(www.vknews.in) : ಅಲ್ಲಾಹನಿಗೆ ಭಯಪಟ್ಟು ದೀನಿಗಾಗಿ ಸೇವೆಯನ್ನು ಮಾಡಿ ಯಾರ ಮುಂದೆಯೂ ತಲೆ ಬಾಗದೆ ಹಾಗೂ ಎದೆಗುಂದದೆ ಈ ಜಗತ್ತಿದೆ ವಿದಾಯ ಹೇಳಿದ ಆದೆಷ್ಟೋ ಮಹದಿಯರ ಚರಿತ್ರೆಯನ್ನು ನಾವುಗಳು ಕೇಳಿದ್ದೇವೆ, ಹಾಗೂ ಪುಸ್ತಕದಲ್ಲಿ ಓದಿರುತ್ತೇವೆ. ಅದರಲ್ಲಿ ಒಂದು ಮಹದಿ ಇಡೀ ಜಗತ್ತಿಗೆ ಉದಾಹರಣೆಯಾದವರು, ಅಲ್ಲಾಹನ ಜೀತಾಳುವಾಗೇ ಜೀವನ ನಡೆಸಿದವರು, ನಾಳೆ ಪ್ರವಾದಿ (صلى الله عليه وسل) ಧರ್ಮ ಪತ್ನಿಯಾಗಲಿರುವವರು, ನನಗೆ ನನ್ನ ಧರ್ಮ ಮುಖ್ಯ ಎಂದು ಹೇಳಿ ಗಂಡನಿಂದ ಬರೀ ಕಷ್ಟಗಳನ್ನು ಸಹಿಸಿ ಬಾಳಿ ಬದುಕಿದವರು, ಗಟ್ಟಿ ಮುಟ್ಟಾದ ಇಮಾನಿನ ವ್ಯಕ್ತಿ ಯಾರೊಂದಿಗೆ ತನ್ನ ಧರ್ಮವನ್ನು ಬಿಟ್ಟು ಕೊಡದೆ ಕಾಪಾಡಿದವರು, ಅಲ್ಲಾಹನ ಪರಿಶುದ್ಧವಾದ ಕುರ್ಆನಿನಲ್ಲಿಯೂ ಸಹ ಹೆಸರನ್ನು ಹೇಳದೆ ಇರುವ ಮಹದಿ ಹಾಗೂ ಗಂಡನ ಮೂಲಕ ಅವರ ಪತ್ನಿಯೆಂದು ಕುರ್ಆನಿಲ್ಲಿ ಉಲ್ಲೇಕಿಸಿರುವ ಆಸೀಯಾ ಬೀವಿ(رضي الله عنه).
ಯಾರಾಗಿದ್ದಾರೆ ಆಸಿಯಾ ಬೀವಿ رضي الله عنه ಎಂಬುವುದು ಪ್ರತಿಯೊಂದು ಮುಸ್ಲಿಂ ಸಹೋದರಿಯರು ಹಾಗೂ ತಾಯಂದಿರ ಅರಿಯಬೇಕಾದ ವಿಷಯವಾಗಿದೆ. ಅಲ್ಲಾಹನ ಧರ್ಮಕ್ಕೆಬೇಕಾಗಿ ಈ ಜಗತ್ತಿಗೆ ವಿದಾಯ ಹೇಳಬೇಕಾಯಿತು. ಯಾಕೆಂದರೆ ಅವರು ಅಂದಿನ ಕಾಲದಲ್ಲಿ ನಾನೇ ಈ ಜಗತ್ತನ್ನು ಸೃಷ್ಟಿಸಿದವನು ಹಾಗೂ ತೋಲು ಬಲ ಹಾಗೂ ಗಟ್ಟಿ ಮುಟ್ಟಾದ ಶರೀರವನ್ನು ಹೊಂದಿರುವವನು, ಹಾಗೂ ನಾನೇ ಎಲ್ಲಾ ಎಂದು ಕೂಗಾಡುತ್ತಿದ್ದ ಅಕ್ರಮಿಯಾದ ರಾಕ್ಷಸನಾದ ಪಿರೌನ್ ನ ಧರ್ಮ ಪತ್ನಿಯಾಗಿದ್ದರು ಆಸಿಯಾ ಬೀವಿ(رضي الله عنه).
