ಯಾತ್ರಿಕನಿಗೆ ಬೇಕಾಗಿರುವುದು ದಾರಿ, ಸನ್ಮಾನವಲ್ಲ ; ಮೊದಲು ದಾರಿ ಬಿಟ್ಟು ಪ್ರೀತಿಯಿಂದ ಕಳುಹಿಸಿಕೊಡಿ..
(www.vknews.in) : ಕಾಲ್ನಡಿಗೆಯಲ್ಲಿ ಪವಿತ್ರವಾದ ಹಜ್ಜ್ ಯಾತ್ರೆ ಗೈಯ್ಯುತ್ತಿರುವ ಸಹೋದರ ಶಿಹಾಬ್ ಚೊಟ್ಟೂರು ಒಂದೊಂದೇ ಊರಿಗೆ ತಲುಪುತ್ತಿದ್ದಾರೆ. ಪ್ರತಿಯೊಬ್ಬರಿಗೂ ಸಂತೋಷದ ವಿಷಯ. ಅವರನ್ನು ಕಂಡಾಗ ಆ ಪ್ರದೇಶದ ಜನತೆ ಪ್ರೀತಿಯಿಂದ ಸ್ವಾಗತಿಸುವುದು, ಗೌರವಿಸುವುದು ಕಾಣುತ್ತಿದ್ದೇವೆ. ಆದರೆ ನಾವು ತುಂಬಾ ಗಮನಿಸಬೇಕು. ಏಕೆಂದರೆ ಒಂದು ಕಿಲೋಮೀಟರ್ ನಡೆಯಬೇಕಾದರೆ ನಾವು ಪದೇ ಪದೆ ಸುಸ್ತಾಗುತ್ತೆವೆ. ಅಂತಹದರಲ್ಲಿ ಒಬ್ಬ ಪ್ರತಿದಿನ ನಡೆಯುತ್ತಾ ಕನಸನ್ನು ಪೂರೈಸುತ್ತಿರುವ ಸಹೋದರನಿಗೆ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವುದು ಕೂಡ ನಮ್ಮ ಕರ್ತವ್ಯ.
ಯಾರೇ ಇರಲಿ ಒಬ್ಬ ಸಾಧನೆ ಮಾಡಲು ಹೊರಟಿದ್ದರೆ ನಾವು ಅವರನ್ನು ಗೌರವಿಸದೆ ಕಳುಹಿಸುವುದಿಲ್ಲ. ಇದು ಭಾರತೀಯರ ಸ್ವಭಾವು ಕೂಡ. ಒಂದು ಕಡೆ ಪ್ರಯಾಸದಲ್ಲಿದ್ದರೆ ಇನ್ನೊಂದು ಕಡೆ ಸಾರ್ವಜನಿಕರಿಂದ ತೊಂದರೆಯೂ ಕೂಡ. ನಾವು ಗೌರವಿಸುವ ಸಲುವಾಗಿ ಅಲ್ಲಲ್ಲಿ ನಿಂತು ಹ್ಯಾಂಡ್ ಶೇಕ್ ಮಾಡುವುದು, ಸೆಲ್ಫಿ, ವೀಡೀಯೋಗಳನ್ನು ಮಾಡುತ್ತ ಬಹಳಷ್ಟು ತೊಂದರೆಗಳು ನಾವು ನೀಡುತ್ತಿದ್ದೇವೆ ಎಂದು ಮೊದಲು ತಿಳಿಯಬೇಕು. ಅಲ್ಲಲ್ಲಿ ಜನರ ನೂಕುನುಗ್ಗಲು ಇದರಿಂದ ಸಮಸ್ಯೆಗಳು ಎದುರಾಗಬಹುದು. ಸೋಶಿಯಲ್ ಮಿಡಿಯ ಜನರ ಕೈಗೆ ಬಂದ ಬಳಿಕ ನಾವೇ ಮೊದಲು ಅಂತ ವೀಡಿಯೋ ಫೋಟೋ ತೆಗೆಯುವುದರಲ್ಲಿ ಬಿಝಿಯಾಗಿದ್ದಾರೆ.
