ಮಂಗಳೂರು (www.vknews.in) : ರಾಜಸ್ತಾನದ ಉದಯಪುರದಲ್ಲಿ ಮತಾಂಧತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಬ್ಬರು ಟೈಲರ್ ಒಬ್ಬರನ್ನು ಅಮಾನುಷವಾಗಿ ಕೊಲೆಗೈದ ಘಟನೆಯನ್ನು ಜಂ ಇಯ್ಯತುಲ್ ಖುತಬಾ ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಪ್ರವಾದಿ ನಿಂದಕರನ್ನು ಸಮರ್ಥಿಸಿದ್ದಾರೆ ಎಂಬ ಕಾರಣಕ್ಕಾಗಿ ಕಾನೂನುಕೈಗೈತ್ತಿಕೊಂಡ ಈ ನಾಮಧಾರಿ ಮುಸ್ಲಿಮರು ನಡೆಸಿದ ಹತ್ಯೆಯು ಧರ್ಮಕ್ಕೆ ಮಸಿ ಬಳಿಯುವ ಕುಕೃತ್ಯವಾಗಿದ್ದು,ಇವರು ನೈಜ ಮುಸಲ್ಮಾನರಾಗಿರಲು ಸಾಧ್ಯವಿಲ್ಲ.ಅದೇ ರೀತಿ ಅಭಿವೃದ್ದಿಯ ಯಾವುದೇ ಮಾನದಂಡವಿಲ್ಲದೇ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟು ಅಧಿಕಾರಕ್ಕೆ ಬರಲು ಯಾವ ಹಂತಕ್ಕೆ ತಲುಪಲೂ ಹೇಸದ ರಾಜಕಾರಣಿಗಳು ಇರುವ ನಮ್ಮ ದೇಶದಲ್ಲಿ ಧರ್ಮದ ಹೆಸರಲ್ಲಿ ಇಂತಹ ಕೃತ್ಯಗಳು ಮರುಕಳಿಸುತ್ತಲೇ ಇವೆ. ಈ ಹಿಂದೆ ಕೂಡಾ ಶ್ರೀರಾಮನ ಹೆಸರಲ್ಲಿ,ಗೋವಿನ ಹೆಸರಲ್ಲಿ ಇಂತಹದೇ ಗುಂಪು ಹತ್ಯೆಗಳು ನಿರಂತರ ನಡೆದಿದ್ದು ಗಮನಾರ್ಹ.ಆದ್ದರಿಂದ ಇಂತಹ ರಾಕ್ಷಸೀ ಕೃತ್ಯಗಳ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು.ಹತ್ಯೆಗೈದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.ಅದೇ ರೀತಿ ಅನಗತ್ಯವಾಗಿ ಪ್ರವಾದಿಗಳನ್ನು ನಿಂದಿಸಿ ಕೋಮು ಪ್ರಚೋದನೆ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗುವವರನ್ನೂ ಜಾತಿ ಧರ್ಮದ ಹೆಸರಲ್ಲಿ ತಾರತಮ್ಯ ನೀತಿ ಅನುಸರಿಸದೇ ಶಿಕ್ಷೆ ಗೊಳಪಡಿಸಬೇಕೆಂದು ಜಂ ಇಯ್ಯತುಲ್ ಖುತಬಾ ಜಿಲ್ಲಾಧ್ಯಕ್ಷ ಎಸ್ ಬಿ ದಾರಿಮಿ ಹಾಗೂ ಕಾರ್ಯದರ್ಶಿ ರಶೀದ್ ರಹ್ಮಾನಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.