(www.vknews.in) : ಉಪ್ಪಿನಂಗಡಿ:: ಉಪ್ಪಿನಂಗಡಿ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿಯಲ್ಲಿ ಎಲ್ ಕೆ ಜಿ ಮತ್ತು ಯು ಕೆ ಜಿ ತರಗತಿಗಳ 7ನೇ ವರ್ಷದ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ಯಿಂದಲೇ ಮಕ್ಕಳು ಹಾಗೂ ಮಕ್ಕಳ ಪೋಷಕರು ಶಾಲೆಗೆ ಬಂದು ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದರು. 10.30 ಗಂಟೆಗೆ ವಾದ್ಯ ಘೋಷದೊಂದಿಗೆ ಮಕ್ಕಳನ್ನು ಮೆರವಣಿಗೆ ಮೂಲಕ, ಅಲಂಕೃತವಾದ ಕೊಠಡಿಗೆ ಕರೆದು ಕೊಂಡು ಹೋಗಿ ಸ್ವಾಗತವನ್ನು ಮಾಡಲಾಯಿತು.
ಮಕ್ಕಳಿಗಾಗಿ ತಯಾರು ಮಾಡಿದ ಕೊಠಡಿಯ ಉದ್ಘಾಟನೆಯನ್ನು ನಮ್ಮೂರು ನೆಕ್ಕಿಲಾಡಿಯ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿಯವರು ನಡೆಸಿ ಕೊಟ್ಟರು ,
ಮುಖ್ಯ ಅತಿಥಿಗಳಾಗೀ ಸ್ಥಳೀಯ ಉಪ್ಪಿನಂಗಡಿ ಪಂಚಾಯತ್ ಅಧ್ಯಕ್ಷರಾದ ಉಷಾ ಮುಳಿಯ, ಪಂಚಾಯತ್ ಸದಸ್ಯರಾದ ತೌಸೀಫ್ ಯು ಟಿ, ವಿಧ್ಯಾ ಲಕ್ಷ್ಮಿ ಪ್ರಭು, ಎಸ್ಡಿಎಂಸಿ ಸಮನ್ವಯ ವೇದಿಕೆಯ ಅದ್ಯಕ್ಷರು ಹಾಗೂ ಮಾದರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಕ್ಕೆ ಶ್ರಮಿಸಿದ ನಿಕಟ ಪೂರ್ವ ಎಸ್ಡಿಎಂಸಿ ಅಧ್ಯಕ್ಷರಾದ ಮೊಯ್ದಿನ್ ಕುಟ್ಟಿ, ಮಾಲಿಕ್ ದಿನಾರ್ ಮಸ್ಜಿದ್ ಅಧ್ಯಕ್ಷ ರಾದ ಮುಸ್ತಾಫಾ ಕೆಂಪಿ, ಹಿರಿಯ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಚಂದ್ರ ಶೇಖರ್ ಐ, ನಿಖಟ ಪೂರ್ವ ಮುಖ್ಯೋಪಾಧ್ಯಾಯರಾಗಿದ್ದ ದೇವಕಿ.ಎಂ., ಹಾಗೂ ಪ್ರಭಾರ ಮುಖ್ಯ ಗುರುಗಳಾಗಿದ್ದ ದೇಜಮ್ಮ ರವರು ಭಾಗವಹಿಸಿದ್ದರು . ಸ್ಥಳೀಯ ಗೃಹ ರಕ್ಷಕ ಸಿಬ್ಬಂದಿಗಳು ಕೂಡ ಉಪಸ್ಥಿತರಿದ್ದರು. ಶಾಲೆಯ ಬಗ್ಗೆ ಪ್ರಾಸ್ತಾವಿಕ ವಾಗಿ ಮುಖ್ಯೋಪಾಧ್ಯಾಯ ರಾದ ಹನುಮಂತಯ್ಯ ರವರು ಮಾತನಾಡಿದರು.
ಉಪ್ಪಿನಂಗಡಿಯಲ್ಲಿ ಎರಡು ನದಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ನಿರುಣಿಸುತ್ರ ಇದ್ದರೆ, ಶೈಕ್ಷಣಿಕ ವಾಗಿ 2 ಶತಮಾನಗಳಿಂದ ಈ ಶಾಲೆಯು ಸಮುದಾಯಕ್ಕೆ ಶಿಕ್ಷಣ ವೆಂಬ ಅಗತ್ಯತೆಯ ನೀರನ್ನು ಉಣಿಸುತ್ತಿದೆ ಎಂದು ಮುಸ್ತಾಫಾ ಕೆಂಪಿ ಯವರು ತಮ್ಮ ಶುಭ ಹಾರೈಕೆ ಸಂದರ್ಭದಲ್ಲಿ ನೆನಪಿಸಿದರು,
ಖಾಸಗಿ ಶಾಲೆಗಳಿಗೆ 50,000 ಶುಲ್ಕ ಕೊಟ್ಟರೂ ಕಲಿಸುವುದು ಇಂಗ್ಲಿಷ್ ನ 26 ಅಕ್ಷರಗಳನ್ನು ಮಾತ್ರ,ಎಂದು , ನಿಕಟ ಪೂರ್ವ ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷರು ತಮ್ಮ ಶುಭ ಸಂದೇಶದೊಂದಿಗೆ ಕಿವಿ ಮಾತನ್ನು ಹೇಳಿದರು.
