ತಲಪಾಡಿ(ವಿಶ್ವಕನ್ನಡಿಗ ನ್ಯೂಸ್): ಸ್ಟೂಡೆಂಟ್ಸ್ ಯೂನಿಯನ್ ಪರ್ಲಿಯಾ ಇದರ ಸಹಯೋಗದಿಂದ ACCESS INDIA, ಕರ್ನಾಟಕ ಚಾಪ್ಟರ್ ಇವರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ವಾಟ್ ನೆಕ್ಸ್ಟ್ ತರಬೇತಿ ಕಾರ್ಯಾಗಾರ ಇಂದು ಖಿದ್ಮಾತುಲ್ ಇಸ್ಲಾಂ ಮದರಸ ಪರ್ಲಿಯಾದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಸ್ಫಕ್ ತಲಪಾಡಿ ಮತ್ತು ಅರಫಾ ಜುಮಾ ಮಸೀದಿ ಇದರ ಕಾರ್ಯದರ್ಶಿಗಳಾದ ಅಕ್ಬರ್ ಸ್ಟಾರ್ ಆಗಮಿಸಿದ್ದರು.ಆಕ್ಸೆಸ್ ಇಂಡಿಯಾ ಕರ್ನಾಟಕ ಚಾಪ್ಟರ್ ಇದರ ತರಬೇತುದಾರರಾದ ತೌಸೀಫ್ ಮತ್ತು ಅಫ್ರಾಜ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ 75 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗಳು ಭಾಗವಹಿಸಿದ್ದರು. ನಜೀಬ್ ಪರ್ಲಿಯಾ ಸ್ವಾಗತಿಸಿ, ಹರ್ಷಾದ್ ಪರ್ಲಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.