ಕೇಳಿದೊಡನೆ ಗಡಗಡ ನಲುಗಿಹೋದೆ ನಾನು ; ದಿನಗೂಲಿ ಮಾಡಿ ಉಣ್ಣುವರ ಗತಿಯೇನು; ಮತ್ತೆ ನೆನಪಾಯಿತು ಆ ಕರಾಳ ದಿನಗಳು; ಕಣ್ಣುತೇವಗೊಂಡು ಹರಿಯಿತು ಕಣ್ಣೀರ ಹನಿಗಳು
ಉಣ್ಣಲು ಅನ್ನವಿಲ್ಲ, ಕೈಯಲ್ಲಿ ಹಣವಿಲ್ಲಾ! ಉರಿದು ಬೂದಿಯಂತಾಗಿರುವ ಮನಸ್ಸೆಲ್ಲಾ! ಮುಗಿಲು ಮುಟ್ಟಿದೆ ನನ್ನವರ ರೋಧನವು; ಮತ್ತೆ ಬದುಕು ಕಟ್ಟುವ ಪರಿಶ್ರಮವು
ಹೊರಗೆ ಹೋದರೆ ಎಲ್ಲವೂ ಬೀಗಾ ಹೊಟ್ಟೆಗೆ ಹಾಕಲು ಸಾದ್ಯವೇ ಬೀಗಾ ಹಸಿವು ಹಸಿವೆಂದು ಮಕ್ಕಳ ಕೂಗೂ ಬಡವರ ನೋವು ಕೇಳುವವರು ಯಾರೂ ?
ಬಗೆಬಗೆಯ ಅಡುಗೆ ಮಾಡಿದರು ಅವರು ಇನ್ನು ಯಾವಾಗ ಅನ್ನವೆಂದು ನಮ್ಮವರು ಉಳ್ಳವನಿಗೆ ಅದು ಸಂತಸದ ದಿನಗಳು ಇಲ್ಲದವನಿಗೆ ಅದು ಕರಾಳ ದಿನಗಳು
ಅನ್ನವ ಕೇಳಿದರೆ ಇಲ್ಲಾ ಎನ್ನುವರು ಸಾಕು ನಾಯಿಗೂ ಬಿರಿಯಾನಿ ಹಾಕುವರು ಹೊರಗೆ ಹೋದರೆ ಆರಕ್ಷಕರು ಭಕ್ಷಕರಂತೆ ಬಡಿದು ಓಡಿಸುವರು
ಮತ್ತೆ ದಾಂಗುಡಿಯಿಡುತ್ತಿದೆ ಆ ಕರಾಳ ದಿನಗಳು ಮತ್ತೆ ಕುಕ್ಕರಿಸುತ್ತಿದೆ ಕಾರ್ಗತ್ತಲೆಂಬ ಆ ಹೊಡೆಬಾಳು ಮನದಲಿ ಮೂಡುತಿದೆ ಹತ್ತು ಹಲವು ತವಕದ ಪ್ರಶ್ನೆಗಳು ಬಡಪಾಯಿಗಳ ಮುಖ ಅರಳಿಸುತ್ತೋ?ಕೆರಳಿಸುತ್ತೋ? ಬಡಜೀವಗಳ ಬದುಕು ಸುಸ್ಥಿರಗೊಳಿಸುತ್ತೋ?ಕ್ಲಿಷ್ಟಕರಗೊಳಿಸುತ್ತೋ?
ಲಾಕ್ ಡೌನ್ !!ಲಾಕ್ ಡೌನ್!!
✍️ಅರ್ಫೀದ್ ಅಡ್ಕಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.