ಬೆಂಗಳೂರು (www.vknews.com) : ಲಾಕ್ ಡೌನ್ ಘೋಷಣೆ ಮಾಡಿ ಬಡ ಮತ್ತು ಕೆಳ ಮದ್ಯಮ ವರ್ಗ ತೀವ್ರ ವಾದ ಆರ್ಥಿಕ ಸಂಕಷ್ಟ ದಲ್ಲಿದೆ.ರಾಜ್ಯ ಸರಕಾರ ಕೂಡಲೇ ಸಂತ್ರಸ್ತರಿಗೆ ಧನ ಪರಿಹಾರ ಮತ್ತು ಆಹಾರ ಪೂರೈಕೆ ಮಾಡಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಯಿದ್ ಪಾಶಾ ಒತ್ತಾಯಿಸಿದ್ದಾರೆ.
ಕಳೆದ ಬಾರಿ ರಾಜ್ಯ ಸರಕಾರ ಅಲ್ಪಸ್ವಲ್ಪ ಪರಿಹಾರ ಬಿಡುಗಡೆ ಮಾಡಿತ್ತು ಆದರೆ ಹೆಚ್ಚಿನ ಸಂತ್ರಸ್ತರಿಗೆ ಅದು ತಲುಪಿರಲಿಲ್ಲ.ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು,ತಲೆ ಹೊರೆ ವ್ಯಾಪರಿಗಳು,ಖಾಸಗಿ ಶಾಲಾ ಸಿಬ್ಬಂದಿ ಗಳು,ಧಾರ್ಮಿಕ ಕೇಂದ್ರದ ಉದ್ಯೋಗಿಗಳು, ರಿಕ್ಷಾ-ಟ್ಯಾಕ್ಷಿ-ಬಸ್ ಮತ್ತಿತರ ಚಾಲಕರು, ಈ ರೀತಿ ವಿವಿಧ ಸ್ತರದ ಜನರು ಈಗ ತೀವ್ರ ಆರ್ಥಿಕ ಸಂಕಷ್ಟ ದಲ್ಲಿದ್ದಾರೆ.ಈ ಮೊದಲಾದ ಹಲವು ವರ್ಗಗಳಿಗೆ ಕಳೆದ 2 ವರ್ಷ ಗಳಿಂದ ಸರಿಯಾದ ವರಮಾನವಿಲ್ಲ.
ಸರಕಾರ ಕೂಡಲೆ ಹೆಚ್ಚು ದಾಖಲೆ ಪತ್ರಗಳಿಗಾಗಿ ಅಲೆದಾಟ ಮಾಡಿಸದೆ ನೇರವಾಗಿ ಅವರ ಖಾತೆಗಳಿಗೆ ಕನಿಷ್ಠ 10 ಸಾವಿರ ರೂಪಾಯಿ ಹಣ ವರ್ಗಾಯಿಸಬೇಕು.ಪಡಿತರ ಚೀಟಿದಾರ ಎ.ಪಿ.ಎಲ್ ಕಾರ್ಡ್ ದಾರರಿಗೂ ಹೆಚ್ಚು ಧಾನ್ಯ ಬಿಡುಗಡೆ ಮಾಡಬೇಕು.ಅಂಗನವಾಡಿ ಕೇಂದ್ರ ಗಳಿಂದ ವಿತರಣೆ ಮಾಡುವ ಪೌಷ್ಟಿಕ ಆಹಾರದ ಮಿತಿಯನ್ನು ಹೆಚ್ಚಿಸಬೇಕು.ವಲಸೆ ಕಾರ್ಮಿಕರಿಗೆ ಉದ್ಯೋಗ ಮತ್ತು ವಸತಿ ಸೌಕರ್ಯ ಕಲ್ಪಿಸಬೇಕು.ಗ್ರಾಮೀಣ ಪ್ರದೇಶದ ಭಾಗಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗಳ ಕಾಮಗಾರಿ ಗಳನ್ನು ತುರ್ತಾಗಿ ಹೆಚ್ಚಿಸಬೇಕು ಎಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.
ಅಕ್ರಮ್ ಹಸನ್ ಮಾದ್ಯಮ ಉಸ್ತುವಾರಿ ಎಸ್.ಡಿ.ಪಿ.ಐ ಕರ್ನಾಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.