ಮಂಗಳೂರು (www.vknews.com) : ಮಂಗಳೂರು ಮಹಾನಗರಪಾಲಿಕೆಗೆ ಒಬ್ಬ ನಿಷ್ಠಾವಂತ ಆಡಳಿತ ಜ್ಞಾನವಿರುವ ಐಎಎಸ್ ಮುಖ್ಯಾಧಿಕಾರಿ ಬೇಕಿತ್ತು ಎನ್ನುವ ಆಕಾಂಕ್ಷೆ ಶ್ರೀಮಾನ್ ಅಕ್ಷಯ್ ಶ್ರೀಧರ್ IAS ರವರ ಮೂಲಕ ಈಡೇರಿರುವುದು ತುಂಬಾ ಸಂತೋಷವಾಗಿದೆ. ಇದರಿಂದ ಸಾಮಾನ್ಯ ಜನರಿಗೆ ತಮ್ಮ ಕುಂದುಕೊರತೆಗಳನ್ನು ನೇರವಾಗಿ ಇವರ ಜೊತೆ ಹಂಚಿಕೊಳ್ಳಬಹುದು. ಅದೇ ರೀತಿ ವಾರ್ಡಿನ ಕೆಲಸವೂ ಉತ್ತಮ ರೀತಿಯಲ್ಲಿ ನಡೆಯಬಹುದು. ಅಲ್ಲದೇ ಮಂಗಳೂರು ನಗರವು ಸ್ಮಾರ್ಟ್ ಸಿಟಿ ನಗರವಾಗುವ ಸಂಧರ್ಭದಲ್ಲಿ ಸಾವಿರಾರು ಕೋಟಿಯ ಯೋಜನೆಗಳು ನಗರಾಭಿವೃದ್ಧಿಗೆ ಮಂಜೂರಾಗುತ್ತಿರುವಾಗ ಒಂದು ಐಎಎಸ್ ಮುಖ್ಯಾಧಿಕಾರಿ ತುಂಬಾ ಅಗತ್ಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ಈ ಮೊದಲು ಎರಡು ಬಾರಿ ಮಂಗಳೂರು ಮಹಾನಗರಪಾಲಿಕೆಗೆ ಐಎಎಸ್ ಅಧಿಕಾರಿಗಳು ಮುಖ್ಯಾಧಿಕಾರಿಯಾಗಿದ್ದರು. ಆ ಸಂಧರ್ಭದ ಪಾಲಿಕೆಯ ಕಾರ್ಯವೈಖರಿಯೇ ಇದಕ್ಕೆ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು. ಅದೇ ರೀತಿ ವಾರ್ಡ್ ಸಮಿತಿ ರಚಿಸಲು ಈಗಾಗಲೇ ಅನುಮೋದನೆಯಾಗಿದ್ದರೂ ಇನ್ನೂ ವಾರ್ಡ್ ಸಮಿತಿ ರಚನೆಯಾಗಿಲ್ಲ. ವಾರ್ಡ್ ಸಮಿತಿ ರಚನೆಯು ಯಾವುದೇ ಕಾರಣಕ್ಕೂ ಕಾರ್ಪೋರೇಟರ್ಗಳ ನೇತೃತ್ವದಲ್ಲಿ ಖಂಡಿತವಾಗಿಯೂ ನಡೆಯಬಾರದು.ಕಾರ್ಪೊರೇಟರ್ಗಳ ನೇತೃತ್ವದಲ್ಲಿ ಸಮಿತಿ ನಡೆದರೆ ತಮಗೆ ಬೇಕಾದ ಸದಸ್ಯರನ್ನು ಸೇರಿಸಿ ಸಮಿತಿ ರಚಿಸಿ ಗೋಲ್ಮಾಲ್ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಅವರು ಹೇಳಿದರು.ಕಾರ್ಪೋರೇಟರ್ಗಳು ಅದರ ಗೌರವಾದ್ಯಕ್ಷರಾಗಿ ಸಮಿತಿ ಸದಸ್ಯರನ್ನು ವಾರ್ಡಿನ ಜನರು ಆರಿಸುವಂತಾಗಬೇಕು. ನೂತನ ಮುಖ್ಯಾಧಿಕಾರಿಗಳು ಈ ಬಗ್ಗೆ ಖಂಡಿತವಾಗಿಯೂ ಗಮನಹರಿಸುತ್ತಾರೆನ್ನುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು.ಅದೇ ರೀತಿ ನೂತನ ಐಎಎಸ್ ಪದವಿ ಇರುವ ಮುಖ್ಯಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.