ಇಂದಿನ ಕೆಲವು ಅನಾಚಾರದ ಹಿಂದೆ ಬಿದ್ದು ಸಮುದಾಯಕ್ಕೆ ದಕ್ಕೆ ಭರಿಸುವ ಹಾಗೇ ವರ್ತಿಸುವ ಸಹೋದರಿಯರೇ, ಅಲ್ಲಾಹನ ದೀನನ್ನು ಮರೆತು ಬೇಕಾಬಿಟ್ಟಿಯಾಗಿ ಉಪಯೋಗಸುತ್ತಿರುವ ಸಹೋದರಿಯರೇ ಅರಿಯಲೇಬೇಕಾದ ವಿಷಯವಾಗಿದೆ, ನಿಮ್ಮಂತಹ ಸಹೋದರಿಯಾದ ಅಲ್ಲಾಹನ ದೀನಿನ ನಿಯವನ್ನು ಚಾಚು ತಪ್ಪದೆ ಪಾಲಿಸಿ ಗಂಡ ಹೇಳಿದ ಇಸ್ಲಾಮಿನ ವಿರುದ್ಧವಾದ ನಿಯಮವನ್ನು ಪಾಲಿಸು, ನಾನು ಹೇಳಿದ ಹಾಗೇ ನೀನು ನಡೆಯಬೇಕೆಂದು ತಾಕೀತು ಮಾಡಿದಾಗ, ಅದನ್ನು ನಿರ್ಲಕ್ಷಿಸಿ ಗಂಡನ ಮುಂದೆನೇ ನನ್ನನ್ನು ಹಾಗೂ ನಿಮ್ಮನ್ನು ಸೃಷ್ಟಿಸಿದವನ್ನು ಒಬ್ಬನಿದ್ದಾನೆ ಎಂದು ನೇರವಾಗಿ ಹೇಳಿದ ಮಹದಿಯಾಗಿದ್ದಾರೆ ಆಸೀಯಾ ಬೀವಿ(رضي الله عنه).
ಗಂಡನ ಮಾತನ್ನು ನಿರ್ಲಕ್ಷಿಸಿದ ಕಾರಣಕ್ಕಾಗಿ ದಾಂಪತ್ಯ ಜೀವನದ ಸುಖವನ್ನು ಸಹ ಅನುಭವಿಸದ, ಹದಿಹರೆಯ ಪ್ರಾಯವಾದ, ಜಳ ಝಳಪಿಸುವ ರಕ್ತದ ದೇಹವನ್ನು ಹೊಂದಿದ ಸ್ವಂತ ಪತ್ನಿ ಎಂಬುವುದನ್ನು ಸಹ ನೋಡದೆ ಹಲವು ಕಾಲಗಳ ಕಾಲ ನಾನ ರೀತಿಯಲ್ಲಿ ಶಿಕ್ಷಿಸುತ್ತಾನೆ ಫಿರೌನ್. ಇಂದೂ ಹಿಜಾಬ್ ನ ವಿಷಯದಲ್ಲಿ ಧರ್ಮದ ನಿಯಮನ್ನು ಬದಲಾಯಿಸಲು ಹೊರಟ ಜನರು ಅರಿಯಲೇ ಬೇಕಾಗಿದೆ, ತಾವುಗಳು ಯಾರ ಅನುಯಾಯಿಗಳ ವಿರುದ್ಧವಾಗಿದೆ, ನಿಮ್ಮ ಸಮರ ಎಂಬುವುದು ಅರಿಯದೇ ಹೋಯ್ತೇ ತಮಗೆ ಎಂಬುವುದು ಸಹ ಅರಿವಾಗುತ್ತಿಲ್ಲ.
