ಕೆ.ಎಸ್.ಗಣೇಶ್
ಕೋಲಾರ (ವಿಶ್ವಕನ್ನಡಿಗ ನ್ಯೂಸ್): ರೈತ , ದಲಿತ , ಕಾರ್ಮಿಕ ಚಳವಳಿಗಳಿಗೆ ಹೆಸರಾಗಿದ್ದ ಕೋಲಾರ ಜಿಲ್ಲೆಯ ನೆಲದಿಂದ ಅಹಿಂದ ಚಳವಳಿ ಯನ್ನು ಆರಂಭಿಸಿದ್ದ ಪ್ರಮುಖ ನೇತಾರ ಆರ್.ಎಲ್.ಜಾಲಪ್ಪ , ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಲಿತ , ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ರಾಜಕೀಯ ಸ್ಥಾನಮಾನ ಪಡೆದುಕೊಳ್ಳುವಲ್ಲಿ ವಿಫಲ ರಾಗುತ್ತಿದ್ದರು.
ಇದಕ್ಕೆ ಈ ವರ್ಗಗಳ ನಡುವೆ ಸಮನ್ವಯತೆ ಇಲ್ಲದಿ ರುವುದೇ ಪ್ರಮುಖ ಕಾರಣವೆಂದು ಹಿರಿಯ ರಾಜಕಾರಣಿ ಜಾಲಪ್ಪ ಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸಕ್ರಿಯ ರಾಜಕಾರಣ ಮುಕ್ತಾಯ ಗೊಳಿಸಿದ ನಂತರ ಕೋಲಾರದಲ್ಲಿ ವೈದ್ಯಕೀಯ ಕಾಲೇಜುಸ್ಥಾಪಿಸಿ ಆರೋಗ್ಯ ಕ್ಷೇತ್ರದತ್ತ ಗಮನಹರಿಸಿದ್ದರೂ , ಜಾಲಪ್ಪರಿಗೆ ರಾಜಕೀಯವಾಗಿ ದಲಿತ , ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಒಗ್ಗೂಡಬೇಕೆಂಬ ಕನಸು ಇತ್ತು.
ಈ ಮೂಲಕ ರಾಜಕೀಯವಾಗಿ ಕ್ರಾಂತಿ ಮಾಡಬಹುದೆಂಬ ಗುರಿಯೂ ಇತ್ತು. ಇದೇ ಗುರಿಯೊಂದಿಗೆ ಕೋಲಾರ ಜಿಲ್ಲೆಯ ದಲಿತ , ರೈತ ಚಳವಳಿ ಹಾಗೂ ವಿವಿಧ ಪಕ್ಷಗಳ ಯುವ ಮುಖಂಡರ ಮೂಲಕ ಆಹಿಂದ ಚಳವಳಿಗೆ ಸ್ಥಾಪನೆಗೆ ಜಾಲಪ್ಪನವರು ಚಾಲನೆ ನೀಡಿ ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದರು.
ಈಗಿನ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ , ದಲಿತ ಚಳವಳಿಯ ಲಕ್ಷ್ಮೀ ಪತಿ ಕೋಲಾರ , ಸಿ.ಎಂ ಮುನಿಯಪ್ಪ , ಸಿ.ಎಸ್ ದ್ವಾರಕಾನಾಥ್ ಇತರರ ಮೂಲಕ ಕೋಲಾರ ನೆಲದಲ್ಲಿ ಆಹಿಂದ ಚಳವಳಿ ಹುಟ್ಟಲು ಕಾರಣಕರ್ತರಾಗಿದ್ದರು. ಅಹಿಂದ ಕಾರ್ಯಕ್ರಮದ ಬೆನ್ನಿಗೆ ನಿಂತು ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದರು.
ಕೋಲಾರ ನೆಲದಲ್ಲಿ ದಲಿತ , ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗೂಡುವ ಅಹಿಂದ ಚಳವಳಿ ಆರಂಭವಾಗಿದ್ದು , ನಾಡಿನಲ್ಲಿ ರಾಜಕಾರಣವನ್ನು ಗುತ್ತಿಗೆ ಹಿಡಿದಂತೆ ಅನುಭವಿಸುತ್ತಿದ್ದ ವರ್ಗಗಳಲ್ಲಿ ನಡುಕವನ್ನೇ ಹುಟ್ಟಿಸಿತ್ತು. ಈಗಲೂ ಅನೇಕ ರಾಜಕಾರಣಿಗಳು ಅಹಿಂದ ಹೆಸರು ಕೇಳಿದರೆ ಬೆವರುತ್ತಾರೆ.
