ಲಕ್ಕೂರು (ವಿಶ್ವ ಕನ್ನಡಿಗ ನ್ಯೂಸ್): ಕೋಲಾರ ಜಿಲ್ಲ್ಲೆ ಮಾಲೂೂರು ತಾಲ್ಲೂಕಿನ ಲಕ್ಕೂರು, ಜಿಲ್ಲೆಯಲ್ಲಿ ವಿಶೇಷವಾದ ಹೆಸರುಗಳಿಸಿದೆ. ಅದೇ ರೀತಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅನೇಕ ಮಂದಿ ಸಾಧಕರ ತವರೂರು ಲಕ್ಕೂರು. ಇಂತ ಸ್ಥಳದ ಹೃದಯಭಾಗದಲ್ಲಿನ ಬಸವಣ್ಣನ ದೇವಾಲಯದ ಮುಂಭಾಗದಿಂದ ಪ್ರಾರಂಭವಾಗಿ ಲಕ್ಕೂರು ಸಾರ್ವಜನಿಕ ಗ್ರಂಥಾಲಯದವರೆಗೆ ರಸ್ತೆ ಸಂಪೂರ್ಣ ಹಳ್ಳಗಳಿಂದ ಕೂಡಿ, ಗುಂಡಿಗಳಲ್ಲಿ ಮಳೆಯ ನೀರು ತುಂಬಿ ಕೆಸರುಮಯವಾಗುವ ಮೂಲಕ ರಸ್ತೆಯ ಹದಿಬದಿಯಲ್ಲಿನ ಜನರಿಗೆ ಮಜ್ಜನ ಮಾಡಿಸುವ ಹಾಗೇ ಕಾರು, ಬಸ್, ಬೈಕ್ ಸವಾರರು ಓಡಾಡುತ್ತಾರೆ. ಸದಾ ಪಾದಚಾರಿಗಳಿಗೆ ಈ ರಸ್ತೆಯಲ್ಲಿ ಓಡಾಡುವುದೇ ದೊಡ್ಡ ತಲೆನೋವಿನ ಸಂಗತಿ ಆಗಿದೆ. ಈ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರಿಗೆ ರಸ್ತೆಯಲ್ಲಿ ಹೋಗುವುದೇ ಒಂದು ಸವಾಲಿನ ಕೆಲಸವಾಗಿದೆ.
ಇದೇ ರಸ್ತೆಯ ಹದಿಬದಿಯಲ್ಲಿ ತರಕಾರಿ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳು ತಮ್ಮ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುವುದಕ್ಕೂ ಬಹಳ ಸಮಸೈ ಆಗಿದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಮಾಡುತ್ತೆ, ಪಂಚಾಯಿತಿಯ ಕಾರ್ಯಚಟುವಟಿಕೆಗಳಿಗೆ ಹೋಗುವ ಮಂದಿ, ಗ್ರಂಥಾಲಯ, ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ ಇತರೆ ಚಟುವಟಿಕೆಗಳಿಗೆ ಓಡಾಟ ಮಾಡುವ ಸಾರ್ವಜನಿಕರಿಗೆ ಈ ರಸ್ತೆ ಬಹಳ ಅವಶ್ಯವಾಗಿದೆ. ಸಂಚಾರ ಮಾಡುವ ಜನರಿಗೆ ಅಪಾಯವಾಗುವ ಮುನ್ನಾ ಎಚ್ಚೆತ್ತು ಕೂಡಲೇ ಈ ರಸ್ತೆಗೆ ಮುಕ್ತಿ ನೀಡುವ ಮೂಲಕ ಸಾರ್ವಜನಿಕರ ಸಮಸೈಗೆ ತಾಲ್ಲೂಕಿನ ಲೋಕೋಪಯೋಗಿ ಇಲಾಖೆ ಸ್ಪಂದಿಸಿಬೇಕಾಗಿರುವುದು ಆದ್ಯ ಕರ್ತವ್ಯ ಎನ್ನುತ್ತಾರೆ ಲಕ್ಕೂರು ಗ್ರಾಮದ ಸಾರ್ವಜನಿಕರು.
ಸುರಿಯುವ ಮಳೆಯ ಪರಿಣಾಮ ಈ ರಸ್ತೆ ಬಹಳಷ್ಟು ಹದೆಗೆಟ್ಟಿದ್ದು ಈ ಒಂದು ಹಳ್ಳ-ಕೊಳ್ಳಗಳಿಂದ ಕೂಡಿರುವ ರಸ್ತೆಗೆ ಡಾಂಬರಿನ ಮುಖ ತೋರಿಸುವ ಮೂಲಕ, ಪಕ್ಕಾ ರಸ್ತೆ ಮಾಡಿ ಸಾವಿರಾರು ಮಂದಿ ಒಡಾಟ ಮಾಡುವ ಹೃದಯಭಾಗದ, ಲಕ್ಕೂರಿನ ಪ್ರಮುಖ ರಸ್ತೆಯನ್ನು ಸಿದ್ದಪಡಿಸಿ ಸಾರ್ವಜನಿಕರಿಗೆ ಸಮರ್ಪಣೆ ಮಾಡಬೇಕೆಂಬ ವಿನಂತಿಯನ್ನು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ, ತಾಲ್ಲೂಕಿನ ಶಾಸಕರು ತಮ್ಮ ಚಿತ್ತವನ್ನು ಈ ಕಡೆ ಹರಿಸಿ ಉತ್ತಮ ರಸ್ತೆಗೆ ಕಾಯಕಲ್ಪ ನೀಡಬೇಕೆಂದು ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಒತ್ತಾಯಿಸುತ್ತಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.