ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 10ದಿನಗಳಿಂದ ವಾರಿಸುದಾರರಿಲ್ಲದ 3 ಮಹಿಳಾ ರೋಗಿಗಳಿಗೆ ನಿರಂತರ ಚಿಕಿತ್ಸೆ ನೀಡಿ ಗುಣಮುಖರಾಗಲು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಯದುರಾಜ್, ಡಾ. ಜೈನಬಾ ಮತ್ತು ದಾದಿಯರು, ಕೆಲಸಗಾರರು ಸಹಕರಿಸಿದರು. ಈ ಮದ್ಯೆ ನಿರಂತರ ಸಹಕಾರ ನೀಡಿದ ಸರಕಾರಿ ಆಸ್ಪತೆಯ ಆರೋಗ್ಯ ರಕ್ಷಾ ಸಮೀತಿ ಸದಸ್ಯರೋರ್ವರು ಪ್ರತೀದಿನ ಅಗತ್ಯ ನೆರವು ನೀಡಿದ್ದಾರೆ.
ಪ್ರಥಮ ಬಾರಿ ಆಸ್ಪತ್ರೆ ಪ್ರವೇಶಿಸಿದ ರೋಗಿಗಳನ್ನ ಬಾವು ಬಪ್ಪಳಿಗೆ/ ಪಡೀಲ್ ತನ್ನ ಪತ್ನಿಯೊಂದಿಗೆ ರೋಗಿ ಅಡ್ಮಿಟ್ ಆದ ಮೊದಲ ದಿನ ಸ್ನಾನ ಮಾಡಿಸಿದರು. ದಿನಾಂಕ 30/07/2022(ರೋಗಿ ಬಂದು ಹತ್ತುದಿನ ಕಳೆದು) ಪುತ್ತೂರು ಸರಕಾರಿ ಆಸ್ಪತ್ರೆ ರಕ್ಷಾ ಸಮೀತಿ ಸದಸ್ಯರೊರ್ವರ ಕೇಳಿಕೆ ಮೇರೆಗೆ SKSSF ಪುತ್ತೂರು ವಿಖಾಯ ತಂಡದ ಇಬ್ರಾಹಿಂ ಕಡವ ನೇತ್ರತ್ವದಲ್ಲಿ ಹನೀಫ್ ಮುಕ್ವೆ, ರಿಯಾಝ್ ಫೈಝಿ ರವರು ಸೇರಿ ಎರಡು ಮಹಿಳೆಯರನ್ನ ಕರೆದುಕೊಂಡು ಬಂದು ಮಗದೊಮ್ಮೆ ಸ್ಥಾನ ಮಾಡಿಸಿ ಸ್ವಚ್ಚಗೊಳಿಸಿದರು.
ಈ ಮದ್ಯೆ ಈ ಮಹಿಳೆಯರು ತಂಗುತ್ತಿದ್ದ ಜಮಾಅತ್ ಅದ್ಯಕ್ಷರನ್ನು ಆಸ್ಪತ್ರೆ ರಕ್ಷಾ ಸಮೀತಿ ಸದಸ್ಯರೋರ್ವರು ಕರೆಸಿ ದಿನಾಂಕ 31 ರಂದು ಕರಾವಳಿ ಅಫ಼್ವಾನ್ ತಂಗಳ್ ರನ್ನು ಕರೆಸಿ ಅವರ ನೇತ್ರತ್ವದ AIKMCC ಇದರ ಸಹಯೋಗದಲ್ಲಿ SKSSF ಅಂಬುಲೆನ್ಸ್ ನಲ್ಲಿ ಕಣ್ನೂರಿನ ಆಶ್ರಮಕ್ಕೆ ಕಳಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಅಂಬುಲೆನ್ಸ್ ನೊಂದಿಗೆ ಅಶ್ರಫ಼್ ಮುಕ್ವೆ, ಹನೀಫ಼್ ಮುಕ್ವೆ, ಹನೀಫ಼್ ನಂದಿನಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.