ಹಾಗಾದರೆ ತಿಳಿಸುವೆ ಸರಿಯಾಗಿ ಮನದಟ್ಟು ಮಾಡಿ ಓದಿರಿ ಯಾಕೆಂದರೆ ಪ್ರತಿಯೊಬ್ಬರಿಗೂ ಸಹ ಧರ್ಮ ಎಂಬುವುದು ಪ್ರಮುಖವಾಗಿದೆ. ಅದು ಯಾವ ಧರ್ಮವಾದರೂ ಸರಿಯೇ, ಹಾಗೂ ಇಸ್ಲಾಂ ಧರ್ಮ ಕಲಿಸುತ್ತದೆ ನೀನು ಯಾವ ಧರ್ಮವನ್ನು ಧೂಷಿಸದಿರು, ನಿನಗೆ ಧೂಷಿಸುವ ಹಕ್ಕು ನಿನ್ನನ್ನು ಸೃಷ್ಟಿಸಿರುವ ನಾನು ಎಂದರೆ ಅಲ್ಲಾಹು ನೀಡಿಲ್ಲವೆಂದು ಹೇಳುತ್ತಾನೆ. ಅವರವರ ಆಚರಣೆ ಅವರಿಗೆ ಮುಖ್ಯವಾಗಿದೆ, ಆಚರಣೆಯ ವಿಷಯದಲ್ಲಿ ಯಾರು ಸಹ ಗೊಂದಲವನ್ನು ಸೃಷ್ಟಿಸದಿರೆ,
ದಯವಿಟ್ಟು. ವಿಷಯಕ್ಕೆ ಬರುತ್ತೇನೆ ಎಲ್ಲಾ ತರಹದ ನೋವುಗಳನ್ನು ಸಹಿಸಿ ಮುಸ್ಲಿಂ ಆದ ಅಲ್ಲಾಹನ ಹಾಗೂ ಮೂಸ(رضي الله عنه)ಮೇಲೆ ವಿಶ್ವಾಸವನ್ನಿಟ್ಟ ಮಹದಿ ಆಸಿಯಾ(رضي الله عنه) ರಿಗೆ ಪತಿಯಾದ ಫಿರೌನ್ ತಾಕಿತು ಮಾಡುತ್ತಾನೆ, ಕೊನೆಯಾದಾಗಿ ಅವರ ಮೇಲಿರುವ ನಂಬಿಕೆಯನ್ನು ಬಿಡು ಇಲ್ಲಾಂದ್ರೆ ನಿನ್ನನ್ನು ಬಾಳಿ ಬದುಕಲು ಬಿಡುವುದಿಲ್ಲವೆಂದು ಬೆದರಿಕೆ ಹಾಕಿದರೂ ಸಹ, ಇದನ್ನೆಲ್ಲಾ ಕೇಳಿದ ಮಹದಿಯವರ ಉತ್ತರ ಕೇಳಿದರೆ ಖಂಡಿತವಾಗಿಯೂ ತಾವೆಲ್ಲರೂ ಚಿಂತಿತರಾಗುವಿರಿ, ಯಾಕೆಂದರೆ ಅವರಿಗೆ ಧರ್ಮದ ಮೇಲೆ ಇದ್ದ ಪ್ರೀತಿ ಹಾಗೂ ಜವಾಬ್ದಾರಿ ಎಷ್ಟು ಇದೆ ಎಂದು ಅರಿವಾಗುತ್ತದೆ. ಅವರ ಉತ್ತರ ಇದಾಗಿತ್ತು ನನ್ನನ್ನು ಕೊಂದರು ಪರ್ವಾಗಿಲ್ಲ ಆದರೆ ನನ್ನ ಧರ್ಮವನ್ನು ಬಿಟ್ಟು ಬರಲು ತಯಾರಿಲ್ಲ ಎಂಬ ವಿಷಯವನ್ನು ಪತಿಯ ಮುಂದಿಟ್ಟಾಗ ಕೋಪಿತನಾದ ಪಿರೌನ್ ಚಿತ್ರಹಿಂಸೆ ನೀಡಲು ಶುರು ಮಾಡುತ್ತಾನೆ, ದಿನಗಳು ಕಳೆದಾಗೆ ಚಿತ್ರಹಿಂಸೆ ಮೀತಿ ಮೀರಲು ಶುರುವಾಗುತ್ತದೆ, ಕೊನೇಗೆ ಪತ್ನಿಯನ್ನು ಕೊಲ್ಲುವಂತಹ ತೀರ್ಮಾಣಕ್ಕೆ ಮುಂದಾಗುತ್ತಾನೆ. ಯಾಕಾಗಿ ಪತ್ನಿಯನ್ನು ಕೊಲ್ಲುತ್ತಾನೆಂದರೆ ಇಸ್ಲಾಂ ಧರ್ಮ ಸ್ವಿಕರಿಸಿದ ಒಂದೇ ಒಂದು ಕಾರಣಕ್ಕಾಗಿ ಆಗಿದೆ.
