(www.vknews.com) : ಸುಮಾರು ಮೂರು ವರ್ಷದಿಂದ ಮನೆಯ ಕೆಲಸ ಪೂರ್ತಿಗೊಳ್ಳದೆ ಬಡ ಕುಟುಂಬವೊಂದು ಕೈ ಚೆಲ್ಲಿ ಕುಳಿತಿದ್ದಾಗ, ಅವರ ಸಹಾಯಕ್ಕೆ ಬಂದ ಮೂವರು ದಾನಿಗಳು, ಆ ಕುಟುಂಬದ ಬಹುದಿನದ ಕನಸ್ಸನ್ನು ಮೂರು ತಿಂಗಳಲ್ಲಿ ಪೂರ್ತಿಗೊಳಿಸಿ, ಕುಟುಂಬಕ್ಕೆ ಸುಸಜ್ಜಿತ ಮನೆಯನ್ನು ಇಂದು ಹಸ್ತಾಂತರಿಸಿದರು. ಕೃಷ್ಣಾಪುರ ಬದ್ರಿಯಾ ಜುಮ್ಮಾ ಮಸೀದಿ ಮುಸ್ಲಿಂ ಜಮಾತ್ ನ ಅಧ್ಯಕ್ಷರಾದ ಹಾಜಿ. ಬಿ.ಎಂ. ಮಮ್ತಾಝ್ ಅಲಿ, ಮೊಯಿದ್ದೀನ್ ಜುಮ್ಮಾ ಮಸೀದಿ ಬೈಕಂಪಾಡಿ ಇದರ ಅಧ್ಯಕ್ಷರಾದ ಬಿ.ಎ. ಆಬ್ದುಲ್ ನಾಸಿರ್ ( ಲಕ್ಕೀಸ್ಟಾರ್), ಹೋಮ್ ಪ್ಲಸ್ ಫರ್ನಿಚರ್ ಮಾಲಕರಾದ ಆಸಿಫ್ ಸೂಫಿಖಾನ್ ಇವರೇ ಆ ಬಡ ಕುಟುಂಬದ ಮೊಗದಲ್ಲಿ ನಗು ಅರಳಿಸಿದ ಮಹನೀಯರು.
ಕೃಷ್ಣಾಪುರದ ಚೊಕ್ಕಬೆಟ್ಟು ಜಮಾಅತ್ ನಲ್ಲಿ ವಾಸಿಸುತ್ತಿರುವ ಬಡ ಕುಟುಂಬವೊಂದರ ಮನೆಯು ಕಳೆದ ಮೂರು ವರ್ಷದಿಂದ ಪೂರ್ಣಗೊಳ್ಳದೆ ಅರ್ಧದಲ್ಲಿ ನಿಂತಿದೆ ಎಂದು ತಿಳಿದಾಗ ತಕ್ಷಣ ದಾವಿಸಿ ಹೋದ ಈ ಮೂವರು ದಾನಿಗಳು, ಸುಮಾರು ಐದು ಲಕ್ಷಕ್ಕೂ ಮಿಗಿಲಾಗಿ ಖರ್ಚು ಭರಿಸಿ, ಸುಸಜ್ಜಿತ ಮನೆಯನ್ನು ನಿರ್ಮಿಸಿ ಕೊಟ್ಟು ಇಂದು ನಡೆದ ಒಕ್ಕಲಿನ ಶುಭ ಸಮಾರಂಭದಲ್ಲಿ ಮನೆಯ ಕೀಯನ್ನು ಸಂಸಾರಕ್ಕೆ ನೀಡಿ ಪ್ರಾರ್ಥಿಸುವಂತೆ ಹೇಳಿದರು.
ಚೊಕ್ಕಬೆಟ್ಟು ಮೊಹಿದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಮೌಲಾನ ಅಝೀಝ್ ದಾರಿಮಿಯವರ ದುವಾದಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಿ.ಎ. ಮೊಯಿದಿನ್ ಬಾವಾ ಮಾತನಾಡಿ, ಸಮುದಾಯದ ಶ್ರೀಮಂತರು ಪ್ರತೀ ಊರಿನಲ್ಲೂ ಇಂತಹ ಸೇವಾ ಕಾರ್ಯ ಮಾಡಲು ಮುಂದೆ ಬಂದರೆ ಯಾರೂ ಸಂಕಷ್ಟದಲ್ಲಿ ಇರಲಾರರು, ನಾವು ತಲಮಟ್ಟದ ಜನರ ಸ್ಥಿತಿಯನ್ನು ಕುದ್ದು ಹೋಗಿ ಅರಿತು ನೆರವು ನೀಡಿದರೆ ಇಂತಹ ಶುಭ ಸಂದರ್ಭವನ್ನು ನೋಡಲು ಸಾಧ್ಯ ಎಂದರು. ಮನೆಯ ನಿರ್ಮಾಣ ಕಾರ್ಯಕ್ಕೆ ಪ್ರೇರಣೆ ನೀಡಿದ, ಡೆಕ್ಕನ್ ಪ್ಲಾಸ್ಟಿಕ್ ನ ಮಾಲಕರಾದ ಜನಾಬ್ ಅಸ್ಗರ್ ಅಲಿಯವರು ಮಾತನಾಡಿ, ಈ ಮನೆಯ ಸ್ಥಿತಿಯನ್ನು ನೋಡಲು ಹಾಜಿ ಮುಮ್ತಾಝ್ ಅಲಿ, ಅವರ ಮಿತ್ರರಾದ ಅಬ್ದುಲ್ ನಾಸಿರ್ ಮತ್ತು ಆಸಿಫ್ ರವರನ್ನು ಕರೆದಾಗ ಅವರು ತಕ್ಷಣ ಬಂದು ವೀಕ್ಷಿಸಿ ಆಗಲೇ ಸ್ಪಂಧಿಸಿದ್ದು ನಮ್ಮ ಸಮುದಾಯದಲ್ಲಿರುವ ಮಾನವೀಯ ಮೌಲ್ಯ ಮತ್ತು ಕಾಳಜಿಯನ್ನು ವಿವರಿಸುತ್ತದೆ ಎಂದರು.
