ಉಡುಪಿ (www.vknewes.com) ; ಸುಮಾರು 25 ವರ್ಷಗಳ ಹಿಂದೆ ಸೌದಿ ಅರೇಬಿಯಾದ ಅಲ್ ಕೊಬಾರ್ನಲ್ಲಿ ಪ್ರಾರಂಭಗೊಂಡ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಸಮಾಜ ಸೇವೆಗಾಗಿ ಪ್ರಥಮವಾಗಿ ಪ್ರಾರಂಭಿಸಿದ ಮೂಳೂರಿನ ಮರ್ಕಝ್ ತಅïಲೀಮಿಲ್ ಇಹ್ಸಾನ್ ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ರಂಗದಲ್ಲಿ ಸ್ತುತ್ಯರ್ಹ ಸೇವೆ ಸಲ್ಲಿಸುತ್ತಿದೆ. ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ರಂಗಗಳಿಗೆ ವ್ಯಾಪಿಸಲಿಕೋಸ್ಕರ ಸಂಸ್ಥೆಗಾಗಿ ವಿದೇಶಗಳಲ್ಲಿ ದುಡಿಯುತ್ತಿರುವ ಕಾರ್ಯಕರ್ತರು ಒಟ್ಟು ಸೇರುವ “ಗಲ್ಪ್ಮೀಟ್-21” ಎಂಬ ಕಾರ್ಯಕ್ರಮವನ್ನು ಮೂಳೂರು ಮರ್ಕಝ್ ಕ್ಯಾಂಪಸಿನಲ್ಲಿ ದಿನಾಂಕ 14.09.2021 ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 4.30ರ ವರೆಗೆ ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಲ್ರವರು ಅಧ್ಯಕ್ಷತೆ ವಹಿಸಲಿದ್ದು ಕಾರ್ಯಾಧ್ಯಕ್ಷರಾದ ಬಹು ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರಾದ ಅಸ್ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ ಹಾಗೂ ಕೋಶಾಧಿಕಾರಿ ಹಾಜಿ ದಾವೂದು ಕಜೆಮಾರ್ ಸಹಿತ ಕೇಂದ್ರ ಸಮಿತಿ ಹಾಲಿ ಹಾಗೂ ಮಾಜಿ ನೇತಾರರು, ಮರ್ಕಝ್ ಆಡಳಿತ ಸಮಿತಿ ಸದಸ್ಯರು ಮತ್ತು ಜಿ ಸಿ ಸಿ ಯಲ್ಲಿ ಸಂಸ್ಥೆಗಾಗಿ ದುಡಿದ ಡಿಕೆಎಸ್ಸಿಯ ನೂರಾರು ಸದಸ್ಯರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಸದಸ್ಯರ ನೋಂದಣಿ, ಸಭಾ ಕಾರ್ಯಕ್ರಮ, ಸನ್ಮಾನ ಸಮಾರಭ, ಅಲ್ ಇಹ್ಸಾನ್ ಶರೀಅತ್ ಕಾಲೇಜು ಪ್ರಾಂಶುಪಾಲರಾಗಿದ್ದ ತಾಜುಲ್ ಪುಖಹಾ ಬೇಕಲ್ ಉಸ್ತಾದ್ ಹಾಗೂ ನಮ್ಮನ್ನು ಅಗಲಿದ ಡಿಕೆಯಸ್ಸಿಯ ಕಾರ್ಯಕರ್ತರ ಅನುಸ್ಮರಣೆ ಹಾಗೂ ದುಆ ಮಜ್ಲಿಸ್, ಸಂಸ್ಥೆಯ ವಿದ್ಯಾರ್ಥಿಗಳ ವಿವಿಧ ಕಾರ್ಯಕ್ರಮಗಳು ಮತ್ತು ಸಮಾರೋಪ ಸಮಾರಂಭ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
ಡಿಕೆಎಸ್ಸಿಯ ಊರಿನಲ್ಲಿರುವ ಎಲ್ಲಾ ಗಲ್ಪ್ ಕಾರ್ಯಕರ್ತರೂ ಸರಿಯಾದ ಸಮಯಕ್ಕೆ ಮೂಳೂರಿನ ಡಿಕೆಯಸ್ಸಿ ಮರ್ಕಝ್ ಕ್ಯಾಂಪಸಿಗೆ ಬಂದು ಸಹಕರಿಸಬೇಕೆಂದು ಸಂಸ್ಥೆಯ ಮ್ಯಾನೇಜರ್ ಮೌಲಾನ ಮುಸ್ತಪಾ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.