ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್) : ಒಮ್ಮೆಲೇ ನೋಡಿದಾಗ ಇದು ಮಾರಣಕಟ್ಟೆ 3 ಮೇಳದ ಕೂಡಾಟ ಚಿತ್ರ ಅನ್ನಿಸದೇ ಇರದು . ಇನ್ನಷ್ಟು ಆಳವಾಗಿ ಗಮನಿಸಿದರೇ ಇದು ನೈಜ ಚಿತ್ರ ವಲ್ಲ, ಇದ್ಯಾವುದೋ ಕಲಾವಿದನ ಕುಂಚದಲ್ಲಿ ಅರಳಿದ ಕಲಾಚಿತ್ರ ಎಂದೆನಿಸುತ್ತದೆ . ಖಂಡಿತವಾಗಿಯೂ ಇದು ಕಾಲವಿದನೊಬ್ಬನ ಕೈ ಚಳಕ ದಿಂದ ಅರಳಿದ ಕುಸುಮ !
ಹೌದು !ನಾವಿಂದು ಹೇಳಹೊರಟಿರುವುದು ಯುವ ಅಪ್ಪಟ ಗ್ರಾಮೀಣ ಪ್ರತಿಭೆಯ ಬಗ್ಗೆ ಹೆಸರು ಸಿದ್ದಾರ್ಥ್ ! ವಯಸ್ಸು ಇನ್ನೂ 23 ದಾಟಿಲ್ಲ ಪ್ರತಿಭೆ ಇಷ್ಟರಲ್ಲೇ ಅಗಾಧವಾಗಿ ಬೆಳಿದಿದೆ. ಈ ಕಲಾಕೃತಿಯ ನಿರ್ಮಾತೃ ಈತನೇ . ಎಸ್ ! ಕೆಲೆಗೆ ಯಾವುದೇ ವಯಸ್ಸಿನ ಹಂಗಿಲ್ಲ .ನೈಪುಣ್ಯತೆ ಮತ್ತು ಕೌಶಲ್ಯತೆಗೆ ಬೆಲೆ ಕಟ್ಟಲಾಗುವುದಿಲ್ಲ.,ದೇವರು ನೀಡಿದ ವರದಾನ .ಅದನ್ನು ರೂಢಿಸಿ ಕೊಂಡು ಹೋಗುವ ಅವರಲ್ಲಿರುವ ಶ್ರಮ ,ಕ್ರತು ಶಕ್ತಿ, ಜಾಣ್ಮೆ,ತಾಳ್ಮೆ ,ಗುರಿಗೆ ಪ್ರೋತ್ಸಾಹ ಬೆಂಬಲ ನೀಡಬೇಕು ಅಷ್ಟೇ !
ಯಾರೀ ಸಿದ್ದಾರ್ಥ್ ? : ಕುಂದಾಪುರ ತಾಲೂಕಿನ ಜನ್ಸಾಲೆ ಗ್ರಾಮದ ರಾಮ ಪೂಜಾರಿ ಹಾಗೂ ಜಾನಕಿ ಪೂಜಾರಿಯವರ ಪುತ್ರ . ಪ್ರಾಥಮಿಕ ವಿಧ್ಯಾಭ್ಯಾಸವನ್ನು ಜನ್ಸಾಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ,8 ರಿಂದ 10, ಸಿದ್ದಾಪುರ ಪ್ರೌಢ ಶಾಲೆಯಲ್ಲಿ ಹಾಗೂ ಪಿಯುಸಿಯನ್ನು ಹೊಸಂಗಡಿ ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿ, ಹೇರಾಡಿ ಬಾರ್ಕೂರಿನಲ್ಲಿ ಐ ಟಿ ಐ ಕೋರ್ಸ್ ನ್ನು ಪೂರ್ಣ ಗೊಳಿಸಿದ ಬಳಿಕ ,ಪ್ರಸ್ತುತ ಸಿದ್ದಾಪುರದ ಚಾತ್ರ ಇಂಟರ್ಪ್ರೈಸೆಸ್ ನಲ್ಲಿ ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಆಗಿರುವ ಸಿದ್ದಾರ್ಥ್ ಪೈಂಟಿಗ್ ಜೊತೆಗೆ ಡಿಜಿ ಆಪರೇಟಿಗ್ ಮಾಡುವ ಹವ್ಯಾಸವನ್ನು ಬೆಳಿಸಿಕೊಂಡಿದ್ದಾನೆ .
