ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಅನಿವಾಸಿ ಭಾರತೀಯರು ಮೃತಪಟ್ಟಿದ್ದಾರೆ.. ಮೃತರನ್ನು ಕೇರಳದ ಮಲಪ್ಪುರಂನ ಮಕ್ಕರಪರಂಬದ ಕಾಚಿನಿಕ್ಕೋಡ್ ನಿವಾಸಿ ಚೆರುಸೊಲಾ ಇಕ್ಬಾಲ್ (44) ಮತ್ತು ಮಂಜೇರಿಯ ವಲ್ಲಿಕಪ್ಪಟ್ಟ ನಿವಾಸಿ ವೆಲ್ಲಕಟ್ಟೆ ಹುಸೇನ್ (23) ಎಂದು ಗುರುತಿಸಲಾಗಿದೆ. ಖಾಸಿಮ್ ಪ್ರಾಂತ್ಯದ ಬುರೈದಾ ಬಳಿಯ ಅಲ್-ರಾಸ್ನ ನಭಾನಿಯಾದಲ್ಲಿ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಅವರು ರಿಯಾದ್ ಬಳಿಯ ಹುರೈಮ್ಲಾದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ತಮ್ಮ ಕುಟುಂಬಗಳೊಂದಿಗೆ ಮದೀನಾಗೆ ತೆರಳಿದ್ದರು. ಅಪಘಾತದಲ್ಲಿ ಗಾಯಗೊಂಡ ಇತರರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಅಲ್-ರಾಸ್ ಕೆಎಂಸಿಸಿ ಅಧ್ಯಕ್ಷ ಶೋಯೆಬ್, ಉನೈಸಾ ಕೆಎಂಸಿಸಿ ಅಧ್ಯಕ್ಷ ಜಮ್ಶೀರ್ ಮಂಕಡ ಮತ್ತು ರಿಯಾದ್ ಕೆಎಂಸಿಸಿ ವಿಭಾಗದ ಅಧ್ಯಕ್ಷ ಸಿದ್ದಿಕ್ ತುವ್ವೂರ್ ಸ್ಥಳಿದಲ್ಲಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.