ನಮ್ಮ ಕೆಲವು ಸಹೋದರಿಯರೇ ಇಂದಿನ ನಿಮ್ಮ ನಡೆತ ಯಾವ ರೀತಿಯಿದೆ ಎಂಬುವುದು ತಾವುಗಳೇ ಒಮ್ಮೆ ಚಿಂತಿಸಿ, ಆಸಿಯಾ ಬೀವಿ(رضي الله عنه)ಯಾರೆಂದು ಅರಿವಿದೆಯಾ..?, ನೋಡಲು ಸೌಂದರ್ಯವತಿಯಾದವರು ರಾಜನ ಪತ್ನಿಯಾದವರು ಇಷ್ಟ ಬಂದ ಹಾಗೇ ಬಾಳಿ ಬದುಕಬಹುದಾಗಿತ್ತು. ಆದರೆ ಈ ಜಗತ್ತಿನಲ್ಲಿ ನೆಂಟರಾಗೆ ಬಂದಿರುವ ನಾನು ನನಗೆ ಅಲ್ಲಾಹನ ಧರ್ಮ ಬಿಟ್ಟಿರುವ ಯಾವುದೇ ರೀತಿಯ ಸುಖ ಬೇಡ, ನನಗೆ ನಾವು ವರ್ಷನು ಗಟ್ಟಲೆ ಜೀವಿಸಬೇಕಾದ ಪರಲೋಕದಲ್ಲಿ ಸುಖ ಸಿಕ್ಕರೆ ಸಾಕು ಎಂದು ಹೇಳಿದಂತಹ ಮಹದಿ ಆಸೀಯಾ ಬೀವಿ (رضي الله عنه) ಅವರನ್ನು ಕೊನೇಗೆ ಕೊಲ್ಲುವಂತಹ ತೀರ್ಮಾನಕ್ಕೆ ಬರುತ್ತಾನೆ. ರಾಕ್ಷಸನಾದ ಫಿರೌನ್ ಹಲು ರೀತಿಯಲ್ಲಿ ಪರೀಕ್ಷಿಸಿದರು ಪತ್ನಿ ಯಾವುದೇ ತೀರ್ಮಾನವನ್ನು ಬದಲಾಯಿಸಲು ಒಪ್ಪದ ಕಾರಣ ಕಬ್ಬಿಣ ರಾಡ್ ಅನ್ನು ಬಿಸಿ ಮಾಡಿ ಇಡೀ ಶರೀರಕ್ಕೆ ಇಡುತ್ತಾನೆ.
ಆದರೂ ಯಾವುದೇ ತೀರ್ಮಾಣದಲ್ಲಿ ಬದಲಾವಣೆ ಕಾಣದ ಕಾರಣ ಕೋನೇಗೆ ಅದೇ ಬಿಸಿ ಇರುವ ರಾಡ್ ಅನ್ನು (ಗುಹೆಸ್ಥಾನ) ಕ್ಕೆ ಇಡುತ್ತಾನೆ, ಪಟ ಪಟ ನರಳಾಡಿ ಕೋನೇಗೆ ಮರಣ ವೇದನೆಯನ್ನು ಅನುಭವಿಸುವ ಸಮಯದಲ್ಲಿ ಜಗದೊಡೆಯನಾದ ಅಲ್ಲಾಹನ ಬಳಿ ಮಹದಿ ಆಸೀಯಾ ಬೀವಿ(رضي الله عنه)ಕಣ್ಣೀರಿನೊಂದಿಗೆ ಯಾಚಿಸುವುದು ಏನೆಂದರೆ ಯಾ ಅಲ್ಲಾಹ ನನಗೊಂದು ನಿನ್ನ ಸ್ವರ್ಗ ಲೋಕದಲ್ಲಿರುವ ಒಂದು ಭಾಗ ಅದೆಷ್ಟೋ ಜನರು ಆಸೆ ಪಡುವಂತಹ ವಾಸಸ್ಥಳ ವರ್ಣಿಸಲು ಅಸಾಧ್ಯವಾದದ್ದು, ಅನುಗ್ರಹವಾದ ಸ್ಥಳ, ನೋಡಲು ಕಣ್ಣುಗಳೇ ಸಾಲದ ಸ್ಥಳ, ಅವರ್ಣನೀಯಾದ ಸ್ವರ್ಗ ಎಂಬ ಸ್ಥಳದಲ್ಲಿ ನನಗೊಂದು ಸಣ್ಣದಾದ ಸ್ಥಳವನ್ನು ನೀಡು ಯಾ ನಿನಗೆ ಬೇಕಾಗಿ ಇಲ್ಲಿಯ ಅರಮನೆಯನ್ನು