ಉಳ್ಳಾಲ (www.vknews.in) : ಸಮೀಪದ ಕಿನ್ಯ ಗ್ರಾಮದಲ್ಲಿರುವ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಉಕ್ಕುಡ ಕಿನ್ಯ ಇದರ ವತಿಯಿಂದ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮವು SIC ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ ಪರಿಸರದ 5 ಬಡ ಮಕ್ಕಳಿಗೆ ಇಸ್ಲಾಮಿನ ವಿಧಿವಿಧಾನದಂತೆ ಸುನ್ನತ್ ಕರ್ಯಕ್ರಮವನ್ನು ಡಾಕ್ಟರ್ ಸುಲೈಮಾನ್ ರವರು ನಡೆಸಿಕೊಟ್ಟರು.
ಇದಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಮಾತನಾಡಿದ SYS ಕೇಂದ್ರ ಸಮಿತಿ ಸದಸ್ಯರು ದಾರ್ಮಿಕ ಮುಖಂಡರೂ ಆದ ತಬೂಕ್ ದಾರಿಮಿ ಉಸ್ತಾದ್ ರವರು ಸಂಘದ ವತಿಯಿಂದ ಹಲವು ಜನೋಪಯೋಗಿ ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಇದರಲ್ಲಿ ವಾರಕ್ಕೊಮ್ಮೆ ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಉಕ್ಕುಡ ಇದರ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣೆಯು ಪ್ರತಿ ಮಂಗಳವಾರದಂದು ನಡೆಯುತ್ತಿದ್ದು ಊರಿನ ಹಲವಾರು ಫಲಾನುಭವಿಗಳು ಇದರ ಸದುಪಯೋಗ ಪಡೆಯುತ್ತಿರುವುದು ಸರ್ವರ ಪ್ರಶಂಸೆನೆಗೆ ಪಾತ್ರವಾದ ಕಾರ್ಯವಾಗಿದೆ ಎಂದು ಅಬಿಪ್ರಾಯ ಪಟ್ಟರು. ಇದರಲ್ಲಿ ಎಲ್ಲರೂ ತಪ್ಪದೆ ಭಾಗವಹಿಸಿ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಪ್ರತಿ ತಿಂಗಳು ಆಧ್ಯಾತ್ಮಿಕ ಸಂಗಮ ಮಜ್ಲಿಸುನ್ನೂರು ನಡೆಯುತ್ತಿದ್ದು ಇದಕ್ಕೆ ಊರಿನ ಎಲ್ಲರ ಸಹಾಯ ಸಹಕಾರ ಸಿಗುತ್ತಿರುವುದು ಸ್ವಾಗತಾರ್ಹವಾಗಿದೆ.
ಪ್ರತಿ ವರ್ಷವೂ ಊರಿನ ಬಡ ನಿರ್ಗತಿಕ ಮಕ್ಕಳ ಸಾಮೂಹಿಕ ಉಚಿತ ಮುಂಜಿ ಕಾರ್ಯಕ್ರಮವು ನಡೆಸಲು ತೀರ್ಮಾನಿಸಿ ಅದರ ಉದ್ಘಾಟನೆಯು ಇವತ್ತು 5 ಬಡ ಮಕ್ಕಳ ಉಚಿತ ಮುಂಜಿ ಕಾರ್ಯಕ್ರಮ ನಡೆಸುವುದರೊಂದಿಗೆ ಸೆಯ್ಯದ್ ಅಮೀರ್ ತಂಙಳ್ ರವರ ದುಆದೊಂದಿಗೆ ನೆರವೇರಿತು. ಉಚಿತ ಶೈಕ್ಷಣಿಕ ತರಬೇತಿ, ಉಚಿತ ಕಂಪ್ಯೂಟರ್ ತರಬೇತಿ,ಬಡ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ತರಬೇತಿ,ಮುಂತಾದ ಹಲವಾರು ಯೋಜನೆಗಳನ್ನು ಸಂಘಟನೆಯವರು ತೀರ್ಮಾನಿಸಿದ್ದು ಇದಕ್ಕೆ ಎಲ್ಲರ ಸಹಾಯ ಸಹಕಾರವನ್ನು ಕೋರಿದರು.
