(www.vknews.com) : ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ವತಿಯಿಂದ, ಅನಿಯಂತ್ರಿತ ಇಂಧನ ಬೆಲೆ ಏರಿಕೆಯ ವಿರುದ್ಧ ಸೈಕಲ್ ಜಾತದ ಮೂಲಕ ಕೆ.ಸಿ ರೋಡ್ ಜಂಕ್ಷನ್’ನಿಂದ ತಲಪಾಡಿ ಪೆಟ್ರೋಲ್ ಬಂಕ್’ವರೆಗೆ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರಸ್ತುತ ಪ್ರತಿಭಟನೆಯನ್ನು ಸೆಕ್ಟರ್ ಅಧ್ಯಕ್ಷರಾದ ಇಬ್ರಾಹಿಂ ಕೆ ಎಚ್ ಕೆ. ಸಿ. ರೋಡ್ ಅವರ ನೇತೃತ್ವದಲ್ಲಿ ಮುನೀರ್ ಸಖಾಫಿ ಕೆ ಸಿ ರೋಡ್ ಉಸ್ತಾದರ ದುಆ ದೊಂದಿಗೆ ಪ್ರಾರಂಭಿಸಲಾಯಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅನ್’ವೀಝ್ ಕೆ. ಸಿ. ರೋಡ್ ಸ್ವಾಗತ ಗೈದರು ಎಸ್ ವೈ ಎಸ್ ಕರ್ನಾಟಕ. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಉಸ್ತಾದರು ಇಂಧನದ ಪ್ರಾಮುಖ್ಯತೆಯ ಕುರಿತು ಜನಜಾಗೃತಿ ನಡೆಸುವ ಮೂಲಕ ಮುಖ್ಯ ಪ್ರಭಾಷಣ ನಡೆಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್. ದ.ಕ ವೆಸ್ಟ್ ಜಿಲ್ಲೆಯ ಕಾರ್ಯದರ್ಶಿಗಳಾದ ಹಮೀದ್ ತಲಪಾಡಿ ಹಾಗೂ ಉಳ್ಳಾಲ ಡಿವಿಷನ್ ನಾಯಕರಾದ ಮುಸ್ತಾಫ ಕೆ.ಸಿ ನಗರ, ಮುಝಮ್ಮಿಲ್ ಕೆ.ಸಿ.ರೋಡ್, ಮುಹಮ್ಮದ್ ಇಲ್ಯಾಸ್ ಪಿಲಿಕೂರು ಸೆಕ್ಟರ್ ನಾಯಕರಾದ ಆಶಿಕ್ , ಅಸ್ಗರ್ ಹಾಗೂ ನೌಶಾದ್ ಉಪಸ್ಥಿತರಿದ್ದರು. ಕೊನೆಯಲ್ಲಿ ಸೆಕ್ಟರ್ ಕಾರ್ಯದರ್ಶಿ ಇಲ್ಯಾಸ್ ಪಿಲಿಕೂರು ಧನ್ಯವಾದ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.