ಉಪೇಕ್ಷಿಸಿದೆ, ನಿನಗೆ ಬೇಕಾಗಿ ಕೊಟಿಗಟ್ಟಲೆ ಆಸ್ತಿಯನ್ನು ಹೊಂದಿದ ಫಿರೌನ್ ನ ಸುಖವನ್ನು ನಿರ್ಲಕ್ಷಿಸಿದೆ, ಅವನ ಯಾವುದೇ ಒಂದು ವಿಷಯಕ್ಕೆ ನಾನು ಅವನಿಗೆ ತಲೆ ಬಾಗಲಿಲ್ಲ. ಯಾಕೆಂದರೆ ನಿನ್ನನ್ನು ಭಯಪಟ್ಟೆ ಒಂದು ಭಯವಿಲ್ಲದಿದ್ದರೆ ನನಗೆ ಬೇಕಾದ ರೀತಿಯ ಸುಖ ಜೀವನವನ್ನು ಅನುಭವಿಸಬಹುದಿತ್ತು ಹಾಗೂ ಇನ್ನೂ ಅದೆಷ್ಟೋ ಕಾಲ ಜೀವನ ಜೀವನ ನೆಡೆಸಬಹುದಿತ್ತು, ಯಾಕೆಂದರೆ ಈ ಊರಿನ ಚಕ್ರವರ್ತಿ ಪತ್ನಿಯಾಗಿದ್ದೇನೆ, ಈ ಊರಿನ ರಾಣಿ, ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿದವನ ಧರ್ಮ ಪತ್ನಿ, ಬೇಕಾದ ರೀತಿಯಲ್ಲಿ ನನಗೆ ಸುಖ ಅನುಭವಿಸಬಹುದು. ಆದರೆ ಇದನ್ನೆಲ್ಲಾವನ್ನು ನೀಷೇಧಿಸುತ್ತೇನೆ ಯಾಕೆಂದರೆ ನನಗೆ ನೀನು ಮುಖ್ಯ ಹಾಗೂ ನಿನ್ನನ್ನು ನೋಡುವ ಬಯಕೆ ಅಲ್ಲಾಹ ಮರಣವಿಲ್ಲದ ಪರಲೋಕದಲ್ಲಿ ಸುಖವಾಗಿ ಜೀವಿಸಬೇಕು. ಮರಣವಿಲ್ಲದ ಸ್ವರ್ಗ ಲೋಕದಲ್ಲಿ ಜೀವಿಸಬೇಕು ಹಾಗೂ ನನಗೆ ಎಲ್ಲಾರೂ ಭಯಪಟ್ಟು ಜೀವಿಸುವ ಪರಲೋಕದಲ್ಲಿ ರಕ್ಷೆಯನ್ನು ಹೊಂದಬೇಕೆಂಬ ಒಂದೇ ಒಂದು ಕಾರಣಕ್ಕೆ ಬೇಕಾಗಿ ಅವನ ಎಲ್ಲಾ ರೀತಿಯ ನಿಯಮವನ್ನು ನಿಷೇಧಿಸಿ ಸಣ್ಣ ವಯಸ್ಸಿನಲ್ಲಿ ಅವನಿಗೆ ಶರಣಾಗುತ್ತೇನೆ, ಯಾ ಅಲ್ಲಾಹ ನಾಳೆ ನಿನ್ನ ಪರಲೋಕಕ್ಕೆ ಬಂದರೆ ನಾನು ಮರಣದ ಕೊನೇಯ ಘಟ್ಟದಲ್ಲಿರುವುದು, ಅಲ್ಲಾಹ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ ನೀನು ನನ್ನನ್ನು ಕೈ ಬಿಡದರು ಅಲ್ಲಾಹ ಬದಲಾಗಿ ನೀನು ನನಗೊಂದು ಸಣ್ಣದಾದ ಬೀಡನ್ನು ನೀಡು ಯಾ ಅಲ್ಲಾಹ ಎಂದು ಹೇಳಿ ಕೊನೇಗೆ ಶಹಾದತ್ ಕಲಿಮಾ ಉಚ್ಚರಿಸಿ ಈ ಜಗತ್ತಿಗೆ ವಿದಾಯವನ್ನು ಹೇಳುತ್ತಾರೆ ಮಹದಿ ಆಸೀಯಾ ಬೀವಿ(رضي الله عنه).
