ಕರಾಯ (www.vknews.com) : “ಅಸ್ತಿತ್ವ, ಹಕ್ಕು ಯುವ ಜನಾಂಗ ಮರಳಿ ಪಡೆಯುತ್ತಿದೆ” ವೆಂಬ ಧ್ಯೇಯವಾಕ್ಯ ದೊಂದಿಗೆ SKSSF ಕೇಂದ್ರ ಸಮಿತಿ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ರವರ ನೇತೃತ್ವದಲ್ಲಿ ಮುನ್ನಡೆ ಯಾತ್ರೆ ಡಿಸೆಂಬರ್ 30 ರಿಂದ ಜನವರಿ 11 ತಿರುವನಂತಪುರಂ ನಿಂದ ಮಂಗಳೂರು ಇದರ ಪ್ರಚಾರ ಕಾರ್ಯ ಕ್ರಮ ಹಾಗು ಪೋಸ್ಟರ್ ಬಿಡುಗಡೆ SKSSF ಕರಾಯ ಶಾಖೆ ಇದರ ವತಿಯಿಂದ ಕರಾಯ ಬದ್ರಿಯಾ ವಠಾರದಲ್ಲಿ ನಡಯಿತು.
ಸಮಾರಂಭದಲ್ಲಿ ಸ್ಥಳೀಯ ಮುದರ್ರಿಸ್ ಕೆ.ಎಸ್. ಹೈದರ್ ದಾರಿಮಿ, ಜಮಾಅತ್ ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ರೈಟರ್, ಕರಾಯ SKSSF ಕ್ಲಸ್ಟರ್ ಅಧ್ಯಕ್ಷರಾದ ಕೆ.ಯಂ.ಎಸ್ ಫೈಝಿ ಕರಾಯ, SYS ಅಧ್ಯಕ್ಷರಾದ ಮುಹಮ್ಮದ್ ಬಾವ ರೈಟರ್, SKSSF ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಹಾರಿಸ್ ಕೌಸರಿ, ಶಂಸುಲ್ ಹುದಾ ಯೆಂಗ್ ಮೆನ್ಸ್ ಅಧ್ಯಕ್ಷರಾದ ಇ.ಕೆ. ಅಬ್ದುಲ್ ಲತೀಫ್, ಸೇಕುಂಞಿ ಕಡಂಬಿಲ, ಉಮರ್. ಎನ್, ಸಾಬಿತ್ ಕೋಟ್ರಾಸ್, ಅಶ್ರಫ್ ಮುರಿಯಾಳ, ಮುಸ್ತಫ ಲುಲು, ಮುಸ್ತಫ ಕೊಲ್ಲಿ, ಜಮಾಅತಿನ ಹಿರಿಯರು, ಮುತಅಲ್ಲಿಂ ವೃಂದದವರು ಹಾಗು SKSSF ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಗಮದಲ್ಲಿ ಕರಾಯ SKSSF ಶಾಖೆ ಪ್ರಧಾನ ಕಾರ್ಯದರ್ಶಿ ಕೆ.ಯಂ. ಅಬ್ದುಲ್ ಅಝೀಝ್ ಫೈಝಿ ಮುರಿಯಾಳ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.