ಎಸ್ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷರಾದ ಮೊಯ್ದಿನ್ ಕುಟ್ಟಿಯವರೂ ಈ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭದ ಸಮಯ ಧಲ್ಲಿ ಸಹಕಾರವನ್ನು ನೀಡಿದ 16 ಮಕ್ಕಳ ಪೋಷಕರಿಗೆ, ಆ ಸಮಯದಲ್ಲಿ ಪಾಠ ಮಾಡಲು ಶಾಲೆಯೊಂದಿಗೆ ಕೈ ಜೋಡಿಸಿದ ಅಂಕಿತಾ ರವರ ಸೇವೆಯನ್ನು ಸ್ಮರಿಸಿದರು,
ಅದೇ ರೀತಿ ಈ ಆರು ವರ್ಷದ ಯಾನದಲ್ಲಿ ಶಾಲೆ ಯೊಂದಿಗೆ ಪೂರ್ಣ ಸಹಕಾರವನ್ನು ಹಾಗೂ ಸರಕಾರಿ ಶಾಲೆ ಎನ್ನುವ ಕೀಳರಿಮೆ ಇಲ್ಲದೆ ಇಲ್ಲಿಗೆ ದಾಖಲಾತಿಯನ್ನು ಮಾಡಿದ ಪೋಷಕರಿಗೆ,ಹಾಗೂ ಪೂರ್ಣ ಸಹಕಾರವನ್ನು ನೀಡಿದ ಎಸ್ಡಿಎಂಸಿ ಯವರಿಗೆ, ಅದೇ ರೀತಿ ಶಾಲಾ ಶಿಕ್ಷಕ ವೃಂದಕ್ಕೆ, ಎಲ್ ಕೆ ಜಿ- ಯು ಕೆ ಜಿ ಪ್ರಾರಂಭದ ಸಮಯದಲ್ಲಿ ಹೆಚ್ಚಿನ ಸಹಕಾರವನ್ನು ನೀಡಿದ ಶಿಕ್ಷಣಾಧಿಕಾರಿ ಆಗಿದ್ದ ಶ್ರೀಮತಿ ಸುಕನ್ಯಾ ಮೇಡಂ ರವರಿಗೆ ಹಾಗೂ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳ ಸಹಕಾರವನ್ನು ನೆನಪಿಸುತ್ತಾ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅದೇ ರೀತಿ ಪೂರ್ವ ಪ್ರಾಥಮಿಕ ತರಗತಿಗಳ ಯಶಸ್ಸಿಗೆ ಕಾರಣರಾದ ಆ ತರಗತಿಗಳ ಶಿಕ್ಷಕರು ಮತ್ತು ಆಯಾ ರವರಿಗೂ ಧನ್ಯವಾದವನ್ನು ತಿಳಿಸಿದರು.
ಸರಕಾರಿ ಶಾಲೆಗಳು ಮಕ್ಕಳ ಸಂಖ್ಯೆ ಇಲ್ಲದೆ ಮುಚ್ಚುವ ಸಂದರ್ಭದಲ್ಲಿ ಶಾಲೆಗಳನ್ನು ಉಳಿಸಲು ಎಸ್ಡಿಎಂಸಿ ಮತ್ತು ಅಲ್ಲಿಯ ಶಿಕ್ಷಕರು ಮನಸ್ಸು ಮಾಡಿದರೆ ಸಾದ್ಯವಿದೆ ಎನ್ನುವುದಕ್ಕೆ ಉದಾಹರಣೆ ಯಾಗಿ ಮಾದರಿ ಶಾಲೆಯ ಬೆಳವಣಿಗೆಯ ಅಂಕಿ ಅಂಶಗಳನ್ನು ಪೋಷಕರಿಗೆ ತಿಳಿ ಹೇಳಿದರು,
2016-17 ರಲ್ಲಿ 270 ಮಕ್ಕಳ ದಾಖಲಾತಿ ಇರುವಲ್ಲಿ 2022-23 ಶೈಕ್ಷಣಿಕ ವರ್ಷದಲ್ಲಿ ಎಲ್ ಕೆ ಜಿ – ಯು ಕೆ ಜಿ ತರಗತಿಯ ಮಕ್ಕಳನ್ನು ಸೇರಿಸಿ 700 ಕ್ಕಿಂತಲೂ ಹೆಚ್ಚಾಗಿರುವುದು, ಒಳ್ಳೆಯ ಶಿಕ್ಷಣ ,ಬದ್ಧತೆ ಇರುವ ಎಸ್ಡಿಎಂಸಿ ಮತ್ತು ಶಿಕ್ಷಕರಿಂದ ಮಾತ್ರ ಸಾದ್ಯ ಎಂದು ಹೇಳಿದರು. ಸಭಾ ಕಾರ್ಯಕ್ರಮ ದಲ್ಲೀ ಎಲ್ ಕೆ ಜಿ , ಯು ಕೆ ಜಿ ದಾಖಲಾದ ಎಲ್ಲಾ ಮಕ್ಕಳಿಗೂ ಪುಸ್ತಕ ಪೆನ್ಸಿಲ್ ಮತ್ತು ಪೆನ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಶಿಕ್ಷಕಿಯಾದ ದೇವಕಿ ನಿರೂಪಿಸಿದರು, ಸ್ವಾಗತ, ಪ್ರಾರ್ಥನೆ ಹಾಗೂ ಧನ್ಯವಾದವನ್ನು. ಪೂರ್ವ ಪ್ರಾಥಮಿಕ ಶಿಕ್ಷಕಿಯರಾದ ಸುಮಲತಾ ಹಾಗೂ ರಶ್ಮಿಯವರು ನೆರವೇರಿಸಿದರು. ಕಾರ್ಯ ಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರಾದ ಫಾರೂಕ್, ಫಯಾಜ್, ಮಜೀದ್,ಶೀಲಾ, ಖೈರುನ್ನಿಸ, ರಹಿಮತ್, ಖಲಂದರ್ ಶಾಫಿ ಯವರು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.