ಮೂವರು ದಾನಿಗಳು ಸಂಸಾರಕ್ಕೆ ಮನೆಯ ಕೀ ಹಸ್ತಾಂತರಿಸಿದರು. ಮನೆ ನಿರ್ಮಾಣದ ಆರಂಭದಿಂದಲೂ ಕೊನೆಯವರೆಗೂ ಮುತುವರ್ಜಿ ವಹಿಸಿದ ಚೊಕ್ಕಬೆಟ್ಟು ಜುಮ್ಮಾ ಮಸೀದಿಯ ಉಪಾಧ್ಯಕ್ಷರಾದ ಮಹಮ್ಮದ್ ಆಸಿಫ್, ಕಟ್ಟಡ ಕಟ್ಟುವಲ್ಲಿ ಸಂಪೂರ್ಣ ಉಸ್ತುವಾರಿ ನೇತೃತ್ವ ವಹಿಸಿ ಕೊಂಡಿದ್ದ ಎಸ್.ಕೆ.ಪ್ಲಾಸ್ಟಿಕ್ ನ ಮುಸ್ತಫಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬಡವರನ್ನು ಗುರುತಿಸಿ, ಅವರಿಗೆ ದಾನಿಗಳ ಮೂಲಕ ನೆರವು ಕೊಡಿಸುವ ಇವರ ಪ್ರಯತ್ನವನ್ನು ಶ್ಲಾಘಿಸಲಾಯಿತು.
ಪರಿಸರದ ಎನ್.ಎಫ್.ಸಿ ಮತ್ತು ಅಝಾದ್ ಕ್ಲಬ್ ನ ಯುವಕರೂ ಈ ಮನೆ ನಿರ್ಮಾಣದ ಆರಂಭದಿಂದಲೂ ತನು ಮನದಿಂದ ಸಹಕರಿಸಿದ್ದು, ಇಂತಹ ಇಂತಹ ಯುವಕರನ್ನು ಪ್ರತೀ ಜಮಾತ್ ನವರೂ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಹಾಜಿ. ಬಿ.ಎಂ ಮಮ್ತಾಝ್ ಆಲಿ ಹೇಳಿದರು.
ಇದೇ ಸಂದರ್ಭದಲ್ಲಿ ಖತೀಬರಾದ ಅಝೀಝ್ ದಾರಿಮಿಯವರ ಸಲಹೆ ಮೇರೆಗೆ ಅರ್ಧದಲ್ಲಿ ನಿಂತ ಇನ್ನೊಂದು ಬಡ ಕುಟುಂಬದ ಮನೆಯನ್ನೂ ವೀಕ್ಷಿಸಲಾಯಿತು. ಮನೆಯ ಸಂಕಷ್ಟಿತ ಸ್ಥಿತಿ ನೋಡಿ ಮರುಗಿದ ಮಮ್ತಾಝ್ ಅಲಿ ಮತ್ತು ಮಿತ್ರರು, ಕಾರ್ಯಕ್ರಮಕ್ಕೆ ಬಂದಿದ್ದ ಎನ್.ಆರ್.ಐ ಉಧ್ಯಮಿ ಮಹಮ್ಮದ್ ಅಲಿ ಕೃಷ್ಣಾಪುರ ಇವರಲ್ಲಿ ವಿನಂತಿಸಿದಾಗ ಅವರು ಮೂರನೆಯ ಮನೆಯ ನಿರ್ಮಾಣಕ್ಕೆ ನನ್ನಿಂದ ಸಾಧ್ಯವಾಗುವಷ್ಟು ನೆರವು ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ, ಡೆಕ್ಕನ್ ಇಂಡಸ್ಟ್ರೀಸ್ ನ ಪಾಲುದಾರರಾದ ಬಿ.ಎಚ್ ಬಶೀರ್, ಈಸುಬು ಹೈವೇ, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಮಿಸ್ಬಾಹ್ ಮಹಿಳಾ ಆಲಿಮಾ ಕಾಲೇಜಿನ ಪ್ರೊಫೇಸರ್ ಹಬೀಬ್ ಸಖಾಫಿ, ಸಂಚಾಲಕರಾದ ಬಿ. ಎ ನಝೀರ್, ಎಸ್.ಕೆ ಫರೂಕ್ ಅವ್ಸಾಫ್, ಇಂಮ್ತಿಯಾಝ್ ಪಾರ್ಲೆ, ಬಶೀರ್ ಚೊಕ್ಕಬೆಟ್ಟು, ಹಾಗೇ ಎನ್ ಎಫ್ ಸಿ ಮತ್ತು ಆಝಾದ್ ಕ್ಲಬ್ ನ ಯವಕರು ಕೂಡಾ ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.