ವಿಶ್ವದ ನಾನಾ ದೇಶಗಳಲ್ಲಿರುವ ಎಸ್ಡಿಎಂಸಿ ವಿದ್ಯಾರ್ಥಿಗಳ ಮಹತ್ವದ ಹೆಜ್ಜೆ | ಈಗಾಗಲೇ ಕೋರ್ ಕಮಿಟಿ ರಚನೆ | ಭರದ ತಯಾರಿ
(ವಿಶ್ವ ಕನ್ನಡಿಗ ನ್ಯೂಸ್) : ಉಜಿರೆಯ ಎಸ್ಡಿಎಂಸಿ ಕಾಲೇಜ್ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು) ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸುದೀರ್ಘವಾಗಿ 55 ವರ್ಷಗಳನ್ನು ಪೂರೈಸಿರುವ ಶಿಕ್ಷಣ ಸಂಸ್ಥೆಯು ಸಹಸ್ರಾರು ವಿದ್ಯಾರ್ಥಿಗಳನ್ನು ನಾಡಿಗೆ ವಿದ್ಯಾವಂತರನ್ನಾಗಿ ಮಾಡಿ ಕೊಡುಗೆಯಾಗಿ ನೀಡಿದೆ.
ಹೀಗೆ ಎಸ್ಡಿಎಂಸಿ ಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ತಮ್ಮದೇ ವೃತ್ತಿಯನ್ನು ಮಾಡುತ್ತಾ ಶಿಕ್ಷಣ ಸಂಸ್ಥೆಗೂ ಹೆಸರನ್ನು ತಂದಿದ್ದಾರೆ. ಹೀಗೆ ಎಸ್ಡಿಎಂಸಿ ನಲ್ಲಿ ಶಿಕ್ಷಣ ಪಡೆದ ವಿಶ್ವದ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮದೇ ಕಾಲೇಜಿನ ಹೆಸರಿನಲ್ಲಿ ಸಂಘವೊಂದನ್ನು ರಚಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಈ ಮೂಲಕ ತಾವು ಕಲಿತ ಕಾಲೇಜಿನ ಕೀರ್ತಿಯನ್ನು ವಿಶ್ವಾದ್ಯಂತ ಪಸರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಕ್ಕೆ ವಿದ್ಯಾ ಸಂಸ್ಥೆಯಿಂದಲೂ ಉತ್ತಮ ಬೆಂಬಲ ಸಿಕ್ಕಿದೆ.
ಅಬ್ದುಲ್ ರಝಾಕ್ ನೇತೃತ್ವ: ಎಸ್ಡಿಎಂಸಿ ಕಾಲೇಜ್ ಅಲುಮ್ನಿ NRI ಗ್ಲೋಬಲ್ ಆಸೊಸಿಯೇಷನ್ ಅಬುಲ್ ರಝಾಕ್ ಉಜಿರೆ ಅವರ ಮೂಲಕ ಕಾರ್ಯರೂಪಕ್ಕೆ ಬರುತ್ತಿದೆ. ತಾವು ಕಲಿತ ಕಾಲೇಜಿನ ಆಡಳಿತ ಮಂಡಳಿ ಮತ್ತು ಭೋದಕ ವರ್ಗದೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅಬ್ದುಲ್ ರಜಾಕ್ ಸದ್ಯ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ರಕ್ಷಾ ಹೆಲ್ಪ್ಲೈನ್ ಸರ್ವೀಸಸ್ ಸ್ಪಾಪಿಸಿ, ದುಬೈನಲ್ಲಿ ಕಷ್ಟದಲ್ಲಿ ಸಿಲುಕಿದ ಅನಿವಾಸಿ ಭಾರತೀಯರಿಗೆ ಅವರು ನೆರವು ನೀಡುತ್ತಿದ್ದಾರೆ.
ಕೋರ್ ಕಮಿಟಿ ಸಿದ್ದ: ಎಸ್ಡಿಎಂಸಿ ಉಜಿರೆ ಅಲುಮ್ನ NRI ಗ್ಲೋಬಲ್ ಸಂಘಕ್ಕೆ ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ. ಎಸ್ಡಿಎಂಸಿ ಮಾಜಿ ಪಾಂಶುಪಾಲರು, ಪ್ರಸ್ತುತ ಎಸ್ಡಿಎಂಸಿ ಟ್ರಸ್ಟ್ ಕಾರ್ಯದರ್ಶಿ ಡಾ| ಯಶೋವರ್ಮಾ ಅವರ ಮಾರ್ಗದರ್ಶನದಲ್ಲಿ ಎಸ್ಡಿಎಂಸಿ ಉಜಿರೆ ಪಾಂಶುಪಾಲ ಡಾ| ಸತೀಶ್ಚಂದ್ರ, ಎಸ್ಡಿಎಂಸಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ| ಉದಯಚಂದ ಹಾಗೂ ಎಸ್ಡಿಎಂಸಿ ಉಜಿರೆಯ 1967ಮೊದಲ ಬ್ಯಾಚ್ ನ ಎಸ್ಡಿಎಂಸಿ ಚಾಪ್ಟರ್ ಬೆಂಗಳೂರು ಅಧ್ಯಕ್ಷ H.N.ಹೊಳ್ಳ ಅವರು ಅಲುಮ್ನಿಗೆ ಬೆಂಬಲ ನೀಡಿದ್ದಾರೆ.
