ಕರ್ನೂರು (www.vknews.com) : ಗ್ರಾಮ ಪಂಚಾಯತ್ ಚುನಾವಣೆ ರಾಜ್ಯಾದ್ಯಂತ ನಡೆಯುವ ಸಂದರ್ಭದಲ್ಲಿ ಕರ್ನೂರಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಸ್ಥಳೀಯ ನಾಯಕರಿಗೆ ಮುಂದಿನ ದಿನಗಳಲ್ಲಿ ಊರಿನಲ್ಲಿ ಆಗಬೇಕಾದ ಬದಲಾವಣೆಯ ವಿವರಗಳನ್ನು ತಿಳಿಸಿದರು.
ಶೈಕ್ಷಣಿಕ, ಆರ್ಥಿಕ,ಕೃಷಿ ಆರೋಗ್ಯ ಕ್ಷೇತ್ರಗಳಲ್ಲಿ ಆಗಬೇಕಾದ ಅಭಿವೃದ್ಧಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಮಾಡಿದ ಪಟ್ಟಿಯನ್ನು ಪ್ರತಿನಿಧಿಗಳಿಗೆ ವಿತರಿಸಿದರು. ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀರಾಮ ಪಕ್ಲೇರ್ ಎಸ್ ಎಸ್ ಎಫ್ ನೀಡಿದಂತಹ ನಿರ್ದೇಶಗಳು ಸ್ವಾಗತಾರ್ಹ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಊರಿನ ಜನರ ಅಭಿಲಾಷೆಯನ್ನು ಈಡೇರಿಸಲು ಸದಾ ಸನ್ನದ್ಧ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಎಂಬಿ, ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಮಹಾಬಲ ಮಾಸ್ಟರ್, ಪ್ರದೀಪ್ ಮುಂತಾದ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಪತ್ರವನ್ನು ನೀಡಿದರು.
ಕರ್ನೂರು ಯೂನಿಟ್ ಅಧ್ಯಕ್ಷ ಸಹದ್ ಕರ್ನೂರ್ ಪ್ರಧಾನ ಕಾರ್ಯದರ್ಶಿ ಫರ್ಸಾನ್, ಜೊತೆ ಕಾರ್ಯದರ್ಶಿ ನಿಯಾಸ್, ಸೆಕ್ಟರ್ ಅಧ್ಯಕ್ಷ ಶಾಹುಲ್ ಹಮೀದ್ ಕಾರ್ಯದರ್ಶಿ ಯುನೈಸ್ ಉಪಸ್ಥರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.