(www.vknews.com) : ಗ್ರಾಮ ಪಂಚಾಯತ್ ಚುನಾವಣೆಗೆ ತೆರೆ ಬಿದ್ದಿದೆ. ಅಭ್ಯರ್ಥಿ ಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯೊಳಗೆ ಭದ್ರವಾಗಿದೆ. ರಾಜಕೀಯ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಫಲಿತಾಂಶ ವನ್ನು ಎದುರು ನೋಡುತ್ತಿವೆ.
ಚುನಾವಣೆ ಯೆಂದರೆ ಕೆಲವರಿಗೆ ಅದೊಂದು ಥ್ರಿಲ್, ಉತ್ಸಾಹ ,ಹುರುಪು. ಇನ್ನು ಕೆಲವರಿಗೆ ಹಕ್ಕು ಚಲಾಯಿಸುವುದರ ಮೇಲಿರುವ ಕರ್ತವ್ಯ ಮಾತ್ರ.ಮತ್ತೆ ಕೆಲವರಿಗೆ ಮತದಾನದ ಮೇಲೆ ನಕಾರಾತ್ಮಕತೆ, ತಾತ್ಸಾರ ಮನೋಭಾವನೆ. ಇವೆಲ್ಲದರ ಮೇಲಾಟದ ಮಧ್ಯೆ ಅರುವತ್ತೋ ಎಪ್ಪತ್ತೋ ಶೇಕಡಾ ಮತದಾನ ವಾಗಿಬಿಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ನಮಗೆ ಬೇರೆಲ್ಲೂ ಸಿಗದ ಕೆಲ ಅಪರೂಪದ ಸಂಗತಿಗಳು ಚುನಾವಣೆಯ ಹೊತ್ತಲ್ಲಿ ಮಾತ್ರ ಸಿಗಬಹುದು.
ನಮ್ಮ ಗ್ರಾಮದ, ನಮ್ಮ ವಾರ್ಡಿನ ಎಲ್ಲ ವರ್ಗದ ವಯಸ್ಕರಾದ ಗರಿಷ್ಟ ಸಂಖ್ಯೆಯ ಜನರನ್ನು ಒಂದೇ ಕಡೆ ನೋಡುವ ಅವಕಾಶ ಚುನಾವಣಾ ಸಮಯದಲ್ಲಿ ಮಾತ್ರವಿರಬಹುದು. ಎಲ್ಲೋ ದೂರದಲ್ಲಿ ಉಳಿದಿರುವ ಸ್ನೇಹಿತರನ್ನು ಭೇಟಿಯಾಗಲು,ಕುಶಲೋಪರಿ ನಡೆಸಲು ಚುನಾವಣೆಯು ಅವಕಾಶ ಕಲ್ಪಿಸುತ್ತದೆ. ಎಲ್ಲೋ ದೂರದೂರಿನಲ್ಲಿ ಕರ್ತವ್ಯ ನಿರ್ವಹಿಸುವ ನಮಗೂ ನಮ್ಮೂರಿನ ಎಲ್ಲ ವರ್ಗದ ಜನರನ್ನು ನೋಡುವ, ಭೇಟಿಯಾಗುವ ಅವಕಾಶ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಸಿಗಬಹುದು. ವರ್ಷಗಳ ಹಿಂದೆ ಭೇಟಿಯಾದ ನಮ್ಮ ಸ್ನೇಹಿತರು,ಬಂಧುಗಳು ಈಗ ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು, ನಮ್ಮೂರಲ್ಲಿ ಎಷ್ಟು ಜನರಿದ್ದಾರೆ ? ನಮ್ಮೂರಿನಿಂದ ಅಗಲಿದವರೆಷ್ಟು? ನಮ್ಮೂರಿಗೆ ಹೊಸದಾಗಿ ಸೇರ್ಪಡೆಗೊಂಡವರಾರು? ಇದೆಲ್ಲವೂ ಚುನಾವಣೆಯ ಸಮಯದಲ್ಲಿ ತಿಳಿದುಕೊಳ್ಳಬಹುದಾಗಿದೆ. ನಮ್ಮೂರಿನ ಸ್ಥಿತಿಗತಿಗಳೇನು, ಏನೇನು ಅಭಿವೃದ್ಧಿ ಗಳಾಗಿವೆ? ಲೋಪದೋಷಗಳೇನು?
ಕುಂದುಕೊರತೆಗಳೇನು? ಬೇಡಿಕೆ ಗಳೇನು ಇವೆಲ್ಲವುಗಳು ಚರ್ಚಿತವಾಗಿ ಮುನ್ನೆಲೆಗೆ ಬರುವುದು ಚುನಾವಣೆಯ ಸಂದರ್ಭಗಳಲ್ಲಿ ಮಾತ್ರವಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಚುನಾವಣೆಯೆಂದರೆ ಆಯಾ ಗ್ರಾಮದ ,ವಾರ್ಡಿನ ಹಕ್ಕುದಾರರ ಒಂದು ಮೇಳವಾಗಿದೆ. ಅದು ಬರುವುದು ಎರಡು ರ್ಷಕ್ಕೊಮ್ಮೆಯೋ, ಐದು ವರ್ಷಕ್ಕೊಮ್ಮೆಯೋ ಆಗಿರಬಹುದು. ಆ ಮೇಳದಲ್ಲಿ ಭಾಗವಹಿಸಿ ಹಕ್ಕು ಚಲಾಯಿಸುವುದರ ಜೊತೆಗೆ ಕೆಲ ಅಪರೂಪದ ಅವಕಾಶಗಳನ್ನೂ ಬಳಸಿಕೊಂಡಂತಾಗುತ್ತದೆ.
ಚುನಾವಣೆಯ ಬಗ್ಗೆ ನಕಾರಾತ್ಮಕತೆಯನ್ನು ಬಿಟ್ಟು ಸಕಾರಾತ್ಮಕವಾಗಿ ಚಿಂತಿಸೋಣ…..
– ರವೂಫ್ ಪೈಂಬೆಚ್ಚಾಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.