ಕೋಲಾರದಲ್ಲಿ ಅಭೂತಪೂರ್ವವಾಗಿ ಆರಂಭವಾಗಿದ್ದ ಆಹಿಂದ ಮೊದಲ ಸಮಾವೇಶದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾಡಿನ ಸಾಕ್ಷಿಪ್ರಜ್ ದೇವನೂರು ಮಹದೇವ ನೆರವೇರಿಸಿದ್ದರು. ಈ ಮೂಲಕ ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಆರಂಭವಾಗಿತ್ತು.
ರಾಜ್ಯ ರಾಜಕಾರಣದಲ್ಲಿ ಹೊಸರಕೆಯು ಶುರುವಾಗುವಂತಾಗಿತ್ತು . ಸಿದ್ದರಾಮಯ್ಯರಿಗೆ ನೆರವು ಕೋಲಾರ ನೆಲದಲ್ಲಿ ಆರಂಭಿಸಿದ್ದ ಅಹಿಂದ ಚಳವಳಿ ಒಂದು ಹಂತದ ನಂತರ ಸ್ಥಗಿತಗೊಂಡಿತ್ತು. ಮುಂದೇನು ಎಂಬುದರ ಆರಿವಿರಲಿಲ್ಲ . ಆದರೆ , ಸಿದ್ದರಾಮಯ್ಯನವರು ಜೆಡಿಎಸ್ನಿಂದ ಹೊರಬಿದ್ದ ನಂತರ ದಾವಣೆಗೆರೆ ಹಾಗೂ ರಾಜ್ಯದ ಮೂರು ನಾಲ್ಕು ಕಡೆ ಅಹಿಂದ ಸಮಾವೇಶವನ್ನು ಸಂಘಟಿಸುವ ಮೂಲಕ ಹಿಂದುಳಿದವರು , ದಲಿತರು ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟಿಗೆ ನಾಯಕತ್ವವನ್ನು ವಹಿಸಿಕೊಂಡಿದ್ದರು. ಈ ವರ್ಗಗಳ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದರು. ಈ ಕಾರಣ ದಿಂದಲೇ ಸಿದ್ದರಾಮಯ್ಯ ನವರು ಕಾಂಗ್ರೆಸ್ ಸೇರ್ಪಡೆಯಾಗಿ ಮುಖ್ಯ ಮಂತ್ರಿಯಾಗಿ ಯಶಸ್ವಿಯಾಗಲು ಕೋಲಾರದಲ್ಲಿ ಜಾಲಪ್ಪರ ಸಹಕಾರದಿಂದ ಆರಂಭವಾಗಿದ್ದ ಚಳವಳಿ ಸಹಕಾರಿಯಾಗಿತ್ತು. ಅಹಿಂದ ಚಳವಳಿಯ ಸಂಪೂರ್ಣ ಲಾಭವನ್ನು ಪಡೆದ ರಾಜಕಾರಣಿಯು ಸಿದ್ದರಾಮಯ್ಯನವರೇ ಆಗಿದ್ದಾರೆ.
ವರ್ತೂರು ಪ್ರಕಾಶ್ ಬಳಕೆ ಸಿದ್ದರಾಮಯ್ಯರ ನಂತರ ಆಹಿಂದ ಆಸ್ತ್ರವನ್ನು ಕೋಲಾರದ ನೆಲದಲ್ಲಿ ಮತ್ತೇ ಪ್ರಯೋಗಿಸಿ ಶಾಸಕರಾದವರು ವರ್ತೂರು ಪ್ರಕಾಶ್ , ವರ್ತೂರು ಭಾಗದಲ್ಲಿ ಗ್ರಾಪಂ ಸದಸ್ಯರಾಗಿ , ಜಿಪಂ ಸದಸ್ಯರಾಗಿ ರಾಜಕೀಯ ಮಾಡುತ್ತಿದ್ದ ವರ್ತೂರು ಪ್ರಕಾಶ್ ಕೋಲಾರ ರಾಜಕಾರಣಕ್ಕೆ ಸಮಾಜಸೇವೆ ಮೂಲಕ ಕಾಲಿಟ್ಟಿದ್ದರು.
