(www.vknews.com) : ನರಗುಂದ ನವಲಗುಂದ ರೈತ ಬಂಡಾಯದ 41ನೇ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ವಾಪಾಸಾಗುತ್ತಿದ್ದಂತೆ ನಿನ್ನೆ (ಜುಲೈ 22) ಬೆಳಿಗ್ಗೆ 5.30ಕ್ಕೆ ನಡೆದ ಕಾರು ಅಪಘಾತದಲ್ಲಿ ಹಿರಿಯ ರೈತ ನಾಯಕ ಜಿ.ಟಿ.ರಾಮಸ್ವಾಮಿ ನಿಧನರಾದ ಸುದ್ದಿ ತಿಳಿದು ಆಘಾತಗೊಂಡ ಬೆನ್ನಿಗೇ ಅದೇ ಕಾರಿನಲ್ಲಿದ್ದು ಆಸ್ಪತ್ರೆ ಸೇರಿದ್ದ ರಾಮಣ್ಣ ಚೆನ್ನಪಟ್ಟಣ ಕೊನೆಯುಸಿರೆಳೆದ ವಾರ್ತೆ ಮಧ್ಯಾಹ್ನ ತಲುಪಿತು.
ಸಂಜೆಯಾಗುತ್ತಲೇ ಮೊನ್ನೆ ಕೊಪ್ಪಳ ಚಲೋ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ್ದ ಹಿರಿಯ ಮುಂದಾಳು ವಿಠ್ಠಪ್ಪ ಗೋರಂಟ್ಲಿ ನಿಧನರಾಗುತ್ತಾರೆ. ರಾತ್ರಿ 1.30ರ ಹೊತ್ತಿಗೆ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಮಂಗಳೂರಿನ ಮಿತ್ರ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ಯುವ ನಾಯಕ ಅಮೀರ್ ತುಂಬೆ ನಮ್ಮನ್ನಗಲಿದ್ದಾರೆ.
ಸಾವು ಕದ ತಟ್ಟುತ್ತಿದೆ. ಸರದಿಯ ಸಾಲಲ್ಲಿ ನಾವಿದ್ದೇವೆ. ಪೆಗಾಸಸ್’ಗಿಂತಲೂ ಪರಿಣಾಮಕಾರಿಯಾಗಿ ಕಣ್ಣುಗಳು ಕದ್ದು ನೋಡುವುದನ್ನೂ, ಹೃದಯಗಳು ಬಚ್ಚಿಡುವುದನ್ನೂ… ಪ್ರತಿಕ್ಷಣ ದಾಖಲಿಸುವ ಸಾಪ್ಟ್ ವೇರ್ ನಮ್ಮೆರಡು ಬುಜಗಳಲ್ಲಿ ಅಳವಡಿಸಲಾಗಿದೆ.
ಜವಾಬ್ದಾರಿಗಳ ಪ್ರಜ್ಞೆಯೊಂದಿಗೆ ಬದುಕೋಣ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಪಣತೊಡೋಣ. ಮುಂದಿನ ತಲೆಮಾರುಗಳು ಗೌರವ ಮತ್ತು ಹೆಮ್ಮೆಯಿಂದ ನಮ್ಮ ಹೆಸರೆತ್ತುವಂತಹ ಪುಣ್ಯ ಕಾರ್ಯಗಳನ್ನು ಮಾಡುತ್ತಿರೋಣ. ನಗು ನಗುತಾ ಸಾಯೋಣ. ನಾವು ಸತ್ತ ದಿನ ಜಗತ್ತು ನೋವಿನಿಂದ ಅಳಲಿ.
ಉಮರ್ ಯು.ಹೆಚ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.