(www.vknews.com) : ಹಯ್ರಾಹೀಲ್ ಅಲೈಹಿ ಸಲಾಂ ಅಲ್ಲಾಹ್ ನ ಅನುಮತಿ ಪಡೆದು ಇದ್ರೀಸ್ ನಬಿಯೊಂದಿಗೆ ಆಕಾಶ ಲೋಕಕ್ಕೆ ಯಾತ್ರೆಗೊಂಡರು .
ಹಾಗೇ ನರಕದ ಹೊರ ಬಾಗಿಲ ಬಳಿ ನಿಂತು ಆ ದ್ವಾರದ ಸಣ್ಣ ಒಂದು ರಂದ್ರದ ಮುಖೇನ ಇದ್ರೀಸ್ ನಬಿಗೆ ನರಕವನ್ನುವೀಕ್ಷಿಸಲು ಅನುವು ಮಾಡಿಕೊಟ್ಟರು.
ಸಬ್ ಹಾನಲ್ಲಃ…ಆ ಘೋರ ಕಠಿಣ ದೃಷ್ಯಕ್ಕೆ ಇದ್ರೀಸ್ ನಬಿ ಯರು ತಲ್ಲಣಗೊಂಡು ಮತಿ ಹೀನರಾಗಿ ನೆಲಕ್ಕುರುಳಿದರು.
ಪ್ರಜ್ಞೆ ಬಂದ ಆನಂತರ ಕೊನೆಯದಾಗಿ ಇನ್ನೂ ಒಂದು ಬೇಡಿಕೆಯನ್ನು ಮಲಕ್ ನ ಮುಂದಿಟ್ಟರು.ಇನ್ನು ಸ್ವರ್ಗವನ್ನು ಒಮ್ಮೆ ನೋಡಲು ಅವಕಾಶ ಕಲ್ಪಿಸಿಕೊಡಲು ಬೇಡಿಕೆ ಇಟ್ಟರು.
ಅಲ್ಲಾಹ್ ನ ಅನುಮತಿಯ ಮೇರೆಗೆ ಮಲಕ್ ಈ ಬೇಡಿಕೆಗೆ ಸ್ಪಂದಿಸಿದರು. ಸ್ವರ್ಗ ಲೋಕಕ್ಕೆ ತೆರಳಿ ತುಸು ವಿಹರಿಸಲು ಮತ್ತೆ ಪುನಃ ಅಶಿಸಿದಾಗ ಮಲಕ್ ಸ್ವರ್ಗದ ಒಳ ಪ್ರವೇಶ ನೀಡಿದರು.ಸ್ವರ್ಗೀಯ ಲೋಕದ ಅತಿಸುಂದರ,ಅತ್ಯಾನಂದಗಳ ಬಗ್ಗೆಗಿನ ಪ್ರಶಂಸೆಯು ವಿವರಣೆಗಳಿಗೆ ನಿಲುಕದು.ಹೀಗೇ ಸ್ವಲ್ಪ ಸಮಯಗಳು ಸರಿದ ನಂತರ ಮಲಕ್ ಇದ್ರೀಸ್ ನಬಿಗೆ ಸ್ವರ್ಗ ದಿಂದ ಈಚೆಗೆ ಮರಳಿರಿ, ಎಂದರು.
ಅಷ್ಟರಲ್ಲೇ ಇದ್ರೀಸ್ ನಬಿಯವರ ಮನ ಪರಿವರ್ತನೆಗೊಂಡಿತ್ತು. “ಮಲಕುಗಳೇ ,ನಾನಿನ್ನೂ ಅಲ್ಲಾಹ್ ನ ಆಜ್ಞೆ ಅಲ್ಲದೆ ಇನ್ಯಾರೆ ಹೇಳಿದರೂ ಸ್ವರ್ಗ ಲೋಕದಿಂದ ಮರಳುವ ಪ್ರಶ್ನೆಯೇ ಇಲ್ಲ”ಎಂಬ ಉತ್ತರವಾಗಿತ್ತು ನಬಿಯವರದ್ದು. ಮಲಕ್ ಅದೆಷ್ಟು ತೋಡಿಕೊಂಡರು ಇದ್ರೀಸ್ ನಬಿ ಹಿಂದಕ್ಕೆ ಮರಳಲೇ ಇಲ್ಲ .ಈ ತರ್ಕದ ಮದ್ಯೆ ಮಧ್ಯಸ್ಥಿಕೆ ವಹಿಸಿಕೊಂಡು ಮತ್ತೋರ್ವರು ಮಲಕ್ ಕೂಡ ಸ್ವರ್ಗದಿಂದ ಹೊರಬರಲು ಕೇಳಿಕೊಂಡರು. ಆದರೂ ಇದ್ರೀಸ್ ನಬಿಯು ಹಿಂದಕ್ಕೆ ಮರಳಿ ಬರಲೇ ಇಲ್ಲ.
“ಕುಲ್ಲುಮನ್ ದಾಹಿಮತುಲ್ ಮೌತ್” ಪ್ರತೀ ಒಂದು ಶರೀರವು ಮರಣದ ರುಚಿ ಸವಿಯಲೇ ಬೇಕಿದೆ ಅನ್ನುವ ಅಲ್ಲಾಹ್ ನ ವಚನ ಪಾಲಿಸಿದ್ದು ಆಗಿದೆ ಅನ್ನುವುದನ್ನು ಆ ಸಂದರ್ಭದಲ್ಲಿ ಅನುಮೋದಿಸಿದರು. ಹೀಗೇ ಇದ್ರೀಸ್ ನಬಿ ಸ್ವರ್ಗ ವಾಸದಲ್ಲಿ ಉಳಿದರು.ಇಂದಿಗೂ ಸ್ವರ್ಗ ವಾಸದಲ್ಲಿ ಇರುವ ನಬಿಯರ ಹೆಸರಿನಲ್ಲಿ ಇದ್ರೀಸ್ ನಬಿ ಅಲೈಃ ಸಲಾಂರ ಹೆಸರಿದೆ.ಆನಂತರ ಮಲಕುಗಳು ಕೂಡ ಇದ್ರೀಸ್ ನಬಿಯರಿಗೆ ಅಲ್ಲಾಹು ಸ್ವರ್ಗ ವಾಸ ಕಲ್ಪಿಸಿ ಕೊಟ್ಟ ಬಗ್ಗೆ ಧೋರಣೆಯಟ್ಟರು ,ಅದೆಷ್ಟೋ ವರ್ಷಗಳಿಂದ ಮಲಕುಗಳಾಗಿರುವ ನಮಗೂ ಈ ಸುವರ್ಣ ಭಾಗ್ಯ ನೀಡಲಿಲ್ಲವೆಂದು ಅಲ್ಲಾಹ್ ನಲ್ಲಿ ಪರಿಭವ ವ್ಯಕ್ತ ಪಡಿಸಿರುವ ಬಗ್ಗೆ ಚರಿತ್ರೆಯ ಸತ್ಯ ವಿಶ್ಲೇಷಣೆಗಳಲ್ಲಿದೆ.
ಹಿಂದಿನ ಭಾಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
ಮುಗಿಯಿತು..
– ಸಾರ ಅಲಿ, ಪರ್ಲಡ್ಕ, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.