿಂದ ಸಾಧ್ಯವಾಗಬಹುದು. ಮೊನ್ನೆ ನಡೆದ ಘಟನೆಗೆ ಹೆಣ್ಣಿನ ಮನೆಯವರಾಗಲಿ ಗಂಡಿನ ಮನೆಯರಾಗಲಿ ಕಾರಣರಲ್ಲ. ಸ್ನೇಹಿತರೆಲ್ಲ ಸೇರಿ ಮಾಡಿ ಕುತಂತ್ರವಷ್ಟೆ. ಇವರ ತಪ್ಪಿಗೆ ಕಣ್ಣೀರಿಗೆ ಜಾರಿರುವುದು ಎರಡು ಕುಟುಂಬಗಳು. ಈ ಘಟನೆಯೂ ಪ್ರತಿಯೊಬ್ಬರಿಗೆ ಪಾಠವಾಗಲಿ.. ಇನ್ನೊಬ್ಬರ ಜೀವನದಲ್ಲಿ ಆಟವಾಡುವಾಗ ಇನ್ನಾದರೂ ಸ್ವಲ್ಪ ಯೋಚಿಸಿ..
-ಡಿ.ಎಸ್.ಐ.ಬಿ ಪಾಣೆಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.