ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ ಬಸ್ ನಿಲ್ದಾಣದಲ್ಲಿ ಕರ್ನಾಟಕ ಪ್ರಜಾ ವೇದಿಕೆಯ ಅಡಿಯಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ರವರ ಜನ್ಮದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಜಾ ವೇದಿಕೆ ರಾಜ್ಯ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ “ಶಂಕರ್ ನಾಗ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಸಿನಿಮಾಗಳ ಮೂಲಕ ಕನ್ನಡ ಚಿತ್ರಪ್ರಿಯರ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಶಂಕರ್ ನಾಗ್ ಕಣ್ಮರೆಯಾಗಿ 3 ದಶಕಗಳೇ ಕಳೆದಿವೆ. ಆದರೆ ಕನ್ನಡಿಗರಲ್ಲಿ ಹೆಮ್ಮೆಯ ಶಂಕ್ರಣ್ಣನ ನೆನಪು ಹಸಿರಾಗೆ ಇದೆ. ಇದು ಅವರ ಮೇಲಿನ ಪ್ರೀತಿಯ ಸಂಕೇತ” ಎಂದರು.
ಈ ಸಂದರ್ಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪ್ರಜಾವೇದಿಕೆ ರಾಜ್ಯ ಗೌರವ ಅಧ್ಯಕ್ಷರು ಹಾಗೂ ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ರಾಮಮೂರ್ತಿ ರವರು ಮಾತನಾಡಿ “ತನ್ನ ವಿನೂತನ ಚಿಂತನೆಗಳಿಂದ, ಅದ್ಭುತ ನಟನೆಯಿಂದ, ಕ್ರಿಯಾಶೀಲತೆಯಿಂದ ಚಿತ್ರರಂಗಕ್ಕೆ ಹೊಸ ರೂಪ ನೀಡಿ ನಮ್ಮೊಂದಿಗೆ ನೆನಪಾಗಿ ಉಳಿದಿರುವ ಮೇರು ನಟ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಅವರ ಸಾಧನೆಗಳನ್ನು ನೆನೆಯೋಣ” ಎಂದರು.
ಕಾರ್ಯಕ್ರಮದಲ್ಲಿ ಪ್ರಜಾವೇದಿಕೆ ತಾಲ್ಲೂಕು ಅಧ್ಯಕ್ಷ ಪ್ರಸನ್ನ ಕುಮಾರ್, ಸಬ್ ಇನ್ಸಪೆಕ್ಟರ್ ಅನೀಲ್ ಕುಮಾರ್, ಶಿವಾರಪಟ್ಟಣ್ಣ ಶಿವು, ಲವ-ಕುಶ, ನವೀನ್, ಟೈಗರ್ ಚಂದ್ರು, ಆಟೋ ಘಟಕದ ಪದಾಧಿಕಾರಿಗಳು ಹಾಗೂ ಪ್ರಜಾವೇದಿಕೆಯ ಮುಖಂಡರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.