ವಿಜಯನಗರ ಜಿಲ್ಲೆ ಕೂಡ್ಲಿಗಿ (www.vknews. in) ; ತಾಲೂಕಿನ ಬೊಪ್ಪಲಾಪುರ ಗ್ರಾಮದಿಂದ ಕೂಗಳತೆ ಅಂತರದಲ್ಲಿರುವ, ಅನಧೀಕೃತ ಕೋಳಿಫಾರಂನಿಂದಾಗಿ ಗ್ರಾಮಸ್ಥರ ನೆಮ್ಮದಿ ಹಾಳಾಗುತ್ತಿದ್ದು. ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಿ ಶೀಘ್ರವೇ ತೆರವು ಗೊಳಿಸಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಹೋರಾಟ ಮಾಡಲಾಗುವುದೆಂದು ರೈತ ಪರ ಹೋರಾಟಗಾರ ಚನ್ನಬಸಪ್ಪ ಈ ಮೂಲಕ ಆಗ್ರಹಿಸಿದ್ದಾರೆ. ಕೋಳಿ ಫಾರಂನಿಂದಾಗಿ ಗ್ರಾಮದಲ್ಲಿ ಕ್ರಿಮಿ ಕೀಟಗಳ ಹಾವಳಿ ಹೆಚ್ಚಿದ್ದು, ದುರ್ನಾಥ ಬೀರುತ್ತಿದೆ ಹಾಗೂ ಸಾಂಕ್ರಮಿಕ ರೋಗಗಳು ಹರಡುತ್ತಿವೆ. ಕ್ರಿಮಿ ಕೀಟಗಳ ಬಾಧೆ ಹಾಗೂ ರೋಗ ಋಜನಿಗಳಿಂದ ಗ್ರಾಮಸ್ಥರು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ, ಕೋಳಿ ಫಾರಂ ಗ್ರಾಮಸ್ಥರ ನೆಮ್ಮದಿ ಹಾಳು ಮಾಡುತ್ತಿದ್ದು ಕಾರಣ ಅದನ್ನ ಕೂಡಲೇ ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಹಲವು ಮರ ಗಿಡಗಳ ಮಾರಣ ಹೋಮ
ಸಂಬಂದಿಸಿದಂತೆ ಅವರು ಮಾತನಾಡಿ ಎ15ರಂದು ಕೋಳಿ ಫಾರಂಗೆ ಹತ್ತಿರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಕೋಳಿಫಾರಂನ ತ್ಯಾಜ್ಯಕ್ಕೆ ಅಚ್ಚಲಾಗಿದ್ದ ಬೆಂಕಿ ಅವರ ನಿರ್ಲಕ್ಷ್ಯ ದಿಂದಾಗಿ ಸುತ್ತಲಿನ ಹತ್ತಾರು ಮರ ಗಿಡ ಮರಗಳಿಗೆ ಹೊತ್ತಿಕೊಂಡು ಭಸ್ಮವಾಗಿವೆ. ಅಲ್ಲದೇ ಕೋಳಿ ಫಾರಂನಿಂದಾಗಿ ಹತ್ತಾರು ಬಗೆಯ ಕ್ರಿಮಿ ಕೀಟಗಳು, ಗ್ರಾಮಕ್ಕೆ ಒಕ್ಕರಿಸಿದ್ದು ಪರಿಣಾಮ ಕೆಲ ಸಾಂಕ್ರಾಮಿಕ ರೋಗಗಳು ತಲೆದೂರಿವೆ. ಹಲವು ಗ್ರಾಮಸ್ಥರು ಅನಾರೋಗ್ಯದಿಂದ ಬಳಲುವಂತಾಗಿದೆ, ಒಟ್ಟಾರೆಯಾಗಿ ಕೋಳಿ ಫಾರಂ ಗ್ರಾಮಸ್ಥರ ನೆಮ್ಮದಿ ಕಸಿದುಕೊಂಡಿದೆ. ಇದನೆಲ್ಲಾ ತಿಳಿದೂ ಕೂಡ ತಿಳಿಯದಂತಿರುವ ಕಾಮಾನ್ ಸೆನ್ಸ್ ಇಲ್ಲದ ಫಾರಂ ಮಾಲೀಕ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೇ ನಿರ್ಲಕ್ಷ್ಯ ಧೊರಣೆ ತಾಳಿರುವುದು ಖಂಡನೀಯವಾಗಿದೆ. ಕಾಮನ್ ಸೆನ್ಸ್ ಇಲ್ಲದ ಕೋಳಿ ಫಾರಂ ಮಾಲೀಕ ಹಾಗೂ ಸಿಬ್ಬಂದಿಯ ಉದ್ಧಟತನದ ವರ್ತನೆಗೆ, ತಕ್ಕ ಶಾಸ್ತಿ ಮಾಡಲಾಗುವುದು ಅವರಿಗೆ ನೈತಿಕ ಪಾಠ ಕಲಿಸಲಾಗುವುದೆಂದು ಗ್ರಾಮಸ್ಥರು ಈ ಮೂಲಕ ಎಚ್ಚರಿಸಿದ್ದಾರೆ.
ತೆರವುಗೊಳಿಸದಿದ್ದಲ್ಲಿ ಹೋರಾಟ, ಎಚ್ಚರಿಕೆ
ಮಾರಕವಾಗಿರುವ ಅನಧೀಕೃತವಾಗಿ ನಿರ್ಮಾಣಗೊಂಡಿರುವ ಕೋಳಿ ಫಾರಂನ್ನು, ತಾಲೂಕಾಢಳಿತ ಹಾಗೂ ಸಂಬಂಧಿಸಿದ ಇಲಾಖಾ ಉನ್ನತಾಧಿಕಾರಿ ತೆರವುಗೊಳಿಸಲು ಕ್ರಮ ಜರುಗಿಸಬೇಕಿದೆ. ಕೋಳಿ ಫಾರಂ ನಿಂದ ಗ್ರಾಮಸ್ಥರ ಮೇಲಾಗಬಹುದಾದ, ಯಾವುದೇ ದುಷ್ಪರಿಣಾಮಗಳಿಗೆ ಹಾಗೂ ಮಾರಣಾಂತಿಕ ಹಾನಿಗೆ. ಫಾರಂನ ಮಾಲೀಕರು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿ, ನೇರ ಹೊಣೆ ಎಂದು ಚನ್ನಬಸಪ್ಪ ಕಿಡಿ ಕಾರಿದ್ದಾರೆ. ತಾಲೂಕು ಪಂಚಾಯ್ತಿ ಹಾಗೂ ತಾಲೂಕಾಡಳಿತ, ಶೀಘ್ರವೇ ಕೋಳಿ ಫಾರಂ ತೆರವಿಗೆ ಅಗತ್ಯ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ತಿಂಗಳೊಳಗಾಗಿ ಕೋಳಿ ಫಾರಂ ತೆರವುಗೊಳಿಸದಿದ್ದಲ್ಲಿ, ರೈತ ಸಂಘ ಗ್ರಾಮಸ್ಥರೊಡಗೂಡಿ ತಾಲೂಕು ಪಂಚಾಯ್ತಿ ಕಚೇರಿ ಹಾಗೂ ತಾಲೂಕು ಪಂಚಾಯ್ತಿ ಕಚೇರಿ ಮುಂದೆ ಧರಣಿ ಮಾಡಲಾಗುವುದು. ಮತ್ತು ನಿರ್ಲಕ್ಷ್ಯ ಧೋರಣೆಯ ಆಢಳಿತಾಧಿಕಾರಿಗಳ ವಿರುದ್ಧ ಹಾಗೂ ಉದ್ಧಟತನದ ಕೋಳಿ ಫಾರಂ ಮಾಲೀಕರ ವಿರುದ್ಧ, ಅಗತ್ಯ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.