ಮಂಗಳೂರು (www.vknews.in) : ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಧಾರ್ಮಿಕ ಆಚರಣೆಯಾದ ವಿಜಯ ದಶಮಿಯ ಸಂಧರ್ಭದಲ್ಲಿ ನಡೆಯುವ ಆಯುಧ ಪೂಜೆಯ ಸಂಧರ್ಭ ಸಂಘಪರಿವಾರ ಅಕ್ರಮ ಶಸ್ತ್ರಾಸ್ತ್ರಗಳನ್ನು ಹಾಗೂ ಬಂದೂಕುಗಳನ್ನು ಪೂಜೆಯ ನೆಪದಲ್ಲಿ ಅದೂ ಹಲವಾರು ಅಪ್ರಾಪ್ತ ಬಾಲಕರ ಕೈಯಲ್ಲಿ ಪ್ರದರ್ಶಿಸುವ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದರು ಪೋಲಿಸ್ ಇಲಾಖೆ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ SDPI ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ ಅವರು ವಿಜಯದಶಮಿ ಎಂಬುದು ಹಿಂದು ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ಸಂಘಪರಿವಾರ ಹೈಜಾಕ್ ಮಾಡಿಕೊಂಡು ತಮಗೆ ಬೇಕಾದಂತೆ ನಡೆದುಕೊಂಡು ಕೋಮು ದ್ವೇಷವನ್ನು ಹಾಗೂ ಭಯವನ್ನು ಹುಟ್ಟಿಸುವ ರೀತಿಯಲ್ಲಿ ಖಡ್ಗ ಹಾಗೂ ಬಂದೂಕ್ ಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಿದ್ದರೂ ಪೋಲಿಸ್ ಇಲಾಖೆ ಯಾಕೆ ಕುರುಡರಂತೆ ವರ್ತಿಸುತ್ತಿದೆ.ಇದಕ್ಕೆಲ್ಲಾ ಕಾನೂನಿನಲ್ಲಿ ಮಾನ್ಯತೆ ಇದೆಯಾ?
ಮುಸ್ಲಿಮ್ ರ ಮನೆಯಲ್ಲಿ ತರಕಾರಿ ಕತ್ತರಿಸುವ ಚಾಕು ಸಿಕ್ಕಿದರು ರೈಡ್ ಹೆಸರಲ್ಲಿ ರಾತ್ರೋರಾತ್ರಿ ದಾಳಿ ನಡೆಸಿ ಕಿರುಕುಳ ನೀಡಿ ಕಠಿಣ ಸೆಕ್ಷನ್ ಗಳನ್ನು ಹಾಕಿ ಬಂಧಿಸುವ ಪೋಲಿಸ್ ಇಲಾಖೆ ,ಸಂಘಪರಿವಾರ ಬಹಿರಂಗವಾಗಿ ಅದು ಕೂಡ ಪೋಲೀಸ್ ರ ಸಮ್ಮುಖದಲ್ಲಿ ಅಪ್ರಾಪ್ತ ಬಾಲಕರ ಕೈಯಲ್ಲಿ ತಲ್ವಾರ್ ನ್ನು ಕೊಟ್ಟು ದ್ವೇಷ ಬಿತ್ತುವ ಕಾರ್ಯ ನಡೆಸಿದರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ.ಪೋಲೀಸರ ಇಂತಹ ದ್ವಿಮುಖ ಹಾಗೂ ತಾರತಮ್ಯ ನೀತಿಯಿಂದ ದಿನ ಕಳೆದಂತೆ ಪೋಲೀಸ್ ಇಲಾಖೆಯ ವಿಶ್ವಾಸಾರ್ಹತೆ ಹಾಗೂ ನ್ಯಾಯದ ಭರವಸೆ ಕ್ಷೀಣಿಸುತ್ತಿದೆ,ಮುಂದಕ್ಕೆ ಜನರು ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಸಂಘಪರಿವಾರದ ದಾಟಿಯಲ್ಲೇ ಪ್ರತಿಕ್ರಿಯೆ ನೀಡುತ್ತಾ ಹೋದರೆ ಈ ದೇಶದ ಪರಿಸ್ಥಿತಿ ಎಲ್ಲಿಗೆ ಬಂದು ನಿಲ್ಲಬಹುದು ಎಂದು ಎಚ್ಚರಿಸಿದರು.
ಹಾಗಾಗಿ ದ.ಕ ಜಿಲ್ಲಾ ಪೋಲೀಸರು ಆಯುಧ ಪೂಜೆಯ ಹೆಸರಲ್ಲಿ ಅಕ್ರಮ ಶಸ್ತ್ರಾಸ್ತ್ರ ಗಳ ಪ್ರದರ್ಶಿಸಿ ಭಯದ ವಾತಾವರಣ ನಿರ್ಮಿಸಲು ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇಕ್ಬಾಲ್ ಬೆಳ್ಳಾರೆ ಮಾಧ್ಯಮ ಸಂಯೋಜಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.