ಅಬುಲ್ ರಝಾಕ್, ರಾಜೇಶ್ ಬೆಂಗ್ರಾಡಿ, ರೋಷನ್ ಪಿಂಟೋ ಉಜಿರೆ, ಮೊಹಮ್ಮದ್ ಕುತುಬುದ್ದೀನ್, ಪೂರ್ಣಿಮಾ ಪೂಜಾರಿ, ಉಮೇಶ್ ಭಟ್, ಅಬ್ದುಲ್ ಖಾದರ್, ಚೇತನ ಹೆಗ್ಡೆ ಹಾಗು ದಿನೇಶ್ ಹೆಗ್ಡೆ, ಕಮಿಟಿಯಲ್ಲಿದ್ದಾರೆ.
ದುಬೈನಲ್ಲಿರುವವರು ಒಂದೇ ವೇದಿಕೆಗೆ ಬರುವ ಉದ್ದೇಶದಿಂದ ಸಂಘ ರಚನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇದು ಮೊದಲ ಹೆಜ್ಜೆ, ಮುಂದಿನ ಪ್ರತಿಯೊಂದು ಕಾರ್ಯವೂ ನಮ್ಮನ್ನು ಇನ್ನಷ್ಟು, ಹತ್ತಿರುವಾಗಿಸುತ್ತದೆ. ನಾನು ಅಬ್ದುಲ್ ರಝಾಕ್ ಅವರ ಶ್ರಮವನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ನಿವೆಲ್ಲರೂ ಉತ್ತಮ ಭವಿಷ್ಯವನ್ನು ಹೊಂದಿದ್ದೀರಿ ಎಂದು ನಂಬಿದ್ದೇನೆ.
• ಯಶೋವರ್ಮಾ, ಕಾರ್ಯದರ್ಶಿ, ಎಸ್ಡಿಎಂಸಿ ಟ್ರಸ್ಟ್
95-95ರ ದಶಕದಲ್ಲಿ ಮಕ್ಕಳಿಗೆ ಆರ್ಥಿಕ ಸಾಮರ್ಥ್ಯವಿರಲಿಲ್ಲ. ಈ ವೇಳೆ ಚಾರ್ಟೆಡ್ ಅಕೌಂಟ್ ಕಲಿಯಲು ಹೋಗುವ ನಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಒಂದಿಷ್ಟು ಸಹಾಯ ಮಾಡಿದ್ದೆ, ಅದನ್ನು ನೆನಪಿಟ್ಟುಕೊಂಡ ಕೆಲವರು ನಮ್ಮ ಸಂಪರ್ಕದಲ್ಲಿದ್ದರು. ಕೆಲ ವರ್ಷಗಳ ಹಿಂದೆ ನಾನು ಗಲ್ಫ್ಗೆ ಹೋಗಿದ್ದೆ. ಈ ವೇಳೆ ಎಲ್ಲರೂ ಒಟ್ಟಿಗೆ ಸೇರಲು ಸಂಘವೊಂದನ್ನು ಮಾಡುವಂತೆ ಸಲಹೆ ನೀಡಿದ್ದೆ. ಈಗ ಕಾರ್ಯರೂಪಕ್ಕೆ ಬರುತ್ತಿದೆ.
• ಉದಯಚಂದ್ರ, ವಾಣಿಜ್ಯ ವಿಭಾಗದ ಮುಖ್ಯಸ್ಥರು, ಎಸ್ಡಿಎಂಸಿ ಉಜಿರೆ
ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಇಂದಿನ ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆಯನ್ನು ಮಾಡಿದ್ದೇವೆ. ಅದರ ಮತ್ತೊಂದು ರೂಪವಾಗಿ ಎಸ್ಡಿಎಂಸಿ ಅಲುಮ್ನಿ ಅಸ್ತಿತ್ವಕ್ಕೆ ಬರುತ್ತಿದೆ. ವಿದೇಶದಲ್ಲಿರುವ ಎಲ್ಲ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಲು ಇದೊಂದು ಅವಕಾಶ. ಸಂಘ ಸ್ಥಾಪಿಸುವ ಕಾರ್ಯಕ್ಕೆ ಪ್ರೋತ್ಸಾಹ, ಬೆಂಬಲ ನೀಡುತ್ತಿದ್ದೇವೆ.
• ಸತೀಶ್ಚಂದ್ರ, ಪ್ರಾಂಶುಪಾಲರು, ಎಸ್ಡಿಎಂಸಿ, ಉಜಿರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.