ಹದಿಮೂರು ವರುಷ ತುಂಬಿ ಹದಿನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ವಿಕೆ ನ್ಯೂಸ್ ನ ಸಂಪಾದಕರು ಹಾಗೂ ಸಿಬ್ಬಂದಿ ವರ್ಗಕ್ಕೆ ತುಂಬು ಹೃದಯದ ಅಭಿನಂದನೆಗಳು. ಇಂದಿನ ಪೈಪೋಟಿ ಯುಗದಲ್ಲಿ ಕೆಲವೊಂದು ಸಾಮಾಜಿಕ ಜಾಲತಾಣಗಳು ಸತ್ಯಾಸತ್ಯತೆಯನ್ನು ಕೂಲಂಕುಷವಾಗಿ ಪರಿಶೀಲಸದೆ ತಾ ಮುಂದು ನಾ ಮುಂದು ಎಂದು ಸುದ್ದಿ ಬಿತ್ತರಿಸಲು ಆತುರ ತೋರಿ ಜನರಲ್ಲಿ ಗೊಂದಲ ಸೃಷ್ಠಿಸಿ ಗಲಭೆಗೆ, ಪ್ರಚೋದಿಸುತ್ತಿದೆ.
ಇಂತಹ ಸನ್ನಿವೇಶದಲ್ಲಿ ಜನರಿಗೆ ಬೇಕಾಗಿರುವುದು ಸತ್ಯವಾದ ನಿಖರ ಮಾಹಿತಿ. ಇಂತಹ ಸುದ್ದಿಗಳನ್ನು ವಿಕೆ ನ್ಯೂಸ್ ಬಿತ್ತರಿಸುತ್ತಾ ಪತ್ರಿಕೋದ್ಯಮಕ್ಕೆ ನ್ಯಾಯ ಸಲ್ಲಿಸುತ್ತಿದೆ. ಕ್ಷಣಾರ್ಧದಲ್ಲಿ ಸಮಾಜದ ಆಗುಹೋಗುಗಳನ್ನು ತಿಳಿಸುತ್ತಾ ಜನರಲ್ಲಿ ಅರಿವು ಮೂಡಿಸುತ್ತಿದೆ. ಹಾಗೆಯೇ ನನ್ನಂತಹ ಸಣ್ಣಪುಟ್ಡ ಬರಹಗಾರರ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿ ನಮಗೊಂದು ವೇದಿಕೆ ಕಲ್ಪಿಸುತ್ತಿರುವುದು ಕೂಡ ಖುಷಿಯ ಸಂಗತಿ.
ನಿಮ್ಮೀ ಸೇವೆ ಹೀಗೆ ನಿರಂತರವಾಗಿ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿ ಎಂದು ಆಶಿಸುತ್ತಾ ಶುಭ ಹಾರೈಕೆಗಳೊಂದಿಗೆ..
– ರಹ್ಮತ್ ಪುತ್ತೂರು (ಲೇಖಕಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.