ಕಮಲಶಿಲೆ ,ಹಾಲಾಡಿ ಹಾಗೂ ಮಾರಣಕಟ್ಟೆ ಮೇಳಗಳ ಆಕೃತಿಗಳು ಈಗಗಾಲೇ ಹೊರಹೊಮ್ಮಿದ್ದೂ ,ತೀರಾ ಅವುಗಳನ್ನು ಹೋಲುವಂತೆ ಈತನ ಕೈಚಳಕವು ಕೆಲಸಮಾಡಿದೆ . ಕಮಲಶಿಲೆ ದೇವಸ್ಥಾನದ ಒಳ ಪ್ರವೇಶಿಸುವಂತೆ ಸುತ್ತು ಪೌಳಿಯ ಸಮೀಪ ಬಲ ಭಾಗದಲ್ಲಿ ಕಮಲಶಿಲೆ ಮೇಳದ ರಂಗಸ್ಥಳ, ಶ್ರೀ ದೇವಿ ಮಹಾತ್ಮೆಯಲ್ಲಿನ ಒಂದು ಸನ್ನಿವೇಶದ ಮೋಡೆಲ್ ,ಮೇಳದ ಬಸ್ ,ಯಕ್ಷಗಾನ ಚೌಕಿ ಸೇರಿದಂತೆ ಇನ್ನಿತರ ಮೇಳದ ಪರಿಕರ ಗಳು ಕಾಣ ಸಿಗುತ್ತದೆ. ಅದೇ ತರಹನಾದ ಮಾರಣಕಟ್ಟೆ ದೇವಸ್ಥಾನದಲ್ಲೂ , ಸಹಾ ಈತನಿಂದ ನಿರ್ಮಿಸಲ್ಪಟ್ಟ ಈ ನಮೂನೆಯ ಕಲಾಕೃತಿ ಮನ ಸೆಳೆಯುತ್ತಿದೆ.
ಇತ್ತೀಚಿಗೆ ಬಾರಿ ವೈರಲ್ ಆಗುತ್ತಿರುವ ಮಾರಣ ಕಟ್ಟೆ ಮೇಳದ ಯಕ್ಷಗಾನ ರಂಗಸ್ಥಳದ ಮೊಡೆಲ್ ನಲ್ಲಿ ಖ್ಯಾತ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ,ಚೆಂಡೆಯಲ್ಲಿ ಸೃಜನ್ ಹಾಲಾಡಿ ,ಮದ್ದಳೆಯಲ್ಲಿ ಸುನಿಲ್ ಭಂಡಾರಿಯವರ ರಂಗಸ್ಥಳದ ರಂಗಮಂಚದಲ್ಲಿ ವಿರಾಜಮಾನರಾಗಿರುವ ಭಾವಚಿತ್ರಗಳ ಕಲಾಕ್ರತಿ ನೋಟ ಕಣ್ಮನ ಸೆಳೆಯುತ್ತಿದೆ .
ಮದುವೆ ಸ್ಟೇಜ್ , ಡಬ್ಲಿ.ಡಬ್ಲಿ.ಈ.ಸ್ಟುಡಿಯೋ ,ಕ್ರಿಕೆಟ್ ಸ್ಟೇಡಿಯಂ, ಮನೆಯ /ಕಟ್ಟಡಗಳ ಡಿಸೈನ್ ಗಳು ತಯಾರಿ ಹಂತದಲ್ಲಿವೆ. ಬಿಡುವಿನ ವೇಳೆಯಲ್ಲಿ ಸ್ವಂತ ಪರಿಶ್ರಮದಿಂದ ರೂಪಿಸುವ ಸಿದ್ದಾರ್ಥ್ ಯಾವುದೇ ಗುರುಗಳನ್ನು ಹೊಂದಿಲ್ಲ . ಸ್ರಜನಾತ್ಮಕ ಶ್ರದ್ದಾ ಗುರಿಯನ್ನು ತನ್ನ ಒಡಲಿನಲ್ಲಿ ಒತ್ತಿಟ್ಟುಕೊಂಡು ಸ್ನೇಹಿತರ, ಹಿತೈಷಿಗಳ, ಮನೆಯವರ ಪ್ರೋತ್ಸಾದಿಂದ ಮುಂದುರಿಸುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ ಸಿದ್ದಾರ್ಥ್ . ಇಂತಹ ಅರಳುವ ಪ್ರತಿಭೆಗಳಿಗೆ ಒಂದಷ್ಟು ಬೆಂಬಲ ,ಸಹಾಯ ,ಪ್ರಶಂಸೆ ಸಿಕ್ಕರೇ ಮೂಲೆ ಸೇರಲಾರರು . !
“ಯಾವುದೇ ಪ್ರತಿಫಲಾಕ್ಷೆಯನ್ನು ಇಟ್ಟುಕೊಳ್ಳದೇ ನನ್ನ ಹವ್ಯಾಸಕ್ಕಾಗಿ ಇದರಲ್ಲಿ ಮಗ್ನ ನಾಗಿದ್ದೇನೆ ಸ್ನೇಹಿತರುಗಳ ಬೆಂಬಲ ,ಹಲವರ ಉತ್ತಮ ಪ್ರತಿಕ್ರೀಯೆ ದೊರಕುತ್ತಿರುವುದರಿಂದ ಇನ್ನಷ್ಟು ,ಮತ್ತಷ್ಟು ಮಾಡಬೇಕೆನ್ನುವ ತುಡಿತಕ್ಕೆ ದುಡಿತಕ್ಕೆ ಪ್ರೇರಣೆಯಾಗಿದೆ ” -ಸಿದ್ದಾರ್ಥ್ ಜನ್ಸಾಲೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.