ಕಿನ್ಯ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಇಸ್ಮಾಯಿಲ್ ಹಾಜಿ ಕಿನ್ಯ ರವರು ಮಾತನಾಡಿ ಸಮಿತಿಯು ನಡೆಸುವ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲಾ ವಿದದ ಸಹಾಯ ಸಹಕಾರವನ್ನು ಘೋಷಿಸಿದರು.ಉಸ್ತಾದ್ ಕಾಸಿಂ ದಾರಿಮಿ ಸಮಿತಿಯು ನಡೆದು ಬಂದ ಹಾದಿಯನ್ನು ವಿವರಿಸಿದರು.ಕಿನ್ಯ ಪಂಚಾಯತ್ ಮಾಜಿ ಅಧ್ಯಕ್ಷರಾದ ಜನಾಬ್ ಹಮೀದ್ ಕಿನ್ಯ ಮಾತನಾಡಿ ಇಂತಹ ಕಾರ್ಯಕ್ರಮವು ಇಡೀ ಜಿಲ್ಲೆಗೆ ಮಾದರಿ ಎಂದು ಅಬಿಪ್ರಾಯ ಪಟ್ಟರು.ಜಮಾಅತಿನ ಮಾಜಿ ಪ್ರಧಾನ ಕಾರ್ಯದರ್ಶಿ ಆದ ಜನಾಬ್ ಅಬೂಸಾಲಿಹ್ ಹಾಜಿ, ದೇರಳಕಟ್ಟೆ ತಾಜ್ ಮೆಡಿಕಲ್ ಮುಖ್ಯಸ್ಥ ಅಬ್ದುಲ್ ಸಮದ್, ಡಾಕ್ಟರ್ ಸುಲೈಮಾನ್, ಡಾಕ್ಟರ್ ರೇಷ್ಮಾ , ಮುಂತಾದ ನೇತಾರರು ಆಶಂಸ ಪ್ರಭಾಷಣ ಗೈದರು. ಉಕ್ಕುಡ ಮಸೀದಿಯ ಮಾಜಿ ಅದ್ಯಕ್ಷರಾದ ಜನಾಬ್ ಯೂಸುಫ್ ಉಕ್ಕುಡ, ಮೂಸ ಹಾಜಿ ಕುರಿಯಕ್ಕಾರ್,ಹಸೈನಾರ್ ಹಾಜಿ, ಡಾಕ್ಟರ್ ಫಾತಿಮಾ ಅಫ್ರಿರೀನಾ, ಮತ್ತಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಂಘಟಕರು ಪ್ರತಿ ಮಗುವಿಗೂ ಟಿಟಿ ಇಂಜೆಕ್ಷನ್, ಮಾತ್ರೆ, ಐಸ್ ಕ್ರೀಮ್ ಲುಂಗಿ ಉಚಿತವಾಗಿ ನೀಡಿದರು. ಸಮಾರಂಭದಲ್ಲಿ ಕಾರ್ಯಕ್ರಮದ ರೂವಾರಿಯೂ ಕೇಂದ್ರ ಬಿಂದು ಆದ ಸಮಿತಿಯ ಅಧ್ಯಕ್ಷ ಜನಾಬ್ ಬಾವುಚ್ಚ ಪಡ್ಪುರವರು ಅಧ್ಯಕ್ಷ ಭಾಷಣದಲ್ಲಿ ಎಲ್ಲರನ್ನೂ ಶ್ಲಾಘಿಸಿ ಎಲ್ಲರಿಗೂ ನಾನು ಅಭಾರಿ ಎಂದು ಒತ್ತಿ ಹೇಳಿ ಎಲ್ಲರಿಗೂ ಧನ್ಯವಾದ ತಿಳಿಸಿದರು. ಉಕ್ಕುಡ ಮಸೀದಿಯ ಪ್ರಧಾನ ಕಾರ್ಯದರ್ಶಿಯೂ ಕಿನ್ಯ ಪಂಚಾಯತ್ ಉಪಾಧ್ಯಕ್ಷರು ಆದ ಫಾರೂಕ್ ಕಿನ್ಯ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.