ಕತಾರ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಸಂಘ ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಭಾರತೀಯ ಸಮುದಾಯದ ಸ್ವಾಗತ ಸಭೆಯಲ್ಲಿ ಫಿಫಾ ಆಹ್ವಾನಿತ ಗಣ್ಯರಾದ ಶ್ರೀ. ಎನ್.ಎ.ಹ್ಯಾರಿಸ್, ಉಪಾಧ್ಯಕ್ಷರು – ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF), ಕರ್ನಾಟಕ ಫುಟ್ಬಾಲ್ ಅಸೋಸಿಯೇಶನ್ನ ಅಧ್ಯಕ್ಷರು ಮತ್ತು ಬೆಂಗಳೂರಿನ ಶಾಂತಿ ನಗರದ ಕರ್ನಾಟಕ ವಿಧಾನಸಭೆಯ ಸದಸ್ಯರು ಅವರನ್ನು 21 ನವೆಂಬರ್ 2022 ರಂದು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಸಾಂಪ್ರದಾಯಿಕ ಮೈಸೂರು ಶೈಲಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಪಿ ಎನ್ ಬಾಬುರಾಜನ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಸುಬ್ರಹ್ಮಣ್ಯ ಹೆಬ್ಬಾಗಿಲು, ಐಸಿಬಿಎಫ್ ಅಧ್ಯಕ್ಷರು ವಿನೋದ್ ನಾಯರ್ ಮತ್ತು ಭಾರತೀಯ ಸಮುದಾಯದ ಗಣ್ಯರು ಉಪಸ್ಥಿತರಿದ್ದರು. ಫಿಫಾ ೨೦೨೨ ಈವೆಂಟ್ನಲ್ಲಿ ಕತಾರ್ ರಾಜ್ಯಕ್ಕೆ ಭೇಟಿ ನೀಡುವ ಗಣ್ಯರನ್ನು ಗೌರವಿಸಲು ಭಾರತೀಯ ಸಾಂಸ್ಕೃತಿಕ ಕೇಂದ್ರವು ಈ ಅಭಿನಂದನಾ ವೇದಿಕೆಯನ್ನು ರಚಿಸಿತ್ತು.
ಮಹೇಶ್ ಗೌಡ ಅಧ್ಯಕ್ಷರು – ಕರ್ನಾಟಕ ಸಂಘ ಕತಾರ್ ಸಭೆಯನ್ನು ಸ್ವಾಗತಿಸಿ, ಸ್ವಾಗತಕ್ಕೆ ಸಮಯವನ್ನು ನೀಡಿದ್ದಕ್ಕಾಗಿ ಎನ್.ಎ.ಹ್ಯಾರಿಸ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತ ಅವರ ನಾಯಕತ್ವದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಇನ್ನೂ ಹೆಚ್ಚಿನ ಎತ್ತರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು, ಮಹೇಶ್ ಗೌಡ ಅವರು ಅತಿಥಿಗಳನ್ನು ಅಭಿನಂದಿಸಿದ ಭಾರತೀಯ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಅವರ ಆಹ್ವಾನಕ್ಕಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದರು.
ಶ್ರೀ. ಪಿ.ಎನ್.ಬಾಬುರಾಜನ್ ಅವರು ತಮ್ಮ ಭಾಷಣದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ಫಿಫಾ ೨೦೨೨ ಆಚರಣೆಯಲ್ಲಿ ಹೇಗೆ ತೊಡಗಿಸಿಕೊಂಡಿದೆ ಎಂಬುದರ ಕುರಿತು ಗಣ್ಯರಿಗೆ ವಿವರಿಸಿದರು. ಶ್ರೀ ವಿನೋದ್ ನಾಯರ್ ಭಾಷಣದಲ್ಲಿ ಕತಾರ್ ನಲ್ಲಿ ನೆಲೆಸಿರುವ ಭಾರತೀಯರು ಫಿಫಾದ ಈ ಯಶಸ್ಸಿನ ಭಾಗವಾಗಿರುವ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ನಾಯಕತ್ವದಲ್ಲಿ ಭಾರತವು ಭವಿಷ್ಯದಲ್ಲಿ ವಿಶ್ವಕಪ್ಗೆ ಅರ್ಹತೆ ಪಡೆಯಲಿ ಎಂದು ಆಶಿಸಿದರು.
ಶ್ರೀ ಎನ್.ಎ.ಹ್ಯಾರಿಸ್ ಅವರು ಕರ್ನಾಟಕ ಸಂಘ ಕತಾರ್ ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸನ್ಮಾನ ಹಾಗೂ ಸಮುದಾಯವನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಎಐಎಫ್ಎಫ್ ಹೊಸ ಸಮಿತಿಯು ಫುಟ್ಬಾಲ್ ಅನ್ನು ಹೇಗೆ ಬಲಪಡಿಸಲು ಯೋಜಿಸಿದೆ ಎಂಬುದರ ಕುರಿತು ಶ್ರೀ ಎನ್.ಎ.ಹ್ಯಾರಿಸ್ ಅವರು ಪ್ರೇಕ್ಷಕರಿಗೆ ವಿವರಿಸಿದರು ಮತ್ತು ಈ ದಿನಗಳಲ್ಲಿ ಭಾರತೀಯ ಮಹಿಳಾ ಫುಟ್ಬಾಲ್ ತಂಡವು ಹೇಗೆ ಬಲಶಾಲಿಯಾಗುತ್ತಿದೆ ಎಂಬುದನ್ನು ಸಹ ಪ್ರಸ್ತಾಪಿಸಿದರು. ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಜಂಟಿ ಕಾರ್ಯದರ್ಶಿ ಶ್ರೀ ಮಂಜೋತ್ ಅವರು ನೆಡೆಸಿ ಕೊಟ್ಟರು ಮತ್ತು ಸಭೆಗೆ ಧನ್ಯವಾದವನ್ನು ಕ್ರೀಡಾ ಕಾರ್ಯದರ್ಶಿ ಶ್ರೀ ಝಾಖೀರ್ ಅಹಮದ್ ಅವರು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.