ಸೊಹಾರ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್,ಸೊಹಾರ್ ಝೋನ್ ಬುರೈಮಿ ಸೆಕ್ಟರ್ ಇದರ ಸಮ್ಮೇಳನವು ಶುಕ್ರವಾರ ಜುಮ್ ನಮಾಝಿನ ಬಳಿಕ ಹಮೀದ್ ರೆಸಿಡೆನ್ಸಿ ಯಲ್ಲಿ ನಡೆಯಿತು.
ಉಮರ್ ಫಾರೂಕ್ ಕುಕ್ಕಾಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೊಹಾರ್ ಝೋನ್ ನಾಯಕರಾದ ಅಝೀಝ್ ಉಪ್ಪಳ ಇವರು ಉದ್ಘಾಟಿಸಿದರು.ಬಹು ಮುಹಮ್ಮದ್ ಕುಟ್ಟಿ ಸಖಾಫಿ ರವರು ದುಆಕ್ಕೆ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಶಾಹಿದ್ ಸಾಲೆತ್ತೂರು ರವರು ಕಿರಾಅತ್ ಪಠಿಸಿದರು. ಕೆಸಿಎಫ್ ಸೊಹಾರ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಇಕ್ಬಾಲ್ ಮದನಿ ಚೆನ್ನಾರ್ ರವರು ಕೆಸಿಎಫ್ ನ ಸಾಧನೆಯ ಕುರಿತು, ಹತ್ತು ವರ್ಷಗಳು ತುಂಬಿದ ಕೆಸಿಎಫ್ ನ ದಶವಾರ್ಶಿಕ ಡಿಸೇನಿಯಂ ನ ಕುರಿತು ಸವಿಸ್ಥಾರವಾಗಿ ವಿವರಿಸಿದರು.
ಇದೇ ವೇಳೆ ಹಮೀದ್ ಸಾಲೆತ್ತೂರು ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುನೀರ್ ಕನ್ಯಾನ, ಮಜೀದ್ ಬಾಯರ್ ರವರು ಕೆಸಿಎಫ್ ಹಾಡನ್ನು ಹಾಡಿದರು ಹಾಗೂ ಬುರೈಮಿ ಸೆಕ್ಟರ್ ಪ್ರದಾನ ಕಾರ್ಯದರ್ಶಿ ನೌಫಲ್ ಸೊಂಕಲ್ ರವರು ಸ್ವಾಗತಿಸಿ ಬುರೈಮಿ ಸೆಕ್ಟರ್ ಅಧ್ಯಕ್ಷ ಅಶ್ರಫ್ ಕರೋಪಾಡಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.