(ವಿಶ್ವ ಕನ್ನಡಿಗ ನ್ಯೂಸ್) : ಲಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆ (ಕೋವಿಶಿಲ್ಡ್) ನೀಡಲಾಯಿತು.
ಈ ವೇಳೆ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಶೃತಿ ರವರು ಮಾತನಾಡಿ “ಕೋವಿಶಿಲ್ಡ್ ಲಸಿಕೆ ನೀಡುವ ಪ್ರಕ್ರಿಯೆ ಹಲವು ದಿನಗಳಿಂದ ನಿತ್ಯ ನಿರಂತರವಾಗಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಬಹಳ ಯಶಶ್ವಿಯಾಗಿ, ಲಕ್ಕೂರು ಗ್ರಾಮದ ಪಂಚಾಯಿತಿ ಸಹಕಾರ, ಊರಿನ ಗ್ರಾಮಸ್ಥರ, ಯುವಕರ ಸಹಕಾರದಿಂದ ನಡೆಯುತ್ತಿದೆ. ಇಡೀ ವಿಶ್ವವನ್ನೇ ಮೂಢಿಸಿರುವ ಕೊರೋನಾ ಸೋಂಕಿನ ಮಹಾಮಾರಿಯ ವಿರುದ್ದ ದೇಶವೇ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೋಬ್ಬ ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಲಸಿಕೆ ಹಾಕಿಸಿಕೋಳ್ಳುವುದು ಉತ್ತಮ” ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ PDO ರವರು ಮಾತನಾಡಿ “ಸಾರ್ವಜನಿಕರ ಹಿತದೃಷ್ಟಿ ಹಾಗೂ ವಿಶ್ವದಲ್ಲಿ ಮೂಢಿಬಂದಿರುವ ಕರೋನಾ ಸೋಂಕನ್ನು ತಡೆಗಟ್ಟಲು ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಆ ನಿಟ್ಟಿನಲ್ಲಿ ನಾವು ಸಾರ್ವಜನಿಕರಿಂದ ಆಧಾರ್ ಕಾರ್ಡ್, ಪಡಿತರ ಚೀಟಿ, ಜೆರೆಕ್ಸಾ ಪ್ರತಿ ಪಡೆದು ಹಾಗೂ ವಿವರಗಳನ್ನು ಪಡೆದುಕೊಂಡು ಯಾವುದೇ ಸಮಸೈಗಳಿಲ್ಲದೇ ಕೋವಿಶಿಲ್ಡ್ ಕೋಡುವ ಕಾರ್ಯ ನಡೆಯುತ್ತಿದೆ ಇದ್ದಕ್ಕೆ ಸಹಕಾರ ನೀಡುತ್ತಿರುವ ಎಲ್ಲಾ ಸಮಸ್ತ ಜನತೆಗೆ ಅಭಿನಂದನೆ” ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಯುವ ಉತ್ಸಾಹಿಗಳಾದ ಚೇತನ್ ಗೌಡ ರವರು ಹಾಗೂ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವೆಯ ಮೂಲಕ ಕೆಲಸ ಮಾಡುತ್ತಿರುವ ಯುವಕರು, ಹಾಗೂ ಎಲ್ಲಾರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ ಎಂದು ಊರಿನ ಗ್ರಾಮಸ್ಥರು ಹೇಳುತ್ತಾರೆ.
ಲಸಿಕೆ ನೀಡುವ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹೀರಣ್ಣಯ್ಯ, ಉಮೇಶ್ ಗೌಡ, ಎಲ್.ವಿ.ನಾಗೇಶ್, ಶಿವಾನಂದ, ಆನಂದ್, ಮೊಬೈಲ್ ಶಾಪ್ ಕಾರ್ತಿಕ್, ಶ್ರೀನಿವಾಸ್, ಯುವ ಸಾಮ್ರಾಟ್ ಲಕ್ಷ್ಮೀಕಾಂತ್ (ಗಣ), ಹರೀಶ್.ಎಸ್, ಆಸ್ಪತ್ರೆಯ ಸಹಾಯಕ ಮುರಳಿ, ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.