ಕೋಲಾರದಲ್ಲಿ ಶುರುವಾಗಿ ಮರೆತು ಹೋಗಿದ್ದ ಅಹಿಂದ ಚಳವಳಿಗೆ ಮತ್ತೆ ಜೀವ ಕೊಟ್ಟರು. ಈ ಮೂಲಕ ಕೋಲಾರದಲ್ಲಿ 2007 ರಲ್ಲಿ ಐತಿಹಾಸಿಕ ಎನ್ನುವಂತೆ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಸೇರಿಸಿ ಆಹಿ೦ದ ಸಮಾವೇಶವನ್ನು ಮಾಡಿ ಆದೇ ಸಿದ್ದರಾಮಯ್ಯರನ್ನು ಕರೆಯಿಸಿ ಉದ್ಘಾಟಿಸಿದ್ದರು.
ಇದಾದ ನಂತರ ಎದುರಾಗಿದ್ದ 2008 ರ ವಿಧಾನಸಭಾ ಚುನಾವಣೆಯಲ್ಲಿ ವರ್ತೂರು ಪ್ರಕಾಶ್ ಶಾಸಕರಾಗಿ ಆಯ್ಕೆಯಾಗಿ , ಸಚಿವರೂ ಆಗಿದ್ದರು. ಆಹಿಂದ ಅಲೆಯಲ್ಲಿಯೇ ಮತ್ತೊಮ್ಮೆ ಚುನಾವಣೆ ಗೆದ್ದಿದ್ದರು. ಆದರೆ , ಆ ನಂತರ ಅಹಿಂದ ವರ್ಗಗಳ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ವರ್ತೂರು ಪ್ರಕಾಶ್ ವಿಫಲರಾಗಿ ಚುನಾವಣೆಯಲ್ಲೂ ಸೋತರು.
ಹಿಂದುಳಿದ ವರ್ಗಗಳ ನಾಯಕತ್ವ ರಕ್ಷಕ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದರು. ಜಾಲಪ್ಪ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಿದ್ದರು. ಎರಡೂ ಜಿಲ್ಲೆಗಳಲ್ಲಿ ಯಾವುದೇ ಯುವ ರಾಜಕಾರಣಿ ದಲಿತ , ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳಿಂದ ಚುನಾವಣೆಗೆ ಸ್ಪರ್ಧಿಸುವುದು ಹಾಗೂ ಸ್ವ ಪ್ರೇರಣೆಯಿಂದ ಅಧಿಕಾರ ಗಿಟ್ಟಿಸಿಕೊಂಡಿದ್ದರೆ , ಜಾಲಪ್ಪ ಅವರನ್ನು ಕರೆದು ಮಾರ್ಗದರ್ಶನ ಮಾಡುತ್ತಿದ್ದುದ್ದಲ್ಲದೆ ಅವರಿಗೆ ಅಗತ್ಯ ಆರ್ಥಿಕ ಚೈತನ್ಯವನ್ನು ನೀಡುವ ಮೂಲಕ ಬೆನ್ನು ತಟ್ಟುತ್ತಿದ್ದರು.
ತಮ್ಮ ಕೊನೆಗಾಲದವರೆವಿಗೂ ಆಹಿಂದ ನಾಯಕತ್ವ ಉಳಿಸಲು ಜಾಲಪ್ಪ ಪ್ರಯತ್ನ ಪಡುತ್ತಲೇ ಇದ್ದರು. ಅಹಿಂದ ಸಂಘಟನೆಯ ಯಾವುದೇ ಅವಕಾಶವನ್ನು ಅವರು ಮರೆಯುತ್ತಿರಲಿಲ್ಲ. ಆದರೆ , ಶುಕ್ರವಾರ ತಾವೇ ನಿರ್ಮಾಣ ಮಾಡಿದ ಆಸತ್ರೆಯಲ್ಲಿ ಆಹಿಂದ ಅಗಗಣ್ಯ ನಾಯಕ ಆರ್.ಎಲ್.ಜಾಲಪ್ಪ ಕೊನೆಯುಸಿರೆಳೆ ದಿರುವುದು ಅಹಿಂದ ನಾಯಕತ್ವಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.