ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನನ್ನನ್ನು ತನ್ನಷ್ಟಕ್ಕೆ ನಡೆಯಲು ಬಿಡಿ, ಜನರು ಸೇರಿ ಯಾರಿಗೂ ತೊಂದರೆ ಕೊಡುವುದಕ್ಕೆ ನನ್ನ ಸಮ್ಮತಿ ಇಲ್ಲ, ಯಾರೂ ನನ್ನ ಜೊತೆ ನಡೆಯೋ ಮೂಲಕ ನನಗೆ ಸಹಾಯ ಮಾಡಬೇಡಿ. ನನಗೆ ಸಹಾಯಕ್ಕೆ ಸರ್ವಶಕ್ತನಾದ ಅಲ್ಲಾಹನಿದ್ದಾನೆ ಎಂದು ಕೇರಳದಿಂದ ಕಾಲ್ನಡಿಗೆ ಮೂಲಕ ಹಜ್ ಯಾತ್ರೆ ಕೈಗೊಂಡಿರುವ ಶಿಹಾಬ್ ಸೇರಿದ ಜನತೆಗೆ ಕಿವಿಮಾತು ಹೇಳಿದರು.
ರಸ್ತೆ ಉದ್ದಕ್ಕೂ ಜನರು ಸೇರಿ ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡುವುದು ಅವರಿಗೆ ಇಷ್ಟ ಇರಲಿಲ್ಲ, ಅದಕ್ಕಾಗಿ ಜನರು ನನ್ನಿಂದ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಲ್ಲಿ ಅವರು ಈ ರೀತಿಯಾಗಿ ಸೇರಿದ್ದ ಜನರಿಗೆ ಹೇಳಿದರು. ಕೇರಳದಿಂದ ಕರ್ನಾಟಕ ಪ್ರವೇಶಿಸುವಾಗ ಅವರನ್ನು ಗೌರವದಿಂದ ಕರ್ನಾಟಕಕ್ಕೆ ಬರಮಾಡಿಕೊಳ್ಳಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.