ಇವರ ತರಹದ ಜೀವನ ತಾನೇ ನಾವೆಲ್ಲರೂ ಜೀವಿಸಬೇಕಾಗಿರುವು, ಇಂದಿನ ಕೆಲ ಸಹೋದರಿಯರು ಮೆಚ್ಚುಗೆ ಸಿಗಬೇಕಾಗಿ ತನ್ನ ಸೌಂದರ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ತೋರ್ಪಡಿಸವ ಸಹೋದರರಿಯರೇ, ನಿಮ್ಮ ತರಹದ ಸಹೋದರಿಯಾಗಿದ್ದರು ಆಸೀಯಾ ಬೀವಿ. ತನ್ನ ದೇಹದ ಯಾವುದೇ ಭಾಗವನ್ನು ಅನ್ಯರಿಗೆ ತೋರ್ಪಡಿಸಲಿಲ್ಲ, ಜನರಿಂದ ಮೆಚ್ಚುಗೆ ಅಗತ್ಯವಿಲ್ಲ ಬರೀ ಅಲ್ಲಾಹ ಸ್ವರ್ಗ ಸಿಗಬೇಕಾಗಿ ಸ್ವಂತ ಪತಿಯನ್ನು ಉಪೇಕ್ಷಿಸುತ್ತಾರೆ, ಅವನಿದ್ದಲೇ ಬಹಳಷ್ಟು ಚಿತ್ರಹಿಂಸೆಯನ್ನು ಸಹಿಸಿ ಕೊನೇಗೆ ಈ ಜಗತ್ತಿಗೆ ವಿದಾಯವನ್ನು ಹೇಳುತ್ತಾರೆ. ಇಂತಹ ಮಹದಿಯರ ಅನುಯಾಯಿಗಳಾಗಿದ್ದೀರಿ, ಸಹೋದರಿಯರೇ ತಾವುಗಳೆಲ್ಲರು ಅದೆಷ್ಟೋ ವರ್ಷಗಳ ಹಿಂದೆ ಜೀವಿಸಿದವರಾಗಿದ್ದಾರೆ ಅವರು, ಆದರೂ ಅವರ ಇತಿಹಾಸ ಇವಾಗಲೂ ಇದೆ. ಯಾಕೆಂದರೆ ಅವರೂ ದೀನಿಗಾಗಿ ಜೀವಿಸಿದರು.
ಹಾಗೂ ನಮ್ಮೆಲ್ಲರ ಸಹೋದರಿಯಾದ ಹಿಜಾಬ್ ನ ಸಮಯದಲ್ಲಿ ಮುಸ್ಕಾನ್ ಎಂಬ ಸಹೋದರಿ ಶತ್ರುಗಳ ಮುಂದೆ ಯಾರಿಗೂ ಭಯಪಡದೆ ನೇರವಾಗಿ ಅಲ್ಲಾಹನನ್ನು ನೆನಪಿಸುತ್ತಾಳೆ, ಅದಾಗಿದೆ ನಮ್ಮ ಸಮುದಾಯಕ್ಕೆ ಮಾದರಿ, ಅದಾಗಿದೆ ಧೈರ್ಯ, ನಮ್ಮ ಜೀವನ ಇನ್ನೊಬ್ಬರಿಗೆ ಮಾದರಿಯಾಗಿಲಿ..
✍️ ಅನೀಸ್ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
ಮಾಶಾ ಅಲ್ಲಾಹ್ ಲೇಖನ ಮನಮುಟ್ಟುವಂತಿದೆ. رضی اللہ عنہ ಎಂಬಲ್ಲಿ رضی اللہ عنہا ಎಂದು ತಿದ್ದುಪಡಿ ಮಾಡಲು ಮರೆಯದಿರಿ. ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.