ಸಾರ್ವಜನಿಕವಾಗಿ ಒಟ್ಟಿಗೆ ಮೆರವಣಿಗೆ ಹೋಗುವುದು, ಬೊಬ್ಬೆ ಹಾಕಿಕೊಳ್ಳುತ್ತ ಕಿರಿಕಿರಿಗಳನ್ನು ಸಹೋದರ ಅನುಭವಿಸಬೇಕಾಗಿದೆ. ಲೈವಾಗಿ ತೋರಿಸುವುದು ಅವರೊಂದಿಗೆ ಅನಗತ್ಯವಾಗಿ ಮಾತನಾಡುವುದರಿಂದಲು ತೊಂದರೆಗಳು ಉಂಟಾಗಬಹುದು. ಆ ಸಹೋದರನಿಗು ಇದು ಇಷ್ಟವಿಲ್ಲದಿದ್ದರು ಜನರ ಆನಂದಕ್ಕೆ ತಲೆ ಬಾಗುತ್ತಿದ್ದಾರೆ ಅಷ್ಟೆ. ನಡೆಯಬೇಕಾಗಿದ್ದು ಸಾವಿರ ಕಿಲೋ ಮೀಟರ್ ಅಲ್ಲ ಇನ್ನಷ್ಟು ಇವೆ ಎಂಬುದು ತಿಳಿಯಬೇಕಾಗಿದೆ. ಭಾರವಾದ ಲಗೇಜ್ ಎತ್ತಿಕೊಂಡು ಹೋಗಬೇಕಾದರೆ ಜನರು ಅಲ್ಲಲ್ಲಿ ನಿಂತು ಮೇಲೆ ಬೀಳುವುದರಿಂದ ಸಾಕಷ್ಟು ಪ್ರಯಾಸವಾಗಬಹುದು.
ನಾವುಗಳು ಎಲ್ಲವನ್ನೂ ಅರ್ಥೈಸಬೇಕು ಅಷ್ಟೆ. ಒಂದು ವರ್ಷದ ಯಾತ್ರೆ ಎಂಬುದು ಸಣ್ಣಪುಟ್ಟ ವಿಷಯವಲ್ಲ ಯಾರು ಕೂಡ ಗುಂಪಾಗಿ ಅನಾವಶ್ಯಕವಾಗಿ ತೊಂದರೆ ನೀಡದಿರಿ. ನಾವುಗಳು ನಮ್ಮ ಖುಷಿಗೆ ಅವರೊಂದಿಗೆ ಒಂದು ದಿನ ಇರಬಹುದು ಅಷ್ಟೆ, ಮುಂದಿನ ಎಲ್ಲಾ ಕಷ್ಟ ನಷ್ಟ ಅನುಭವಿಸುವುದು ಶಿಹಾಬ್ ಎಂಬುದು ಮರೆಯದಿರಿ. ಇನ್ನಾದರೂ ತೊಂದರೆ ನೀಡದೆ ಪ್ರೀತಿಯಿಂದ ಕಳುಹಿಸಿಕೊಡಿ. ಯಾರು ಇದ್ದರು ಇಲ್ಲದಿದ್ದರು ದೇವರ ಅನುಗ್ರಹದಿಂದ ಆ ಸಹೋದರನ ಕನಸು ನನಸಾಗಲಿವೆ. ನಾವುಗಳು ಕೇವಲ ಪ್ರಾರ್ಥಿಸಬೇಕು ಅಷ್ಟೆ.
ಒಂಟಿಯಾಗಿ ಹೊರಟರೆ ಆದಷ್ಟು ಬೇಗ ತಲುಪಬಹುದು ಸಾರ್ವಜನಿಕರು ಗುಂಪಾಗಿ ನಿಂತರೆ ಸಾಕಷ್ಟು ತೊಂದರೆ, ಇಂಫೆಕ್ಷನ್ ಕೂಡ ಆಗಬಹುದು. ವಿಶಾಂತ್ರಿ ಮಾಡಲು ಕೂಡ ತುಂಬಾ ತೊಂದರೆಯಾಗಬಹುದು. ತಲುಪಬೇಕಾದ ಸಮಯ ಜನರಿಂದಾಗಿ ಕಡಿತಗೊಳ್ಳುತ್ತಿವೆ. ನಾವು ನಮ್ಮ ಬುದ್ದಿ ಉಪಯೋಗಿಸಿ ಸಹೋದರನನ್ನು ಪ್ರೀತಿಯಿಂದ ಕಳುಹಿಸೋಣ. ನಮ್ಮಿಂದಾಗಿ ಕಂಡ ಕನಸಿಗೆ ಮೋಸವಾಗದಿರಲಿ.. ಪ್ರತಿಯೊಂದು ಪ್ರದೇಶದಲ್ಲಿ ವಿಶ್ರಾಂತಿ ಮಾಡುವಾಗ ಅದಕ್ಕೆ ಸಂಬಂಧಪಟ್ಟವರು ಹೊರತುಪಡಿಸಿ ಇನ್ನಿತರ ಜನರು ಸೇರದೆ ಸಹಕರಿಸಿಕೊಳ್ಳಿ. ಶಿಹಾಬ್ರವರ ಯಾತ್ರೆ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದೇನೆ.
– ಡಿ.ಎಸ್.ಐ.ಬಿ ಪಾಣೆಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.